ಕಾಮಧೇನು ರಕ್ಷಣೆಗೆ ನೀವು ಹೇಗೆ ಕೈಜೋಡಿಸಬಹುದು?
ನಾಡಿನ ಸಮಸ್ತ ಗೋಪ್ರೇಮಿಗಳು ಸೇರಿ ಗೋವಂಶವನ್ನು ಉಳಿಸಲು ಪ್ರತಿ ತಿಂಗಳು ಸ್ವ ಇಚ್ಛೆಯಿಂದ ತಮಗೆ ಹೊರೆಯಾಗದಷ್ಟು ಹಣವನ್ನು ಗೋರಕ್ಷಣೆಗಾಗಿ ಕಾಣಿಕೆ ನೀಡಬಹುದು.
ಬೆಂಗಳೂರು, ಏಪ್ರಿಲ್ 17: ಕೇಳಿದ್ದನ್ನೆಲ್ಲ ಕೊಡುವ ಕಾಮಧೇನುವಾದ ಗೋವು ಭಾರತೀಯರ ಪಾಲಿನ ಆರಾಧ್ಯ ದೈವ. ಅದಕ್ಕೆಂದೇ ಗೋವಿನಲ್ಲಿ 33 ಕೋಟಿ ದೇವತೆಗಳೂ ನೆಲೆಸಿದ್ದಾರೆ ಎಂಬ ನಂಬಿಕೆಯಿದೆ. ಆದರೆ ಇಂದು ದೇಶದ ಹಲವು ರಾಜ್ಯಗಳು ಭೀಕರ ಬರ ಎದುರಿಸುತ್ತಿರುವಾಗ, ಮೇವಿಲ್ಲದೆ ಸಾಯುತ್ತಿರುವ ಗೋವುಗಳ ಮೌನ ರೋದನ ಯಾರಿಗೆ ಕೇಳೀತು?
ಗೋವು ವಿಶ್ವದ ಮಾತೆ ಎನ್ನುವ ನಾವು, ಗೋವಿನ ರಕ್ಷಣೆಗಾಗಿ ಅಳಿಲು ಸೇವೆಯನ್ನಾದರೂ ಮಾಡುವುದಕ್ಕೆ ಸಾಧ್ಯವಿಲ್ಲವೇ? ಸಾಧ್ಯವಿದೆ ಎಂಬುದನ್ನು ತೋರಿಸುವುದಕ್ಕಾಗಿಯೇ ಗೋ ರಕ್ಷಣೆಯಲ್ಲಿ ಸದಾ ಮುಂದಿರುವ ರಾಮಚಂದ್ರಾಪುರ ಮಠ ಆನ್ ಲೈನ್ ಅಭಿಯಾನವೊಂದನ್ನು ಆರಂಭಿಸಿರುವುದನ್ನು ನೀವು ಈಗಾಗಲೇ ಒನ್ ಇಂಡಿಯಾದಲ್ಲಿ ಓದಿದ್ದೀರಿ. ಈ ಅಭಿಯಾನದಲ್ಲಿ ಭಾಗಿಯಾಗುವುದು ಹೇಗೆ? ಈ ಸೇವಾಕಾರ್ಯಕ್ಕೆ ಕೈಜೋಡಿಸುವುದು ಹೇಗೆ ಎಂಬ ಮಾಹಿತಿ ನಿಮಗಾಗಿ ಇಲ್ಲಿದೆ.
ತ್ಯಾಗೇನೈಕೇ ಅಮೃತತ್ವ ಮಾನಶುಃ ಹೀಗಂದರೆ - ಅಮೃತತ್ವ ಪ್ರಾಪ್ತಿಗೆ ಇರುವ ಒಂದೇ ಮಾನದಂಡ ಅಂದ್ರೆ ಅದು ತ್ಯಾಗ ಎಂದು. ನಾವು ಪ್ರತಿದಿನ ಮಾಡುವ ಊಟದಲ್ಲಿ, ಆಗಾಗ ಮಾಡುವ ದುಬಾರಿ ಶಾಪಿಂಗಗಳಲ್ಲಿ, ಸಂಭ್ರಮಾಚರಣೆಗಾಗಿ ದುಂದುವೆಚ್ಚ ಮಾಡುವ ಹಣದಲ್ಲಿ ಒಂದು ಸಣ್ಣ ಪಾಲನ್ನು ತ್ಯಾಗ ಮಾಡಿದರೆ ನಮ್ಮ ಜೀವಕ್ಕೇನೂ ಆಪತ್ತು ಬರುವುದಿಲ್ಲ. ಆದರೆ ಹೀಗೆ ಉಳಿಸಿದ ಹಣದಿಂದ ಮತ್ತೊಂದು ಜೀವವನ್ನು ರಕ್ಷಿಸುವುದಕ್ಕೆ ಸಾಧ್ಯ ಎನ್ನುತ್ತದೆ ಶ್ರೀಮಠ.[ಉಪವಾಸವಿರುವ ಗೋರಕ್ಷಣೆಗಾಗಿ ಒಪ್ಪೊತ್ತಿನ ಊಟ ಬಿಡಿ]

ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಅಭಿಯಾನ ಮೇವಿಲ್ಲದೆ ಸಾಯುತ್ತಿರುವ ಲಕ್ಷ ಲಕ್ಷ ಗೋವುಗಳನ್ನು ರಕ್ಷಿಸುವ ಹೊಣೆ ಹೊತ್ತಿದೆ.
