Get Updates
Get notified of breaking news, exclusive insights, and must-see stories!

ಬೆಂಗಳೂರು ಹೈದರಾಬಾದ್ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್‌ ವೇಗ ಹೆಚ್ಚಳ, ವಿವರ

ಬೆಂಗಳೂರು, ಡಿಸೆಂಬರ್‌ 21: ಬೆಂಗಳೂರು ಹೈದರಾಬಾದ್‌ ನಡುವೆ ಸಂಚರಿಸುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ವೇಗ ಹೆಚ್ಚಳವಾಗಿದೆ. ಈ ರೈಲು ಇತ್ತೀಚೆಗೆ ಸಂಚರಿಸುವ ವೇಗದಲ್ಲಿ 15 ನಿಮಿಷ ಮುಂಚಿತವಾಗಿ ನಿಲ್ದಾಣವನ್ನು ತಲುಪುತ್ತಿದೆ.

ಗುರುವಾರದಿಂದ ಯಶವಂತಪುರ- ಕಾಚಿಗುಡ ವಂದೇ ಭಾರತ್ ಎಕ್ಸ್‌ಪ್ರೆಸ್ 15 ನಿಮಿಷಗಳ ಕಡಿಮೆ ಅವಧಿಯಲ್ಲಿ ತನ್ನ ಪ್ರಯಾಣವನ್ನು ಪೂರ್ಣಗೊಳಿಸಲಿದೆ. ಇದು ಹಿಂದಿನ 8 ಗಂಟೆ 30 ನಿಮಿಷಗಳಿಗಿಂತ 8 ಗಂಟೆ 15 ನಿಮಿಷಗಳಲ್ಲಿ ದೂರವನ್ನು ಮುಟ್ಟುತ್ತದೆ.

Vande Bharat Express speed increase between Bengaluru Hyderabad, details

ರೈಲು ಸಂಖ್ಯೆ 20703 ಕಾಚಿಗುಡದಿಂದ ಬೆಳಗ್ಗೆ 5.30ಕ್ಕೆ ಬದಲಾಗಿ 5.45ಕ್ಕೆ ಹೊರಟು ಮಧ್ಯಾಹ್ನ 2 ಗಂಟೆಗೆ ಯಶವಂತಪುರ ತಲುಪಲಿದೆ. ಇತರ ನಿಲುಗಡೆಗಳ ಸಮಯವು ಮಹೆಬೂಬ್‌ನಗರ (ಬೆಳಿಗ್ಗೆ 6.54/6.55), ಕರ್ನೂಲ್ ಸಿಟಿ (ಬೆಳಿಗ್ಗೆ 8.29/8.30), ಅನಂತಪುರ (ಬೆಳಿಗ್ಗೆ 10.29/10.30), ಮತ್ತು ಧರ್ಮಾವರಂ (ಬೆಳಿಗ್ಗೆ 11.14/11.15) ನಿಲುಗಡೆ ಹೊಂದಿರುತ್ತದೆ.

ರೈಲು ಸಂಖ್ಯೆ 20704 ಯಶವಂತಪುರದಿಂದ ಮಧ್ಯಾಹ್ನ 2.45 ಕ್ಕೆ ಹೊರಟು ರಾತ್ರಿ 11.15 ಕ್ಕೆ ಬದಲಾಗಿ 11 ಗಂಟೆಗೆ ಕಾಚಿಗುಡ ತಲುಪುತ್ತದೆ. ಇತರ ನಿಲುಗಡೆಗಳ ಸಮಯವು ಧರ್ಮಾವರಂ (4.39 pm/4.40 pm), ಅನಂತಪುರ (5.03 pm/5.06 pm), ಕರ್ನೂಲ್ ಸಿಟಿ (7.19 pm/7.20 pm), ಮತ್ತು ಮಹೆಬೂಬ್ನಗರ (9.04 pm/9.05 pm) ನಿಲುಗಡೆ ಹೊಂದಿರುತ್ತದೆ.

Vande Bharat Express speed increase between Bengaluru Hyderabad, details

ಕರ್ನಾಟಕಕ್ಕೆ ನಾಲ್ಕನೇ ವಂದೇ ಭಾರತ್‌:

ಡಿಸೆಂಬರ್ ಅಂತ್ಯದ ವೇಳೆಗೆ ನಾಲ್ಕನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಬೆಂಗಳೂರು ಕೊಯಮತ್ತೂರು ನಡುವೆ ಸಂಚರಿಸಲು ಸಿದ್ದವಾಗಿದೆ. ಕೆಎಸ್‌ಆರ್ ಬೆಂಗಳೂರನ್ನು ಕೊಯಮತ್ತೂರು ಜಂಕ್ಷನ್‌ನಿಂದ ಸೇಲಂ ಮೂಲಕ ಸಂಪರ್ಕಿಸುವ ರೈಲಿಗೆ ರೈಲ್ವೆ ಅಧಿಕಾರಿಗಳು ತಾತ್ಕಾಲಿಕವಾಗಿ ಅನುಮೋದನೆ ನೀಡಿದ್ದಾರೆ. ಇದು ಎಂಟು ಬೋಗಿಗಳ ರೈಲು ಸೆಟ್ ಆಗಿರುತ್ತದೆ ಎಂದು ಮೂಲಗಳು ತಿಳಿಸಿವೆ.

