ಶನಿವಾರ ವಿಶ್ವಮಾನ್ಯ ಒಕ್ಕಲಿಗ ಪ್ರಶಸ್ತಿ ಪ್ರದಾನ
ಬೆಂಗಳೂರು, ಸೆ. 12 : ವಿಶ್ವ ಒಕ್ಕಲಿಗರ ವೇದಿಕೆ ಜನಾಂಗದ ಸಂಸತ್ ಸದಸ್ಯರ ಅಭಿನಂದನಾ ಸಮಾರಂಭ ಮತ್ತು ವಿಶ್ವಮಾನ್ಯ ಒಕ್ಕಲಿಗ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸೆ.13ರ ಶನಿವಾರ ಹಮ್ಮಿಕೊಂಡಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಕೇಂದ್ರ ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕೆ.ಆರ್.ರಸ್ತೆಯಲ್ಲಿರುವ
ಕುವೆಂಪು
ಕಲಾಕ್ಷೇತ್ರದಲ್ಲಿ
ಸೆ.13ರ
ಶನಿವಾರ
ಕಾರ್ಯಕ್ರಮ
ಆಯೋಜಿಸಲಾಗಿದ್ದು,
ಬೆಳಗ್ಗೆ
11
ಗಂಟೆಗೆ
ಕಾರ್ಯಕ್ರಮದ
ಉದ್ಘಾಟನೆ
ನಡೆಯಲಿದೆ.
ಮೊದಲು
ಜನಾಂಗದ
ಸಂಸತ್
ಸದಸ್ಯರ
ಅಭಿನಂದನಾ
ಸಮಾರಂಭ
ನಡೆಯಲಿದ್ದು,
ನಂತರ
ವಿಶ್ವಮಾನ್ಯ
ಒಕ್ಕಲಿಗ
ಪ್ರಶಸ್ತಿ
ಪ್ರಧಾನ
ಮಾಡಲಾಗುತ್ತದೆ.
ಜನಾಂಗದ ಸಂಸತ್ ಸದಸ್ಯರಾದ ಶೋಭಾ ಕರಂದ್ಲಾಜೆ, ಡಿ.ಕೆ.ಸುರೇಶ್, ಮುದ್ದ ಹನುಮೇಗೌಡ, ಸಿ.ಎಸ್.ಪುಟ್ಟರಾಜು, ಪ್ರತಾಪ್ ಸಿಂಹ ಮತ್ತು ರಾಜ್ಯಸಭಾ ಸದಸ್ಯರಾದ ಪ್ರೊ.ರಾಜೀವ್ ಗೌಡ ಅವರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಗುತ್ತದೆ.
ಪ್ರಶಸ್ತಿ ಪುರಸ್ಕೃತರು : ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಡಾ.ಅಪ್ಪಾಜಿ ಗೌಡ, ಕರ್ನಾಟಕ ರಕ್ಷಣಾ ವೇದಿಯ ಅಧ್ಯಕ್ಷರಾದ ಟಿ.ಎ.ನಾರಾಯಣ ಗೌಡ, ತೋಟಗಾರಿಕಾ ಇಲಾಖೆ ನಿವೃತ್ತ ಅಪರ ನಿರ್ದೇಶಕರಾದ ಡಾ.ಚೆನ್ನಪ್ಪ ಗೌಡ, ಜಲಮಂಡಳಿ ಮುಖ್ಯ ಅಂಭಿಯಂತರಾದ ನಾರಾಯಣ, ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್, ಪ್ಯಾರಾ ಒಲಂಪಿಕ್ಸ್ನಲ್ಲಿ ಪ್ರಶಸ್ತಿ ಪಡೆದ ಎಚ್.ಎನ್.ಗಿರೀಶ್ ಅವರಿಗೆ ವಿಶ್ವಮಾನ್ಯ ಒಕ್ಕಲಿಗ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.