ನಾಡಿನ ಸಮಸ್ತ ಗೋಪ್ರೇಮಿಗಳು ಸೇರಿ ಗೋವಂಶವನ್ನು ಉಳಿಸಲು ಪ್ರತಿ ತಿಂಗಳು ಕಿರುಕಾಣಿಕೆಯನ್ನುಸಮರ್ಪಿಸುವ ಈ ಯೋಜನೆಯಲ್ಲಿ ಯಾರು ಬೇಕಾದರೂ ಸ್ವ ಇಚ್ಛೆಯಿಂದ ತಮಗೆ ಹೊರೆಯಾಗದಷ್ಟು ಹಣವನ್ನು ಗೋರಕ್ಷಣೆಗಾಗಿ ಕಾಣಿಕೆ ನೀಡಬಹುದು. 100 ರೂ. ನಿಂದ 1000 ರೂ. ವರೆಗೂ ಕಾಣಿಕೆ ನೀಡಬಹುದು. ಒಂದು ವರ್ಷದ ಕಾಣಿಕೆಯನ್ನು ಒಟ್ಟಿಗೇ ನೀಡಬಹುದು.
ಸುಮಾರು 10,000 ದಾನಿಗಳಿಂದ ಪ್ರತಿ ತಿಂಗಳಿಗೆ ಕನಿಷ್ಠ 10 ಲಕ್ಷ ರೂ. ಸಂಗ್ರಹಿಸುವ ಗುರಿ ಮಠಕ್ಕಿದೆ.
ನೀವೂ ಕಾಣಿಕೆ ನೀಡಬಹುದು
ಕಾಮದುಘಾ ವಿಭಾಗದ ಈ ಕೆಳಗಿನ ಖಾತೆಗೆ ಪ್ರತಿ ತಿಂಗಳ 10 ನೇ ತಾರೀಖಿನ ಒಳಗೆ ಕಾಣಿಕೆ ನೀಡಬಹುದು.
ಬ್ಯಾಂಕ್ ವಿವರ: Kamadugha, A/c # 0992500101611901, IFSC: KARB0000099 Karnataka Bank, Srinagar, Bengaluru.
UPI/BHIM ಮೂಲಕವೂ ಕಾಣಿಕೆ ನೀಡಬಹುದು.
ಆನ್ ಲೈನ್ ನಲ್ಲಿ ಕಾಣಿಕೆ ನೀಡುವರು account + IFSC code ಬಳಸಬಹುದು.
ಪ್ರತಿ ಬಾರಿ ಕಾಣಿಕೆ ಸಮರ್ಪಿಸಿದ ನಂತರ ಈ ಗೂಗಲ್ ಲಿಂಕಿನಲ್ಲಿ ವಿವರಗಳನ್ನು ಅಪ್ಡೇಟ್ ಮಾಡಬೇಕಾಗುತ್ತದೆ. ತಾವು ನೀಡಿದ ದೇಣಿಗೆಗೆ ಪಾವತಿಯನ್ನೂ ಇಲ್ಲಿ ಪಡೆಯಬಹುದು.
ದಾನಿಗಳು ನೀಡುವ ಕಾಣಿಕೆಗೆ 80 ಜಿ ಅಡಿಯಲ್ಲಿ ಆದಾಯ ತೆರಿಗೆ ವಿನಾಯತಿ ದೊರಕುತ್ತದೆ.
ಈ ಅಭಿಯಾನದ ಕುರಿತು ಪ್ರತಿಯೊಬ್ಬ ಗೋಪ್ರೇಮಿಗಳೂ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಹೆಚ್ಚು ಪ್ರಚಾರ ನೀಡಿ, ಗೋ ರಕ್ಷಣೆಗೆ ಪಣತೋಡಬೇಕು ಎಂದು ರಾಮಚಂದ್ರಾಪುರ ಮಠದ ಭಕ್ತರು ಕೋರಿದ್ದಾರೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications