ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಮಿಳುನಾಡಿನ ತಿರುಮುಗನ್ ಗಾಂಧಿ ಬೆಂಗಳೂರಲ್ಲಿ ಬಂಧನ

By Gururaj
|
Google Oneindia Kannada News

ಬೆಂಗಳೂರು, ಆಗಸ್ಟ್ 09 : ತಮಿಳುನಾಡು ಮೂಲದ ಮಾನವ ಹಕ್ಕು ಹೋರಾಟಗಾರ ತಿರುಮುಗನ್ ಗಾಂಧಿ ಬಂಧಿಸಲಾಗಿದೆ. ತಮಿಳುನಾಡು ಪೊಲೀಸರು ಗಾಂಧಿ ಬಂಧನಕ್ಕೆ ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದರು.

ಗುರುವಾರ ಬೆಳಗ್ಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಿರುಮುಗನ್ ಗಾಂಧಿ ಬಂಧಿಸಲಾಗಿದೆ. ತೂತುಕುಡಿಯಲ್ಲಿ ಸ್ಟರ್‌ಲೈಟ್‌ ಕೈಗಾರಿಕಾ ಘಟಕವನ್ನು ಮುಚ್ಚುವಂತೆ ನಡೆದ ಪ್ರತಿಭಟನೆ ವೇಳೆ ಕೊಲೆ ಮಾಡಿರುವ ಆರೋಪವೂ ತಿರುಮುಗನ್ ಗಾಂಧಿ ವಿರುದ್ಧ ಇದೆ.

ತೂತುಕುಡಿ ಹಿಂಸಾಚಾರ, ಬಂದ್ ಕರೆತೂತುಕುಡಿ ಹಿಂಸಾಚಾರ, ಬಂದ್ ಕರೆ

ತಮಿಳುನಾಡು ಪೊಲೀಸರು ತಿರುಮುಗನ್ ಗಾಂಧಿ ಬಂಧನಕ್ಕಾಗಿ ಲುಕ್‌ ಔಟ್ ನೋಟಿಸ್ ಜಾರಿ ಮಾಡಿದ್ದರು. ಯುರೋಪ್‌ನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ತಿರುಮುಗನ್ ಗಾಂಧಿಯನ್ನು ಪೊಲೀಸರು ಬಂಧಿಸಿದರು.

Thirumurugan Gandhi arrested in Bengaluru airport

ಜಿನೀವಾಕ್ಕೆ ಪ್ರಯಾಣ ಬೆಳೆಸಿದ್ದ ತಿರುಮುಗನ್ ಗಾಂಧಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ತೂತುಕುಡಿಯಲ್ಲಿ 2018ರ ಮೇ ನಲ್ಲಿ ನಡೆದ ಪ್ರತಿಭಟನೆ ಬಗ್ಗೆ ಅಲ್ಲಿ ಮಾತನಾಡಿದ್ದರು.

ಕಾರ್ಖಾನೆ ಮುಚ್ಚಲು ಆಗ್ರಹಿಸಿ ಪ್ರತಿಭಟನೆ: ತೂತುಕುಡಿ ಉದ್ವಿಗ್ನ, 8 ಸಾವುಕಾರ್ಖಾನೆ ಮುಚ್ಚಲು ಆಗ್ರಹಿಸಿ ಪ್ರತಿಭಟನೆ: ತೂತುಕುಡಿ ಉದ್ವಿಗ್ನ, 8 ಸಾವು

ತಿರುಮುಗನ್ ಗಾಂಧಿ ವಿರುದ್ಧ 2017ರಲ್ಲಿ ತಮಿಳುನಾಡು ಪೊಲೀಸರು ಗೂಂಡಾ ಕಾಯ್ದೆ ಹಾಕಿದ್ದರು. ತಮಿಳುನಾಡು ಪೊಲೀಸರು ತಿರುಮುಗನ್ ಗಾಂಧಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ತಮ್ಮ ವಶಕ್ಕೆ ಪಡೆಯುವ ಸಾಧ್ಯತೆ ಇದೆ.

ಮೇ ತಿಂಗಳಿನಲ್ಲಿ ತಮಿಳುನಾಡಿನ ತೂತುಕುಡಿಯಲ್ಲಿ ತಾಮ್ರ ಘಟಕ ಮುಚ್ಚುವಂತೆ ಆಗ್ರಹಿಸಿ ರೈತರು ಬೃಹತ್ ಪ್ರತಿಭಟನೆ ನಡಸಿದ್ದರು. ಪ್ರತಿಭಟನೆ ಹಿಂಸಾರೂಪ ಪಡೆದಾಗ ಪೊಲೀಸರು ಗೋಲಿಬಾರ್ ನಡೆಸಿದ್ದರು. 12 ರೈತರು ಈ ವೇಳೆ ಮೃತಪಟ್ಟಿದ್ದರು.

ಅಂತಿಮವಾಗಿ ಮುಖ್ಯಮಂತ್ರಿ ಪಳನಿಸ್ವಾಮಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೂತುಕುಡಿಯ ತಾಮ್ರ ಘಟಕ ಮುಚ್ಚಲು ತೀರ್ಮಾನ ಕೈಗೊಳ್ಳಲಾಗಿತ್ತು.

English summary
Tamilnadu based Human rights activist Thirumurugan Gandhi has been arrested at the Kempegowda International Airport, Bengaluru on Thursday morning. Tamilnadu police issued lookout notice for Thirumurugan Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X