Get Updates
Get notified of breaking news, exclusive insights, and must-see stories!

ಬೆಂಗಳೂರು : ಸೋಮೇಶ್ವರ ಜಾತ್ರೆ, ಸಂಚಾರ ಬದಲಾವಣೆ

ಬೆಂಗಳೂರು, ಏ.10 : ಹಲಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಸೋಮೇಶ್ವರ ಸ್ವಾಮಿ ದೇವಾಲಯದ ಶ್ರೀ ಕಾಮಾಕ್ಷಾಂಬಾ ಅಮ್ಮನ ಹೂವಿನ ಪಲ್ಲಕ್ಕಿ ಉತ್ಸವವಿರುವುದರಿಂದ ವಾಹನ ಸಂಚಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.

ಬೆಂಗಳೂರು ಸಂಚಾರಿ ಪೊಲೀಸರು ಈ ಕುರಿತು ಪ್ರಕಟಣೆ ಹೊರಡಿಸಿದ್ದಾರೆ. ಈ ಸಂಚಾರ ಮಾರ್ಗ ಬದಲಾವಣೆ ಏ.11ರ ಶನಿವಾರ ಮತ್ತು ಏ.12ರ ಭಾನುವಾರ ಜಾರಿಯಲ್ಲಿರುತ್ತದೆ. ವಾಹನ ಸವಾರರು ಮತ್ತು ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ. [ದೊಮ್ಮಲೂರಿನ ಚೊಕ್ಕನಾಥಸ್ವಾಮಿ ಬಗ್ಗೆ ತಿಳಿಯಿರಿ]

Traffic

ಎಲ್ಲಿ ಸಂಚಾರ ನಿಷೇಧ : ಟ್ರೀನಿಟಿ ಜಂಕ್ಷನ್‌ನಿಂದ ಆಂಜನೇಯ ಸ್ವಾಮಿ ಜಂಕ್ಷನ್ ಮತ್ತು ಆಂಜನೇಯ ಸ್ವಾಮಿ ಜಂಕ್ಷನ್‌ನಿಂದ ಟ್ರೀನಿಟಿ ಜಂಕ್ಷನ್‌ವರೆಗಿನ ರಸ್ತೆಯ ಎರಡು ಬದಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. [ಪ್ರೀಪೇಯ್ಡ್ ಆಟೋ ಕೌಂಟರ್ ಆರಂಭ]

ಬದಲಿ ಮಾರ್ಗಗಳು

* ಹಳೆ ಮದ್ರಾಸ್ ರಸ್ತೆ ಕಡೆಗೆ ಹೋಗುವ ವಾಹನಗಳು ಟ್ರೀನಿಟಿ ಜಂಕ್ಷನ್‌ನಿಂದ ಎಡತಿರುವು ಪಡೆದು ಗುರುದ್ವಾರ ಜಂಕ್ಷನ್ ಮೂಲಕ ಮುಂದೆ ಸಾಗಬಹುದು.

* ಇಂದಿರಾನಗರ ಕಡೆಗೆ ಹೋಗುವ ವಾಹನಗಳು ಟ್ರೀನಿಟಿ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಹಳೆ ವಿಮಾನ ನಿಲ್ದಾಣ ರಸ್ತೆ ಮತ್ತು ಕೇಂಬ್ರಿಡ್ಜ್ ರಸ್ತೆಯ ಮುಂಖಾತರ ಮುಂದೆ ಸಾಗಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+