ರೈಲ್ವೆ ಮಂಡಳಿಯು ಎರಡು ನಗರಗಳ ನಡುವೆ ಸೆಮಿ ಹೈ ಸ್ಪೀಡ್ ಓಡಿಸುವ ಕಾರ್ಯಾಚರಣೆಯ ಕಾರ್ಯಸಾಧ್ಯತೆಯ ಬಗ್ಗೆ ವರದಿ ಕೇಳಿತ್ತು. ವರದಿಯನ್ನು ಇತ್ತೀಚೆಗೆ ಸಲ್ಲಿಸಲಾಗಿದ್ದು, ರೈಲ್ವೆ ಮಂಡಳಿಯ ಅಂತಿಮ ಅನುಮೋದನೆಗೆ ಕಾಯಲಾಗುತ್ತಿದೆ. ರೈಲ್ವೆ ಮಂಡಳಿಯು ಅನುಮೋದನೆ ನೀಡಿದ ನಂತರವೇ ಪ್ರಯಾಣ ದರ, ನಿಲುಗಡೆ ಮತ್ತು ಪ್ರಯಾಣದ ಸಮಯದ ವಿವರಗಳು ಸ್ಪಷ್ಟವಾಗುತ್ತವೆ ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ ಅತಿ ವೇಗದ ರೈಲು ಎರಡು ನಗರಗಳ ನಡುವಿನ ಅಂತರವನ್ನು ಕ್ರಮಿಸಲು 6 ಗಂಟೆ 45 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ವಂದೇ ಭಾರತಕ್ಕೆ ಸುಮಾರು ಐದು ಗಂಟೆ ತೆಗೆದುಕೊಳ್ಳಬಹುದು. ಬೆಂಗಳೂರಿನಿಂದ ಕೊಯಮತ್ತೂರಿಗೆ ಎರಡು ರೈಲು ಮಾರ್ಗಗಳಿವೆ - ಎ) ಹೊಸೂರು ಮತ್ತು ಸೇಲಂ ಮೂಲಕ (379 ಕಿಮೀ) ಮತ್ತು ಬಿ) ಕುಪ್ಪಂ ಮತ್ತು ಸೇಲಂ ಮೂಲಕ (420 ಕಿಮೀ).

ಬೆಂಗಳೂರು-ಕೊಯಮತ್ತೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಯಾವ ಮಾರ್ಗದಲ್ಲಿ ಚಲಿಸುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಕುಪ್ಪಂ ಮತ್ತು ಸೇಲಂ ಮಾರ್ಗವನ್ನು ದ್ವಿಗುಣಗೊಳಿಸಿ ವಿದ್ಯುದ್ದೀಕರಿಸಲಾಗಿದೆ, ಹೊಸೂರು ಮತ್ತು ಸೇಲಂ ಮಾರ್ಗವಾಗಿ ಏಕಾಂಗಿಯಾಗಿ ಉಳಿದಿದೆ. ಬೈಯಪ್ಪನಹಳ್ಳಿ-ಕಾರ್ಮೆಲಾರಂ ಮತ್ತು ಹೀಲಳಿಗೆ-ಹೊಸೂರು ಭಾಗಗಳನ್ನು ದ್ವಿಗುಣಗೊಳಿಸುವ ಕೆಲಸ ಇನ್ನೂ ನಡೆಯುತ್ತಿದೆ.

ಕರ್ನಾಟಕ ರೈಲ್ವೇ ವೇದಿಕೆಯ ಕೆ.ಎನ್.ಕೃಷ್ಣ ಪ್ರಸಾದ್ ಮಾತನಾಡಿ, ಬಂಗಾರಪೇಟೆ ಮತ್ತು ಕುಪ್ಪಂ ಮಾರ್ಗವಾಗಿ ವಂದೇ ಭಾರತ್ ಓಡಬೇಕು ಮತ್ತು ಕೆಆರ್ ಪುರಂ ಮತ್ತು ಬಂಗಾರಪೇಟೆಯಲ್ಲಿ ನಿಲುಗಡೆ ಮಾಡಬೇಕು. ಈ ಮಾರ್ಗವನ್ನು ದ್ವಿಗುಣಗೊಳಿಸುವುದು ಮತ್ತು ವಿದ್ಯುದ್ದೀಕರಿಸುವುದು ಮಾತ್ರವಲ್ಲದೆ, ತಿರುಪತ್ತೂರಿನ ನಂತರ ರೈಲುಗಳು ಗಂಟೆಗೆ 130 ಕಿಮೀ ವೇಗದಲ್ಲಿ ಚಲಿಸಬಹುದು ಎಂದು ಅವರು ಗಮನಿಸಿದರು. ಹೊಸೂರು-ಸೇಲಂ ಅನ್ನು ತೆಗೆದುಕೊಳ್ಳುವುದರಿಂದ ಗರಿಷ್ಠ ವೇಗವನ್ನು ಗಂಟೆಗೆ 80-100 ಕಿಮೀಗೆ ನಿರ್ಬಂಧಿಸುತ್ತದೆ ಎಂದು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+