Get Updates
Get notified of breaking news, exclusive insights, and must-see stories!

ಕೇರಳ- ಕೊಡಗು ಪ್ರವಾಹ ದುರಂತಕ್ಕೆ‌ ಮಿಡಿದ ಉತ್ತರಾಖಂಡ ಸರ್ಕಾರ!

ಬೆಂಗಳೂರು, ಆಗಸ್ಟ್ 22: ಕರ್ನಾಟಕ ಹಾಗೂ ಕೇರಳ ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ನಿಜಕ್ಕೂ ಆಘಾತಕಾರಿ. ನಮ್ಮ ರಾಜ್ಯ ಸರ್ಕಾರದ ವತಿಯಿಂದ 5 ಕೋಟಿ ರೂ. ಪರಿಹಾರ ನೀಡಿದ್ದೇವೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ತಿಳಿಸಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಹಮ್ಮಿಕೊಂಡಿದ್ದ ರೋಡ್ ಶೋನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಸರ್ಕಾರದಿಂದ ಈ ಮೊತ್ತದ ಪರಿಹಾರ ನೀಡಿದ್ದೇವೆ. ಉಳಿದಂತೆ ನಮ್ಮ ರಾಜ್ಯದ ನಾಗರಿಕರು ಕೂಡ ಪ್ರತ್ಯೇಕವಾಗಿ ಪರಿಹಾರ ಸಾಮಗ್ರಿ, ಧನ ಸಂಗ್ರಹ ಮಾಡಿದ್ದಾರೆ. ಕೆಲವನ್ನು ಅದಾಗಲೇ ಎರಡೂ ರಾಜ್ಯದ ಸಂತ್ರಸ್ತ ಪೀಡಿತ ಸ್ಥಳಕ್ಕೆ ಕಳಿಸಿಕೊಡಲಾಗಿದೆ. ಇನ್ನೂ ಒಂದಿಷ್ಟು ಪರಿಹಾರ ಸಾಮಗ್ರಿ ಕಳಿಸಿಕೊಡಲಿದ್ದೇವೆ ಎಂದರು.

ಕರ್ನಾಟಕ, ಕೇರಳದಲ್ಲಿ ಆದ ಹಾನಿ ಬಗ್ಗೆ ವಿಶಾದವಿದೆ. ನಮ್ಮಂತೆ ಪ್ರವಾಸೋದ್ಯಮ ನಂಬಿದ್ದ ಭಾಗಗಳಲ್ಲಿ ಪ್ರಕೃತಿ ವಿಕೊಪ ನಡೆದಿದ್ದು ಬೇಸರ ತಂದಿದೆ. ಈ ಭಾಗದಲ್ಲಿ ಜನರ ಹಾಗೂ ಆಧುಕತೆಯ ಅಳವಡಿಕೆಯಿಂದಾದ ಬದಲಾವಣೆಯಿಂದ ಸಮಸ್ಯೆ ಆಗಿದೆ ಎನ್ನುವ ಅರಿವಿಲ್ಲ.

Uttarakhand donates rs5 crores to Kerala and Kodagu flood relief

ನಾವು ಪ್ರಕೃತಿಗೆ ವಿರುದ್ಧವಾಗಿ ಎಲ್ಲಿಯೂ ನಡೆದುಕೊಂಡಿಲ್ಲ. ನಮ್ಮಲ್ಲಿ ಅರಣ್ಯ ಪ್ರದೇಶ ಹೆಚ್ಚಾಗುತ್ತಿದೆ. ಶೇ.65 ರಷ್ಟಿದ್ದ ಅರಣ್ಯ ಭೂಮಿ ಈಗ ಶೇ. 71ನ್ನು ದಾಟಿದೆ. ನಾವು ಅರಣ್ಯ ಪೋಷಣೆ ಜತೆಗೆ ಪ್ರವಾಸೋದ್ಯಮ ಸೇರಿದಂತೆ ಇತರೆ ಪ್ರಗತಿ ಮಾಡುತ್ತಿದ್ದೇವೆ ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+