ಬೆಂಗಳೂರು ಸಾಹಿತ್ಯ ಉತ್ಸವದಿಂದ ಹೊರನಡೆದ ವಿಕ್ರಂ ಸಂಪತ್
ಬೆಂಗಳೂರು, ನವೆಂಬರ್ 30 : ದೇಶದಲ್ಲಿ ನಡೆಯುತ್ತಿರುವ ಅಸಹಿಷ್ಣುತೆ ಚರ್ಚೆಯ ಬಿಸಿ ಬೆಂಗಳೂರು ಸಾಹಿತ್ಯ ಉತ್ಸವಕ್ಕೂ ತಟ್ಟಿದೆ. ಕೆಲವು ಸಾಹಿತಿಗಳ ವಿರೋಧದ ಕಾರಣದಿಂದಾಗಿ ಉತ್ಸವದ ಉಸ್ತುವಾರಿಯಿಂದ ವಿಕ್ರಂ ಸಂಪತ್ ಹಿಂದೆ ಸರಿದಿದ್ದಾರೆ.
ವಿಕ್ರಂ ಸಂಪತ್ 2012ರಿಂದ ಗೆಳೆಯರ ಜತೆಗೆ ಸೇರಿ ಬೆಂಗಳೂರು ಸಾಹಿತ್ಯ ಉತ್ಸವವನ್ನು ಆಯೋಜಿಸುತ್ತಿದ್ದರು. ಸಮರ್ಥವಾಗಿ ಉತ್ಸವವನ್ನು ನಡೆಸಿದ ಖ್ಯಾತಿಯೂ ಅವರಿಗಿದೆ. 2015ನೇ ವರ್ಷದ ಸಾಹಿತ್ಯ ಉತ್ಸವ ಡಿಸೆಂಬರ್ 5 ಮತ್ತು 6ರಂದು ನಡೆಯಲಿದೆ. [ವಿಕ್ರಂ ಸಂಪತ್ ವೆಬ್ ಸೈಟ್]

ಸಾಹಿತ್ಯ ಉತ್ಸವಕ್ಕೆ ಕೆಲವು ದಿನಗಳು ಬಾಕಿ ಉಳಿದಿರುವಾಗಲೇ ವಿಕ್ರಂ ಸಂಪತ್ ಉತ್ಸವದ ಉಸ್ತುವಾರಿಯಿಂದ ಹೊರಬರುವುದಾಗಿ ಹೇಳಿದ್ದಾರೆ. 'ಉತ್ಸವದ ಎಲ್ಲ ಹೊಣೆಯಿಂದ ಹೊರ ನಡೆಯುವ ನಿರ್ಧಾರವನ್ನು ಕೈಗೊಳ್ಳುತ್ತಿದ್ದೇನೆ' ಎಂದು ಅವರು ತಿಳಿಸಿದ್ದಾರೆ. [ಪ್ರಶಸ್ತಿ ವಾಪಸ್ ನೀಡಲಿದ್ದಾರೆ ದೇವನೂರು ಮಹಾದೇವ]
ಹೊರಹೋಗುತ್ತಿರುವುದೇಕೆ? : ಅಸಹಿಷ್ಣುತೆ ವಿರೋಧಿಸಿ ದೇಶದಲ್ಲಿ ನಡೆಯುತ್ತಿರುವ ಪ್ರಶಸ್ತಿ ವಾಪಸ್ ಅಭಿಯಾನದ ಕುರಿತು ವೈಯಕ್ತಿಕ ಅಭಿಪ್ರಾಯಗಳನ್ನು ವಿಕ್ರಂ ಸಂಪತ್ ವ್ಯಕ್ತಪಡಿಸಿದ್ದರು. ಟಿಪ್ಪು ಸುಲ್ತಾನ್ ಕುರಿತು ಮತ್ತಷ್ಟು ಸಂಶೋಧನೆಗಳು ನಡೆಯಬೇಕೆಂದು ಅವರು ಲೇಖನ ಬರೆದಿದ್ದರು. [ಪ್ರಶಸ್ತಿ ವಾಪಸ್ ಕೊಟ್ಟ ಸಾಹಿತಿಗಳ ಪಟ್ಟಿ]
ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಪಾಲ್ಗೊಳ್ಳಬೇಕಾಗಿದ್ದ ಕೆಲವು ಸಾಹಿತಿಗಳು ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಬರಹಗಾರರಾದ ಆರಿಫ್ ರಾಜಾ ಮತ್ತು ಟಿ.ಕೆ.ದಯಾನಂದ್ ಮುಂತಾದವರು ಪ್ರಶಸ್ತಿ ವಾಪಸ್ ಬಗ್ಗೆ ಸಂಪತ್ ಮಂಡಿಸಿದ್ದ ಅಭಿಪ್ರಾಯಕ್ಕೆ ವಿರೋಧ ವ್ಯಕ್ತಪಡಿಸಿದ್ದರು, ಈ ಬಗ್ಗೆ ಸಂಪತ್ ಅವರಿಗೆ ಪತ್ರ ಬರೆದಿದ್ದರು. [ಕಿರಿಯ ಗೆಳೆಯ ವಿಕ್ರಮ್ ಬರೆದ ಬೃಹತ್ ಗ್ರಂಥ]
