ಯಡಿಯೂರಪ್ಪ ಮನಸ್ಸಿನಲ್ಲಿ ನಾವಿದ್ದೇವೆ: ಎಂಟಿಬಿ ನಾಗರಾಜ್
ಬೆಂಗಳೂರು, ಜನವರಿ 31: ಏನು ಮಾಡಬೇಕು ಎಂದು ಯಡಿಯೂರಪ್ಪ ತೀರ್ಮಾನ ಮಾಡಿಕೊಂಡಿದ್ದಾರೆ, ಅವರ ಮನಸ್ಸಿನಲ್ಲಿ ನಾವು ಇದ್ದೇವೆ ಅಂತಾ ಭಾವಿಸಿದ್ದೇವೆ ಎಂದು ಎಂಟಿಬಿ ನಾಗರಾಜ್ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 11 ಗೆದ್ದವರು, ಸೋತವರು, ಮೂಲ ಬಿಜೆಪಿಗರನ್ನು ಮಂತ್ರಿ ಮಾಡಬೇಕು ಈ ಎಲ್ಲಾ ಗೊಂದಲಗಳು ಇವೆ.ಗೊಂದಲ ಸರಿಪಡಿಸಿಕೊಳ್ಳದೇ ವಿಸ್ತರಣೆ ಮಾಡಲು ಆಗುವುದಿಲ್ಲ.ಗೊಂದಲದ ಮಧ್ಯೆ ವಿಸ್ತರಣೆ ಆಗುವುದಿಲ್ಲ ಎಂದರು.
ಎಲ್ಲರನ್ನೂ ಸಮಾಧಾನ ಮಾಡಬೇಕು, ಅದಕ್ಕಾಗಿ ವಿಸ್ತರಣೆ ಸ್ವಲ್ಪ ತಡ ಆಗಿದೆ.ಸೋತವರನ್ನು ಮಂತ್ರಿ ಮಾಡಬಾರದು ಅಂತಾ ಕೋರ್ಟ್ ತೀರ್ಪಿನಲ್ಲಿ ಇಲ್ಲ.ಮೇಲ್ಮನೆ ಸದಸ್ಯರನ್ನು ಮಂತ್ರಿ ಮಾಡಬಾರದು ಅಂತಾ ಏನೂ ಇಲ್ಲ.
ಒಂದು ಬಾರಿ ಸೋತರೆ ಮತ್ತೆ ಮಂತ್ರಿ ಮಾಡಿ ಆರು ತಿಂಗಳಲ್ಲಿ ಮೇಲ್ಮನೆಗೆ ಆಯ್ಕೆ ಮಾಡಬಹುದು ಎಂಬ ಅವಕಾಶ ಇದೆ.ಈ ಬಗ್ಗೆ ಕಾನೂನು ತಜ್ಞರು ಕೂಡಾ ನಮಗೆ ಮಾಹಿತಿ ನೀಡಿದ್ದಾರೆ.
ಗೆದ್ದವರಿಗೆ ಎಷ್ಟು ಪ್ರಾಮುಖ್ಯತೆ ಕೊಡ್ತಾರೋ ಸೋತವರಿಗೂ ಅಷ್ಟೇ ಪ್ರಾಮುಖ್ಯತೆ ಕೊಡಬೇಕು. ನಾವು ರಾಜೀನಾಮೆ ಕೊಟ್ಟು ಬಂದ ಮೇಲೆ ತಾನೇ ಸರ್ಕಾರ ಸ್ಥಾಪನೆ ಆಗಿದ್ದು?ಎಲ್ಲವೂ ಸರಿ ಹೋಗುವ ವಿಶ್ವಾಸವಿದೆ ಎಂದು ನುಡಿದರು.
ಸಚಿವ ಸಂಪುಟ ವಿಸ್ತರಣೆ ಆಗುತ್ತದೆ ಎಂಬ ವಿಶ್ವಾಸದಲ್ಲಿ ಇದ್ದೇನೆ,ಯಡಿಯೂರಪ್ಪ ನಮ್ಮ ನಾಯಕರು .ಅವರಿಗೆ ಎಲ್ಲಾ ವಿಚಾರಗಳು ಗೊತ್ತಿದೆ.ನಾವು ರಾಜೀನಾಮೆ ಕೊಟ್ಟು ಬಂದಾಗ ಏನೇನು ಮಾತುಕತೆ ಆಗಿದೆ ಅಂತಾ ಅವರಿಗೆ ಗೊತ್ತಿದೆ.ಏನು ಮಾಡಬೇಕು ಅಂತಾ ಸಿಎಂ ತೀರ್ಮಾನ ಮಾಡಿಕೊಂಡಿದ್ದಾರೆ.ಅವರ ಮನಸ್ಸಿನಲ್ಲಿ ನಾವು ಇದ್ದೇವೆ ಅಂತಾ ಭಾವಿಸಿದ್ದೇವೆ.