ಬೆಂಗಳೂರಿಗೆ ಬಂದು ಪಾದರಕ್ಷೆ ಕಳೆದುಕೊಂಡ ಉಪರಾಷ್ಟ್ರಪತಿ
ಬೆಂಗಳೂರು, ಜನವರಿ 19: ಸಾಮಾಜಿಕ ಆರ್ಥಿಕ ವಲಯ ಸುಧಾರಣೆ ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿದ್ದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಚಪ್ಪಲಿ ಕಳೆದುಕೊಂಡು ಚಡಪಡಿಸುಂವತಾಯಿತು.
ನಗರಕ್ಕೆ ಬಂದ ವೆಂಕಯ್ಯ ನಾಯ್ಡು ಅವರು ತಮ್ಮ ಬಹು ಕಾಲದ ಗೆಳೆಯ ಕೇಂದ್ರ ಸಂಸದ ಪಿಸಿ ಮೋಹನ್ ಅವರ ಮನೆಗೆ ಬೆಳಗಿನ ಉಪಹಾರಕ್ಕೆಂದು ತೆರಳಿದರು, ಆ ಸಮಯ ಚಪ್ಪಲಿಗಳನ್ನು ಮನೆ ಹೊರಗೆ ಬಿಟ್ಟು ಹೋಗಿದ್ದರು, ಆದರೆ ಉಪರಾಷ್ಟ್ರಪತಿಗಳು ಮರಳಿ ಬಂದಾಗ ಅವರ ಚಪ್ಪಲಿಗಳು ನಾಪತ್ತೆಯಾಗಿದ್ದವು.
ಯಾರೋ ಮಹಾನುಭಾವರು ಉಪರಾಷ್ಟ್ರಪತಿಗಳ ಚಪ್ಪಲಿಯನ್ನೇ ಧರಿಸಿ ಪಲಾಯನ ಮಾಡಿದ್ದರು. ತಮ್ಮ ಚಪ್ಪಲಿ ಕಾಣದೆ ಗಲಿಬಿಲಿಗೊಂಡ ವೆಂಕಯ್ಯ ನಾಯ್ಡು ಅವರು ಮೊದಲು ಕೆಳಗೆ ಬಿಟ್ಟಿದ್ದೇನೆಂದು ನೋಡಿ ಬಂದರು ಅಲ್ಲಿಯೂ ಚಪ್ಪಲಿ ಇರಲಿಲ್ಲ, ವೆಂಕಯ್ಯ ಅವರ ಸಹಾಯಕರು ಕಾರಿನಲ್ಲಿಯೂ ನೋಡಿದರೂ ಅಲ್ಲಿಯೂ ಚಪ್ಪಲಿ ಇರಲಿಲ್ಲ, ಕೊನೆಗೆ ಬೇರೆ ದಾರಿ ಕಾಣದೆ ಹೊಸ ಚಪ್ಪಲಿ ಕೊಂಡು ತರುವಂತೆ ಸೂಚಿಸಿ ಮತ್ತೆ ಮೇಲೆ ಹೋಗಿ ಮೋಹನ್ ಅವರ ಮನೆ ಹೊಕ್ಕರು.

ವೆಂಕಯ್ಯ ನಾಯ್ಡು ಸಹಾಯಕರು ಹತ್ತಿರದಲ್ಲೇ ಇದ್ದ ಬಾಟಾ ಶೋರೂಂಗೆ ತೆರಳಿ ಹೊಸ ಚಪ್ಪಲಿ ಖರೀದಿಸಿ ತಂದು ವೆಂಕಯ್ಯ ಅವರಿಗೆ ನೀಡುವವರೆಗೆ ಅವರು ಬರಿಗಾಲಲ್ಲಿ ಚಪ್ಪಲಿಗಾಗಿ ಕಾಯುತ್ತಾ ಇದ್ದರು.
ವೆಂಕಯ್ಯ ನಾಯ್ಡು ಅವರ ಚಪ್ಪಲಿ ಕಳೆದ ಪ್ರಕರಣ ಅಲ್ಲಿ ಹಾಜರಿದ್ದ ಬಿಜೆಪಿ ಮುಖಂಡರಿಗೂ ಇರಿಸುಮುರುಸು ಉಂಟು ಮಾಡಿತು, ಆದರೆ ಪುಣ್ಯಕ್ಕೆ ಯಾರೂ ಮಾಧ್ಯಮದವರ ಮುಂದೆ ಬಂದು ಪ್ರಕರಣವನ್ನು ಎನ್ಐಎ ತನಿಖೆಗೆ ಒತ್ತಾಯಿಸಲಿಲ್ಲ ಹಾಗೂ ವೆಂಕಯ್ಯ ನಾಯ್ಡು ಅವರ ಚಪ್ಪಲಿ ನಾಪತ್ತೆ ಹಿಂದೆ ಕಾಂಗ್ರೆಸ್ ಕೈವಾಡ (ಕಾಲುವಾಡ) ಇದೆ ಎಂದು ಆರೋಪ ಮಾಡಲಿಲ್ಲ!
-
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ











Click it and Unblock the Notifications