ಬೆಂಗಳೂರು : ಸೋಮೇಶ್ವರ ಜಾತ್ರೆ, ಸಂಚಾರ ಬದಲಾವಣೆ
ಬೆಂಗಳೂರು, ಏ.10 : ಹಲಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಸೋಮೇಶ್ವರ ಸ್ವಾಮಿ ದೇವಾಲಯದ ಶ್ರೀ ಕಾಮಾಕ್ಷಾಂಬಾ ಅಮ್ಮನ ಹೂವಿನ ಪಲ್ಲಕ್ಕಿ ಉತ್ಸವವಿರುವುದರಿಂದ ವಾಹನ ಸಂಚಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.
ಬೆಂಗಳೂರು ಸಂಚಾರಿ ಪೊಲೀಸರು ಈ ಕುರಿತು ಪ್ರಕಟಣೆ ಹೊರಡಿಸಿದ್ದಾರೆ. ಈ ಸಂಚಾರ ಮಾರ್ಗ ಬದಲಾವಣೆ ಏ.11ರ ಶನಿವಾರ ಮತ್ತು ಏ.12ರ ಭಾನುವಾರ ಜಾರಿಯಲ್ಲಿರುತ್ತದೆ. ವಾಹನ ಸವಾರರು ಮತ್ತು ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ. [ದೊಮ್ಮಲೂರಿನ ಚೊಕ್ಕನಾಥಸ್ವಾಮಿ ಬಗ್ಗೆ ತಿಳಿಯಿರಿ]

ಎಲ್ಲಿ ಸಂಚಾರ ನಿಷೇಧ : ಟ್ರೀನಿಟಿ ಜಂಕ್ಷನ್ನಿಂದ ಆಂಜನೇಯ ಸ್ವಾಮಿ ಜಂಕ್ಷನ್ ಮತ್ತು ಆಂಜನೇಯ ಸ್ವಾಮಿ ಜಂಕ್ಷನ್ನಿಂದ ಟ್ರೀನಿಟಿ ಜಂಕ್ಷನ್ವರೆಗಿನ ರಸ್ತೆಯ ಎರಡು ಬದಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. [ಪ್ರೀಪೇಯ್ಡ್ ಆಟೋ ಕೌಂಟರ್ ಆರಂಭ]
ಬದಲಿ ಮಾರ್ಗಗಳು
* ಹಳೆ ಮದ್ರಾಸ್ ರಸ್ತೆ ಕಡೆಗೆ ಹೋಗುವ ವಾಹನಗಳು ಟ್ರೀನಿಟಿ ಜಂಕ್ಷನ್ನಿಂದ ಎಡತಿರುವು ಪಡೆದು ಗುರುದ್ವಾರ ಜಂಕ್ಷನ್ ಮೂಲಕ ಮುಂದೆ ಸಾಗಬಹುದು.
* ಇಂದಿರಾನಗರ ಕಡೆಗೆ ಹೋಗುವ ವಾಹನಗಳು ಟ್ರೀನಿಟಿ ಜಂಕ್ಷನ್ನಲ್ಲಿ ಬಲ ತಿರುವು ಪಡೆದು ಹಳೆ ವಿಮಾನ ನಿಲ್ದಾಣ ರಸ್ತೆ ಮತ್ತು ಕೇಂಬ್ರಿಡ್ಜ್ ರಸ್ತೆಯ ಮುಂಖಾತರ ಮುಂದೆ ಸಾಗಬಹುದು.












Click it and Unblock the Notifications