ಬೆಂಗಳೂರಿನ ಟ್ರಾಫಿಕ್ ಕಡಿಮೆ ಮಾಡಲು ಮೂರು ಹೊಸ ಮೆಟ್ರೋ ಕಾರಿಡಾರ್, ಇಲ್ಲಿದೆ ವಿವರ
ಬೆಂಗಳೂರು, ಸೆಪ್ಟೆಂಬರ್ 24: ಕರ್ನಾಟಕ ಸರ್ಕಾರ ಮತ್ತು ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ (ಎಫ್ಐಸಿಸಿಐ) ಇತ್ತೀಚೆಗೆ ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಪರಿಹರಿಸಲು ಹಲವಾರು ಕ್ರಮಗಳನ್ನು ಸೂಚಿಸುವ ವರದಿಯನ್ನು ಬಿಡುಗಡೆ ಮಾಡಿದೆ.
ಇದರಲ್ಲಿ ಬೆಂಗಳೂರಿನಲ್ಲಿ ಮೂರು ಹೊಸ ಮೆಟ್ರೋ ಕಾರಿಡಾರ್ಗಳ ನಿರ್ಮಾಣವು ಪ್ರಸ್ತಾವಿತ ಕ್ರಮಗಳಲ್ಲಿ ಒಂದಾಗಿದೆ. ಅವುಗಳೆಂದರೆ ಹಳೆ ವಿಮಾನ ನಿಲ್ದಾಣ ರಸ್ತೆ - MG ರಸ್ತೆಯಿಂದ ಮಾರತಹಳ್ಳಿ ಮತ್ತು ವೈಟ್ಫೀಲ್ಡ್ ಮಾರ್ಗ, ಹಳೆ ಮದ್ರಾಸ್ ರಸ್ತೆ - KR ಪುರಂನಿಂದ ಹೊಸಕೋಟೆ, ಇನ್ನರ್ ರಿಂಗ್ ಮಾರ್ಗದಲ್ಲಿ ಓಡಿಸಲು ಚಿಂತನೆ ನಡೆಸಲಾಗಿದೆ.

ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿನ ಮೊದಲ ಕಾರಿಡಾರ್ ನಗರದ ಐಟಿ ಕಾರಿಡಾರ್ನಲ್ಲಿ ಸಂಪರ್ಕವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಇದು ವೈಟ್ಫೀಲ್ಡ್ ಪ್ರದೇಶಕ್ಕೆ ಹೆಚ್ಚಿನ ಸಾರ್ವಜನಿಕ ಸಾರಿಗೆ ಅನುಕೂಲ ನೀಡುತ್ತದೆ. ಹಳೆ ಮದ್ರಾಸ್ ರಸ್ತೆಯಲ್ಲಿ ಎರಡನೇ ಕಾರಿಡಾರ್ ನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಸಂಪರ್ಕವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.
"ಪ್ರಸ್ತಾವಿತ ಮೆಟ್ರೋ ಮಾರ್ಗ ಉದ್ದೇಶವು 2032 ರ ವೇಳೆಗೆ ಬೆಂಗಳೂರಿನ ಪ್ರತಿಯೊಬ್ಬ ನಾಗರಿಕರಿಗೆ ಅವರ ಕೆಲಸದ ಸ್ಥಳ ಅಥವಾ ನಿವಾಸದ ಒಂದರಿಂದ ಎರಡು ಕಿಲೋಮೀಟರ್ ಒಳಗೆ ಮೆಟ್ರೋ ಪ್ರವೇಶವನ್ನು ಒದಗಿಸುವುದಾಗಿದೆ" ಎಂದು ವರದಿ ಹೇಳಿದೆ.
