ವನ್ಯಜೀವಿ ಪ್ರಿಯರಿಗೊಂದು ಸಿಹಿಸುದ್ದಿ ಸಫಾರಿ ಇನ್ನುಮುಂದೆ ಅಗ್ಗ!
ಬೆಂಗಳೂರು, ನವೆಂಬರ್ 15 : ಕರ್ನಾಟಕದಲ್ಲಿರುವ ಹುಲಿ ಸಂರಕ್ಷಿತ ಪ್ರದೇಶ, ವನ್ಯಧಾನ ಮತ್ತು ಅಭಯಾರಣ್ಯಗಳಲ್ಲಿ ಸಫಾರಿ ಇನ್ನುಮುಂದೆ ಅಗ್ಗವಾಗಲಿದೆ. ಪ್ರಾಣಿಗಳ ಚಿತ್ರಗಳನ್ನು ತೆಗೆಯಲು ತಗುಲುವ ವೆಚ್ಚ ಕೂಡ ಕಡಿಮೆಯಾಗಲಿದೆ.
ಬಂಡೀಪುರ, ಕಾಳಿ, ಭದ್ರ, ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನ, ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ ಈ 5 ಹುಲಿ ಸಂರಕ್ಷಿತ ಪ್ರದೇಶಗಳಿಗೆ ವ್ಯಕ್ತಿಗೆ 250ರೂ. ಪ್ರವೇಶ ಶುಲ್ಕವನ್ನು ನಿರ್ಧರಿಸಲಾಗಿದೆ.
ರಾಷ್ಟ್ರೀಯ ಉದ್ಯಾನ, ವನ್ಯಧಾಮಗಳಾಗಿರುವ ಬನ್ನೇರುಘಟ್ಟ, ಕುದುರೇಮುಖ, ಕಾವೇರಿ ವನ್ಯಧಾಮಗಳಿಗೆ ವ್ಯಕ್ತಿಗೆ 150ರೂ ಶುಲ್ಕವನ್ನು ಇರಿಸಲಾಗಿದೆ.

ಈ ತಿಂಗಳಿನಿಂದಲೇ ಇವೆಲ್ಲಾ ಶುಲ್ಕವು ಅನ್ವಯವಾಗಲಿದೆ. ಸಫಾರಿ ಹಾಗೂ ಕ್ಯಾಮರಾಗಳನ್ನು ತೆಗೆದುಕೊಂಡು ಹೋಗಲು ನೀಡಬೇಕಾದ ಶುಲ್ಕವನ್ನು ಅಕ್ಟೋಬರ್ ನಲ್ಲಿ ಪರಿಷ್ಕರಿಸಲಾಗಿತ್ತು. ಆದರೆ ಹೆಚ್ಚಿಸಲಾದ ಹಣವನ್ನು ಪಾವತಿಸಲು ಸಾಧ್ಯವಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.
ನವೆಂಬರ್ 1ರಿಂದ ಬಂಡೀಪುರ ಸಫಾರಿ ದುಬಾರಿ
ಹಾಗಾಗಿ ಈಗ ನವೆಂಬರ್ ನಲ್ಲಿ ಮತ್ತೊಮ್ಮೆ ದರವನ್ನು ಪರಿಷ್ಕರಿಸಲಾಗಿದೆ. ಸಫಾರಿಗೆ ಈಗಾಗಲೇ 300ರೂ ನಿಗದಿಪಡಿಸಲಾಗಿತ್ತು ಆದರೆ ಈ ಪರಿಷ್ಕರಣೆ ನಂತರ 100ರೂ.ಗೆ ಇಳಿಕೆ ಮಾಡಲಾಗಿದೆ. ನಾಗರಹೊಳೆ ಹೊರತು ಪಡಿಸಿ ಉಳಿದ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಕೇವಲ 50 ಶುಲ್ಕವನ್ನು ನೀಡಿ ಪ್ರಾಣಿಗಳನ್ನು ಹತ್ತಿರದಿಂದ ವೀಕ್ಷಿಸಬಹುದಾಗಿದೆ.
ಈ ಶುಲ್ಕವು ಕೇವಲ ಇಲಾಖೆಯ ವಾಹನಗಳಲ್ಲಿ ತೆರಳುವವರಿಗೆ ಅನ್ವಯವಾಗಲಿದೆ. ಪ್ರತಿ ಎರಡು ಅಥವಾ ಮೂರು ತಿಂಗಳಿಗೊಮ್ಮೆ ನಾಗರಹೊಳೆ, ಬಂಡೀಪುರಗಳಿಗೆ ಕುಟುಂಬದೊಂದಿಗೆ ಬರುವವರಿಗೆ ಪ್ರತಿ ವ್ಯಕ್ತಿಗೆ ೩೦೦ರೂ. ಪಾವತಿಸಲು ಕಷ್ಟವಾಗುತ್ತಿತ್ತು. ಆದರೆ ಈಗ ಶೇ.50ರಷ್ಟು ಶುಲ್ಕವನ್ನು ಕಡಿಮೆ ಮಾಡಲಾಗಿದೆ.
ಕೇವಲ 200ರೂ ನೀಡಿ 70 ಎಂಎಂ ವರೆಗಿನ ಕ್ಯಾಮೆರಾಗಳನ್ನು ತೆಗೆದುಕೊಂಡು ಹೋಗಬಹುದು. ಬಂಡೀಪುರ ನಾಗರಹೊಳೆಗಳಲ್ಲಿ ಸಫಾರಿ ಮಾಡಲು ಸ್ವಂತ ಜೀಪು ಅಥವಾ ಕಾರುಗಳಲ್ಲಿ ತೆರಳಲು ಒಂದು ಟ್ರಿಪ್ ಗೆ 1,100ರೂ. ನೀಡಬೇಕಾಗುತ್ತದೆ. ಇನ್ನು ಬಸ್ ಗಳಲ್ಲಿ ತೆರಳಲು 1650 ರಿಂದ 2750ರೂ.ಗಳನ್ನು ಶುಲ್ಕವನ್ನು ಪಾವತಿಸಬೇಕಾಗಿದೆ.
ಪ್ರವೇಶ ಶುಲ್ಕ ಹುಲಿ ಸಂರಕ್ಷಿತ ಪ್ರದೇಶ 250 ರೂ.
ಪ್ರವೇಶ ಶುಲ್ಕ ರಾಷ್ಟ್ರೀಯ ಉದ್ಯಾನ, ಅಭಯಾರಣ್ಯಗಳು 150ರೂ.
ಇನ್ನಿತರೆ ಪಕ್ಷಿಧಾಮಗಳು 25ರೂ.
ಸಫಾರಿ ಇಲಾಖೆ ವಾಹನಗಳು ವಯಸ್ಕರಿಗೆ 100, ಮಕ್ಕಳಿಗೆ 50
ಸಫಾರಿ ಇಲಾಖೆ ಜೀಪುಗಳು 200ರೂ.
ಕ್ಯಾಮರಾ ಶುಲ್ಕ 70 ಎಂಎಂವರೆಗೆ 200ರೂ.
ಕ್ಯಾಮೆರಾ ಶುಲ್ಕ 70 ಎಂಎಂನಿಂದ 200 ಎಂಎಂವರೆಗೆ 400ರೂ.
-
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು












Click it and Unblock the Notifications