ಕೇರಳದ ಸಚ್ಚಿದಾನಂದನ್, ವಿಮರ್ಶಕ ಓ.ಎಲ್.ನಾಗಭೂಷಣಸ್ವಾಮಿ, ನಿರ್ದೇಶಕ ಗಿರೀಶ್ ಕಾಸರವಳ್ಳಿ ಮುಂತಾದವರು ವಿಕ್ರಂ ಸಂಪತ್ ಅವರ ಅಭಿಪ್ರಾಯಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು ಮತ್ತು ಸಾಹಿತ್ಯ ಉತ್ಸವವನ್ನು ಬಹಿಷ್ಕರಿಸುವುದಾಗಿ ಘೋಷಿಸಿದ್ದರು.
ಹೊರನಡೆಯಲಿರುವ ಸಂಪತ್ : ಈ ವಿವಾದಗಳಿಂದಾಗಿ ವಿಕ್ರಂ ಸಂಪತ್ ಬೆಂಗಳೂರು ಸಾಹಿತ್ಯ ಉತ್ಸವದಿಂದ ಹೊರನಡೆಯಲು ಮುಂದಾಗಿದ್ದಾರೆ. 'ಅವರ ವಿರೋಧವಿರುವುದು ನನ್ನ ವಿಚಾರಧಾರೆಯ ಬಗ್ಗೆ. ಹಾಗಾಗಿ ನಾನು ಹೊರನಡೆದ ನಂತರದಲ್ಲಿ ಅವರು ಭಾಗವಹಿಸಲು ದಾರಿ ಸುಗಮವಾಗಿದೆ ಎಂದು ಭಾವಿಸುತ್ತೇನೆ' ಎಂದು ಸಂಪತ್ ಹೇಳಿದ್ದಾರೆ.
'ನನ್ನ ವೈಯಕ್ತಿಕ ಅಭಿಪ್ರಾಯದಿಂದ ಬೃಹತ್ ಕಾರ್ಯಕ್ರಮಕ್ಕೆ ತೊಂದರೆಯಾಗುವುದು ಬೇಡ. ನನ್ನ ಜತೆಗೆ ಕಾರ್ಯನಿರ್ವಹಿಸುತ್ತಿರುವ ಪ್ರಬಲ ತಂಡ ಈ ವರ್ಷದ ಉತ್ಸವವನ್ನು ಮುನ್ನಡೆಸಲಿದೆ. ಉತ್ಸವದ ಎಲ್ಲ ಹೊಣೆಯಿಂದ ಹೊರ ನಡೆಯುವ ನಿರ್ಧಾರ ಕೈಗೊಳ್ಳುತ್ತಿದ್ದೇನೆ' ಎಂದು ಸಂಪತ್ ತಿಳಿಸಿದ್ದಾರೆ.
-
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
LPG Crisis: ಎಲ್ಪಿಜಿ ಬಿಕ್ಕಟ್ಟಿನ ಸುಳಿಯಲ್ಲಿ ಭಾರತದ ಪ್ರಮುಖ ನಗರಗಳು: ದರ್ಶಿನಿಗಳು ಬಂದ್, ಪಿಜಿಗಳಲ್ಲಿ ಮೆನು ಚೇಂಜ್ -
ಮಾರ್ಚ್ 13ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
Cylinder Shortage: ರಾಜ್ಯದಲ್ಲಿ ಅನಿಲ ಪೂರೈಕೆ ಸಮಸ್ಯೆಗೆ ಮುಕ್ತಿ? ಸಚಿವ ಮುನಿಯಪ್ಪ ಮಹತ್ವ ಮಾಹಿತಿ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ -
Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ











Click it and Unblock the Notifications