ಬಿಜೆಪಿ ನೇತೃತ್ವದ ಕರ್ನಾಟಕ ಸರ್ಕಾರವು ಮಾರ್ಚ್ 2023 ರಲ್ಲಿ ರೂಪಿಸಿದ ಕ್ರಿಯಾ ಯೋಜನೆಯಲ್ಲಿ ಈ ಗುರಿಯನ್ನು ಮೊದಲೇ ಹೇಳಲಾಗಿತ್ತು. 2032 ರ ವೇಳೆಗೆ ಈ ಮಾರ್ಗಗಳ ಕೆಲಸವನ್ನು ಪೂರ್ಣಗೊಳಿಸುವ ಆಲೋಚನೆಯೊಂದಿಗೆ ಎರಡು ಹೊಸ ಮೆಟ್ರೋ ಕಾರಿಡಾರ್ಗಳ ಕಲ್ಪನೆಯನ್ನು ಮಾಡಲಾಯಿತು. ಅವುಗಳಲ್ಲಿ ಒಂದನ್ನು, ಹಳೆಯ ವಿಮಾನ ನಿಲ್ದಾಣ ರಸ್ತೆಯ ಉದ್ದಕ್ಕೂ ಹೊಸ FICCI ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇನ್ನೊಂದು ಥಣಿಸಂದ್ರ ಭಾರತೀಯ ಸಿಟಿ ಮೂಲಕ 25 ಕಿಮೀ ಉದ್ದದ ನಾಗವಾರ - ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹೊರಗಿಡಲಾಗಿದೆ.
ಬೆಂಗಳೂರು ಪ್ರಸ್ತುತ 56 ಕಿಮೀ ದೂರದ ಮೆಟ್ರೋ ರೈಲು ಜಾಲವನ್ನು ಹೊಂದಿದೆ. ನೇರಳೆ ಮಾರ್ಗವು ನೈಋತ್ಯದಲ್ಲಿ ಕೆಂಗೇರಿಯನ್ನು ಪೂರ್ವದಲ್ಲಿ ಬೈಯಪ್ಪನಹಳ್ಳಿಯೊಂದಿಗೆ ಸಂಪರ್ಕಿಸುತ್ತದೆ. ಹಸಿರು ಮಾರ್ಗವು ವಾಯುವ್ಯದಲ್ಲಿರುವ ನಾಗಸಂದ್ರವನ್ನು ನೈಋತ್ಯದಲ್ಲಿ ಸಿಲ್ಕ್ ಇನ್ಸ್ಟಿಟ್ಯೂಟ್ಗೆ ಸಂಪರ್ಕಿಸುತ್ತದೆ.
ಬೆಂಗಳೂರಿನ ಮಧ್ಯ ಭಾಗಗಳನ್ನು ವೈಟ್ಫೀಲ್ಡ್ಗೆ ಸಂಪರ್ಕಿಸುವ ಕೆಆರ್ ಪುರಂ ಮತ್ತು ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣಗಳ ನಡುವಿನ ನೇರಳೆ ಮಾರ್ಗವು ಮಿಸ್ಸಿಂಗ್ ಲಿಂಕ್ ಶೀಘ್ರದಲ್ಲೇ ಕಾರ್ಯನಿರ್ವಹಿಸಲಿದೆ. ಮಿಸ್ಸಿಂಗ್ ಲಿಂಕ್ ಪೂರ್ಣಗೊಂಡ ನಂತರ ನಗರದ ಮೆಟ್ರೋದಲ್ಲಿ ದಿನಕ್ಕೆ 75,000 ರಿಂದ 1 ಲಕ್ಷದವರೆಗೆ ಜನಸಂದಣಿ ಹೆಚ್ಚಾಗಬಹುದು ಎಂದು ಬೆಂಗಳೂರು ಮೆಟ್ರೋ ಅಧಿಕಾರಿಗಳು ಭಾವಿಸಿದ್ದಾರೆ.
ಸೆಪ್ಟೆಂಬರ್ ಅಂತ್ಯದ ವೇಳೆಗೆ ಇದು ಕಾರ್ಯಾರಂಭ ಮಾಡಲಿದೆ ಎಂದು ಮೊದಲೇ ಹೇಳಲಾಗಿದ್ದರೂ, ಮೆಟ್ರೋ ರೈಲು ಸುರಕ್ಷತಾ ಆಯುಕ್ತರಿಂದ (ಸಿಎಂಆರ್ಎಸ್) ಇನ್ನೂ ಪರಿಶೀಲನೆಗಳು ಪೂರ್ಣಗೊಳ್ಳಬೇಕಿದೆ ಮತ್ತು ಅಕ್ಟೋಬರ್ನಲ್ಲಿ ಮಾತ್ರ ಈ ಮಾರ್ಗವು ಕಾರ್ಯನಿರ್ವಹಿಸಲಿದೆ ಎಂದು ತಿಳಿಸಲಾಗಿದೆ.












Click it and Unblock the Notifications