ಮಲ್ಲೇಶ್ವರ : ಆರ್ಯವೈಶ್ಯ ಸಂಘದಲ್ಲಿ ಮೇ 10ರಿಂದ ವಾಸವಿ ಜಯಂತಿ
ಬೆಂಗಳೂರು, ಮೇ 10: ಮಲ್ಲೇಶ್ವರಂ ಆರ್ಯವೈಶ್ಯ ಸಂಘ ಶ್ರೀ ಕನ್ಯಕಾ ಪರಮೇಶ್ವರಿ ದೇವಾಲಯದಲ್ಲಿ 85ನೇ ವಾಸವಿ ಪ್ರತಿಷ್ಠಾಪನಾ ವಾರ್ಷಿಕೋತ್ಸವ, ವಾಸವಿ ಜಯಂತಿ - ವಾಸವಿ ದರ್ಬಾರ್ ಉತ್ಸವವು ಮೇ 10ರಿಂದ ಆರಂಭಗೊಂಡಿದೆ
ನಗರದ ಮಲ್ಲೇಶ್ವರಂ 8ನೇ ಕ್ರಾಸಿನಲ್ಲಿರುವ ಶ್ರೀವಾಸವಿ ದೇವಾಸ್ಥಾನದಲ್ಲಿ ವಾಸವಿ ಜಯಂತಿ ಪ್ರಯುಕ್ತ ಮೇ 10ರಿಂದ 18 ರವರೆಗೆ ಅನೇಕ ಧಾರ್ಮಿಕ ಕೈಂಕರ್ಯ ವಿಶೇಷ ಅಲಂಕಾರಗಳು ಮತ್ತು ಆರ್ ಪಿ ರವಿಶಂಕರ್ ಸಭಾಂಗಣ, ನಿರಂತರ ಜ್ಞಾನ ಯಜ್ಞ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗಿದೆ. ಅದ್ದೂರಿಯಾಗಿ ಶ್ರೀವಾಸವಿ ಕನ್ಯಕಾ ಪರಮೇಶ್ವರಿ ಜಯಂತಿ ಆಚರಣೆಗೆ ಸಿದ್ಧತೆಗಳು ಭರದಿಂದ ಸಾಗಿದೆ.
ವಾರಾಂತ್ಯ ವಿಶೇಷ: ದೇವರಾಯನದುರ್ಗದಲ್ಲಿ ಅಪರೂಪದ ಶಿವ ದೇಗುಲ
ಬೆಂಗಳೂರಿನ ಅತ್ಯಂತ ಪುರಾತನ ಬಡಾವಣೆ ಮಲ್ಲೇಶ್ವರ 8ನೇ ಕ್ರಾಸನ ಈ ದೇಗುಲ ಸ್ಥಾಪನೆಯಾಗಿ ಅಷ್ಟದಶಮಾನಗಳು ಸಂದಿವೆ .ಕೀರ್ತಿ ಶೇಷ ಸೂತ್ರಂ ಸುಬ್ರಹಣ್ಯ ಶಾಸ್ತ್ರೀ ವಂಶಸ್ಥ ಡಾ. ವೇ. ಮೂ. ನಾಗರಾಜ ಶಾಸ್ತ್ರೀ ಮತ್ತು ಅಲಂಕಾರ ನಿಪುಣ ಡಾ ಕಿರಣ್ ಕುಮಾರ್ ರವರ ನೇತೃತ್ವದಲ್ಲಿ ವಿದ್ಯುಕ್ತ ಪೂಜಾಕೈಂಕರ್ಯಗಳು ನಡೆಸಿಕೊಂಡು ಬರಲಾಗುತ್ತಿದೆ.
ಕಾರ್ಯಕ್ರಮಗಳ
ವಿವರ
:
ಮೇ
10ರಂದು
ಅಮ್ಮನವರಿಗೆ
ಶತರುದ್ರಾಭಿಷೇಕ,
ಮಹಾಗಣಪತಿ
ಹೋಮ,
ಮಾಂಗಡ್
ಕಾಮಾಕ್ಷಿ
ಅಲಂಕಾರ,
ಉಯ್ಯಾಲೋತ್ಸವ,
ವಿದುಷಿ
ಪ್ರಭಾ
ಎಸ್
ಜ್ಯೋಯ್ಸ್
ರವರಿಂದ
ಭಕ್ತಿಗೀತೆಗಳು
ಮೇ
11ರಂದು
ಚಂಡಿಕಾಹೋಮ,
ಅನ್ನಪೂಣೇಶ್ವರಿ
ಅಲಂಕಾರ,
ವಿದ್ವಾನ್
ಕೇಶವದಾಸ
ಮೂರ್ತಿ
ರವರಿಂದ
ನಾಮ
ಸಂಕೀರ್ತನೆ
ಮೇ
12ರಂದು
ನವಗ್ರಹ
ಹೋಮ
ಸಮಯಪುರಿ
ಅಮ್ಮನವರ
ಅಲಂಕಾರ,
ವಿದುಷಿ
ಮೈಥಿಲಿ
ವರ್ಷಿಣಿ
ರವರಿಂದ
ಶಾಸ್ತ್ರೀಯ
ಸಂಗೀತ
ಮೇ
13
ರಂದು
ಬನಶಂಕರಿ
ಅಮ್ಮನವರ
ಅಲಂಕಾರ,
ಕುಮಾರಿ
ಐಶ್ವರ್ಯ
ಮಹೇಶ್,
ಕುಮಾರಿ
ಸುಪ್ರಿಯ
ರವರಿಂದ
ಗಾಯನ
ಮೇ
14ರಂದು
ವಾಸವಿ
ಜಯಂತಿ
ಪ್ರಯುಕ್ತ
ಶ್ರೀವಾಸವಾಂಬ
ಹೋಮ,
ಅಮ್ಮನವರ
ಜೊತೆ
ಅಗ್ನಿ
ಪ್ರವೇಶ
ಮಾಡಿದ
102
ಗೋತ್ರದ
ದಂಪತಿಗಳ
ಮತ್ತು
ಋಷಿವರಿಯರ
ಹೆಸರಿನಲ್ಲಿ
ದೇವಿಗೆ
ಫಲೋದಕ
ಸ್ನಾನ
ದರ್ಬಾರ್
ರಾಜಕುಮಾರಿ
ಅಲಂಕಾರ,
ಕು.
