ಯುದ್ಧದ ಪರಿಣಾಮ: ವಂದೇ ಭಾರತ್ ರೈಲು ಗಾಲಿಗಳು ಬೆಂಗಳೂರಿನಲ್ಲಿಯೇ ಉತ್ಪಾದನೆ
ಬೆಂಗಳೂರು, ಮೇ 7: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಪರಿಣಾಮ ಭಾರತಕ್ಕೆ ಬರಬೇಕಿದ್ದ ವಂದೇ ಭಾರತ್ ರೈಲ್ವೇ ಚಕ್ರಗಳು ಆಮದು ಸ್ಥಗಿತಗೊಂಡಿರುವ ಹಿನ್ನೆಲೆ ಭಾರತದಲ್ಲೇ ತಯಾರು ಮಾಡಲು ರೈಲ್ವೇ ಇಲಾಖೆ ಮುಂದಾಗಿದೆ.
ಒಂದೇ ಭಾರತ್ ಯೋಜನೆಯಡಿ ಘೋಷಿಸಲಾಗಿರುವ ರೈಲುಗಳಿಗೆ ಅಗತ್ಯವಿರುವ ಚಕ್ರಗಳನ್ನು ಬೆಂಗಳೂರಿನ ಯಲಹಂಕದಲ್ಲಿರುವ ರೈಲು ಗಾಲಿ ಕಾರ್ಖಾನೆಯಲ್ಲಿ ಉತ್ಪಾದಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ರೈಲ್ವೇ ಯೋಜನೆ ಇದಾಗಿದ್ದು, ಕೇಂದ್ರ ಸರ್ಕಾರ 2022-23 ಬಜೆಟ್ ನಲ್ಲಿ ಈ ವಂದೇ ಭಾರತ್ ರೈಲ್ವೆಯನ್ನ ದಕ್ಷಿಣ ಭಾರತದಲ್ಲಿ ವಿಸ್ತರಿಸುವ ಉದ್ದೇಶದಿಂದ ವಾರ್ಷಿಕ ಬಜೆಟ್ ನಲ್ಲಿ 400 ವಂದೇ ಭಾರತ್ ರೈಲುಗಳನ್ನು ಹೊರತರುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಘೋಷಿಸಿದ್ದರು. ಸದ್ಯ ಉಕ್ರೇನ್ ಯುದ್ಧ ಪೀಡಿತ ಪ್ರದೇಶವಾಗಿರುವುದರಿಂದ ನಿಗದಿತ ಸಮಯಕ್ಕೆ ಪೂರೈಕೆಯಾಗದ ಹಿನ್ನೆಲೆ ಬೆಂಗಳೂರಿನಲ್ಲಿ ವಂದೇ ಭಾರತ್ ಚಕ್ರಗಳನ್ನು ತಯಾರಿಸಲು ನಿರ್ಧರಿಸಲಾಗಿದೆ ಮೂಲಗಳು ತಿಳಿಸಿವೆ.

16 ಬೋಗಿಗಳನ್ನ ಒಳಗೊಂಡಿರುವ ವಂದೇ ಭಾರತ್ 'ಮಿನಿ ಹೈಸ್ಪೀಡ್' ರೈಲು ಉತ್ತರ ಭಾರತದಲ್ಲಿ ಸಂಚಾರ ಮಾಡುತ್ತಿದೆ. ಇದೀಗ ಹೊಸದಾಗ ತಯಾರಾಗುತ್ತಿರುವ ರೈಲುಗಳಿಗೆ ಉಕ್ರೇನ್ ನಿಂದ ಬರಬೇಕಿದ್ದ 128 ಚಕ್ರಗಳ ಮೊದಲ ಬ್ಯಾಚ್, USD 16 ಮಿಲಿಯನ್ ವೆಚ್ಚ 36,000 ಚಕ್ರಗಳು ಉಕ್ರೇನ್ ನಿಂದ ಅದರ ನೆರೆಯ ರೊಮೇನಿಯಾಕ್ಕೆ ರಸ್ತೆಯ ಮೂಲಕ ಸಾಗಿಸಲಾಗಿದೆ. ರೊಮೇನಿಯಾಗೆ ತಲುಪಿರುವ 128 ಚಕ್ರಗಳ ಮೊದಲ ಬ್ಯಾಚ್ ಅನ್ನು ಭಾರತೀಯಾ ವಿಮಾನ ಮೂಲಕ ಭಾರತಕ್ಕೆ ತರುವ ಯೋಜನೆ ರೂಪಿಸಿಕೊಳ್ಳಲಾಗಿದೆ.
