ಜೆಡಿಎಸ್ ವಿಧಾನ ಪರಿಷತ್ ಸದಸ್ಯರ ಹೆಗಲಿಗೆ ವಿವಿಧ ಜಿಲ್ಲೆಗಳ ಹೊಣೆ
ಬೆಂಗಳೂರು, ಡಿಸೆಂಬರ್ 26 : ವಿವಿಧ ಜಿಲ್ಲೆಯ ಜೆಡಿಎಸ್ ಜವಾಬ್ದಾರಿಯನ್ನು ಪಕ್ಷದ ವಿಧಾನಪರಿಷತ್ ಸದಸ್ಯರಿಗೆ ನೀಡಲಾಗಿದೆ. ಆಯಾ ಜಿಲ್ಲೆಯ ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡುವುದು, ವಿವಿಧ ಕಾರ್ಯಕ್ರಮಗಳ ನಿರ್ವಹಣೆಯ ಜವಾಬ್ದಾರಿ ಅವರದಾಗಿರುತ್ತದೆ ಎಂದು ಪಕ್ಷದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮಂಗಳವಾರ ಹೇಳಿದರು.
ಹೊಸ ವರ್ಷದಿಂದ ಜನವರಿ ಒಂದರಿಂದ ಶುರುವಾಗಿ ಮುಂದಿನ ವಿಧಾನಸಭಾ ಚುನಾವಣೆ ಮುಗಿಯುವವರೆಗೆ ಆಯಾ ಜಿಲ್ಲೆಯ ಪಕ್ಷದ ಜವಾಬ್ದಾರಿಯನ್ನು ಈ ವಿಧಾನ ಪರಿಷತ್ ಸದಸ್ಯರು ಹೊತ್ತಿರುತ್ತಾರೆ ಎಂದು ಅವರು ತಿಳಿಸಿದರು. ಯಾವ ಜಿಲ್ಲೆಯ ಜವಾಬ್ದಾರಿ ಯಾರಿಗೆ ನೀಡಲಾಗಿದೆ ಎಂಬುದರ ವಿವರ ಹೀಗಿದೆ.

ಕಲಬುರಗಿ- ಯಾದಗಿರಿ : ಕಾಂತರಾಜು, ಅಫ್ಸರಘಾ
ಬಾಗಲಕೋಟೆ- ವಿಜಯಪುರ : ಅಪ್ಪಾಜಿಗೌಡ
ಕೊಪ್ಪಳ- ಬಳ್ಳಾರಿ : ಶ್ರೀಕಂಠೇಗೌಡ
ಬೆಳಗಾವಿ : ಚೌಡರೆಡ್ಡಿ, ನಾರಾಯಣಸ್ವಾಮಿ
ಚಿತ್ರದುರ್ಗ-ದಾವಣಗೆರೆ- ಹಾವೇರಿ : ರಮೇಶ್ ಬಾಬು
ಹುಬ್ಬಳ್ಳಿ-ಧಾರವಾಡ- ಬೆಳಗಾವಿಯ ಕೆಲ ಭಾಗ : ಬಸವರಾಜ ಹೊರಟ್ಟಿ
ರಾಯಚೂರು : ಟಿ.ಎ.ಶರವಣ
ಉತ್ತರ ಕನ್ನಡ : ಮರಿತಿಬ್ಬೇಗೌಡ












Click it and Unblock the Notifications