ಶ್ರೀಲಕ್ಷ್ಮೀ
ಮತ್ತು
ನಿತ್ಯಶ್ರೀ
ರವರಿಂದ
ಭರತನಾಟ್ಯ
ನಿಸರ್ಗ
ಪ್ರೇಮಿಗಳ
ಸ್ವರ್ಗ
ಹಿಮವದ್
ಗೋಪಾಲಸ್ವಾಮಿ
ಬೆಟ್ಟ
ಮೇ
15
ರಂದು
ಸತ್ಯನಾರಾಯಣಸ್ವಾಮಿ
ವ್ರತ,
ಮೀನಾಕ್ಷಿ
ಅಮ್ಮನವರ
ಅಲಂಕಾರ,
ವಿದ್ವಾನ್
ಪ್ರಶಾಂತ್
ಕುಮಾರ್
ರಾಯ್ಬಾಗ್
ರವರಿಂದ
ದಾಸರಪದಗಳು
ಮೇ
16
ನಕ್ಷತ್ರ
ಹೋಮ
ಬಾಲ
ತ್ರಿಪುರ
ಸುಂದರಿ
ಅಲಂಕಾರ,
ವಿದುಷಿ
ಸ್ನೇಹಲತಾ
ರವರಿಂದ
ಭಕ್ತಿಗೀತೆಗಳು
ಮೇ
17
ಮೃತ್ಯುಂಜಯ
ಹೋಮ
ಚಾಮುಂಡೇಶ್ವರಿ
ಅಲಂಕಾರ,
ಕುಮಾರಿ
ರಕ್ಷಾ
ಮತ್ತು
ಕು.
ಪ್ರಜ್ಞಾ
ರವರಿಂದ
ಭರತನಾಟ್ಯ
ಮೇ
18
ಸತ್ಯನಾರಾಯಣಸ್ವಾಮಿ
ಹೋಮ,
ಮೂಕಾಂಬಿಕಾ
ಅಲಂಕಾರ,
ವಿದ್ವಾನ್
ಅನಂತರಾಜು
ರವರಿಂದ
ಅನ್ನಮಯ್ಯ
ಕೀರ್ತನ
ಗಾಯನ
ಲೌಕಿಕ ಉನ್ನತ ಪದವಿಯನ್ನು ತೊರೆದು ತಾಯಿ ವಾಸವಿಯ ಸೇವೆ ಮಾಡಲೆಂದೇ ಕಂಕಣಬದ್ಧರಾಗಿ ನಿಂತ ಅರ್ಚಕರು ಇತರಿಗೆ ಮಾದರಿ, ಸೂಜಿಗಲ್ಲಿನಂತೆ ತನ್ನೆಡೆಗೆ ಸೆಳೆಯುತ್ತಿರುವ ಅಪೂರ್ವ ದೈವಸನ್ನಿಧಿಗೆ ಬರುವ ಭಕ್ತಕೋಟಿಯ ನೆಮ್ಮದಿಯ ತಾಣ ಇದಾಗಿದೆ.
ವರ್ಷದ 365 ದಿನವೂ ದೇವಿಗೆ ವೈವಿಧ್ಯಮಯ ಅಲಂಕಾರಗಳಿಂದ ಸೇವೆ ಸಲ್ಲಿಸುವ ಕಲಾ ನೈಪುಣ್ಯತೆಯು ಇತ್ತೀಚೆಗೆ ಗಿನ್ನೀಸ್ ಬುಕ್ ಆಫ್ ವರ್ಲ್ಡ್ ರೆರ್ಕಾಡ್ಸ್ ಗೆ ಸೇರ್ಪಡೆಯಾಗಿದೆ. ಕಿರಣ್ ಕುಮಾರ್ ರವರ ಅನನ್ಯ ಸಾಧನೆಯನ್ನು ಗುರುತಿಸಿ ಎರಡು ಗೌರವ ಡಾಕ್ಟರೇಟ್ ಅಲ್ಲದೇ ಅನೇಕ ಅಂತಾರಾಷ್ಷ್ರೀಯ ಗೌರವ ಪುರಸ್ಕಾರಗಳು ಇವರನ್ನು ಅರಸಿ ಬಂದಿವೆ