3 ವರ್ಷದಲ್ಲಿ 400 ಒಂದೇ ಭಾರತ್ ರೈಲುಗಳು
ಮೈಸೂರು ಸಂಸ್ಥಾನ ಕಾಲದಿದಲೂ ಬೆಂಗಳೂರಿನ ಯಲಹಂಕದಲ್ಲಿರುವ ರೈಲ್ವೇ ವೀಲ್ ಫ್ಯಾಕ್ಟರಿಯಲ್ಲಿ ಮಿನಿ ಹೈಸ್ಪೀಡ್ ರೈಲುಗಳಿಗೆ ಬೇಕಾದ ಚಕ್ರಗಳನ್ನ ತಯಾರು ಮಾಡಲಿದೆ. ಉಕ್ರೇನ್ ಜೊತೆಗೆ ಭಾರತ ವ್ಯವಹರಿಸುತ್ತಿದ್ದ ರಪ್ತು ಮತ್ತು ಆಮದು ಸಂಪೂರ್ಣ ಸ್ಥಗಿತಗೊಂಡಿದೆ. ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಘೋಷಿಸಿದಂತೆ ಮುಂದಿನ ಮೂರು ವರ್ಷಗಳಲ್ಲಿ 400 ವಂದೇ ಭಾರತ್ ರೈಲುಗಳನ್ನು ಹೊರತರಬೇಕಾದರೆ ರೈಲಿಗೆ ಬೇಕಾಗುವ ಸಮರ್ಪಕ ವಸ್ತುಗಳನ್ನ ಪೂರೈಸಬೇಕಾಗುತ್ತದೆ. ದಕ್ಷಿಣ ಭಾರತದಲ್ಲಿ ಈ ವಂದೇ ಭಾರತ್ ರೈಲು ಸಂಚಾರ ಕೇಂದ್ರ ಸ್ಥಾನವಾಗಿ ಬೆಂಗಳೂರು ಆಯ್ಕೆ ಸಹ ಮಾಡಲಾಗಿದೆ.
Recommended Video
ಬೆಂಗಳೂರಿನಿಂದ ಹೈದರಾಬಾದ್, ಹುಬ್ಬಳ್ಳಿ ಮತ್ತು ಕೊಚ್ಚಿಗೆ ಈ ಸೆಮಿ ಹೈಸ್ಪೀಡ್ ರೈಲುಗಳನ್ನು ಈ ಭಾಗಗಳಲ್ಲಿ ಪರಿಚಯಿಸುವ ಜೊತೆಗೆ ಈ ರೈಲುಗಳು ಕಡ್ಡಾಯವಾಗಿ ಸಂಚಾರ ಮಾಡುವ ಬಗ್ಗೆ ಚಿಂತಿಸಲಾಗಿದೆ. ವಿದ್ಯುದ್ದೀಕರಣ ಕೆಲಸ ಮುಂದುವರೆದಿದ್ದು ಮುಂದಿನ ಮಾರ್ಚ್ 2023 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಸಹ ಇದೆ. ಒಟ್ಟಾರೆ ಬೆಂಗಳೂರು ಯಲಹಂಕ ರೈಲ್ವೇ ಘಟಕಕ್ಕೆ ಮಿನಿ ಹೈಸ್ಪೀಡ್ 'ವಂದೇ ಭಾರತ್' ರೈಲ್ವೇ ಚಕ್ರ ತಯಾರು ಘಟಕ ಬಂದಿರುವುದು ಮತ್ತಷ್ಟು ಶಕ್ತಿ ತಂದಿದೆ.
-
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು?












Click it and Unblock the Notifications