ಬೆಂಗಳೂರು ಜಲಮಂಡಳಿಯ ಹೊಸ ತಂತ್ರಜ್ಞಾನ: ಹಣ ಉಳಿತಾಯ, ನಾಗರಿಕ ತೊಂದರೆಗಳಿಗೆ ಮುಕ್ತಿ..BWSSB
ಬೆಂಗಳೂರು, ಡಿಸೆಂಬರ್ 16: ರಾಜಧಾನಿ ಬೆಂಗಳೂರಿಗೆ ಕುಡಿಯುವ ನೀರು ಸರಬರಾಜು ಮಾಡುವ ಪೈಪ್ಲೈನ್ ನಿರ್ವಹಣೆಗೆಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಅಳವಡಿಸಿಕೊಂಡ ಅತ್ಯಾಧುನಿಕ 'ರೋಬೋಟಿಕ್ ಇನ್ಸ್ಪೆಕ್ಷನ್ ತಂತ್ರಜ್ಞಾನ' ಕ್ರಾಂತಿಕಾರಿ ಬದಲಾವಣೆ ಮಾಡಿದೆ. ಇದರಿಂದ ನಗರದಲ್ಲಿ ಉಂಟಾಗುತ್ತಿದ್ದ ಹಲವಾರು ಸಮಸ್ಯೆಗಳಿಗೆ ಕಡವಾಣ ಬಿದ್ದಂತಾಗಿದೆ.
ಇದೇ ವರ್ಷ 2025ರ ನವೆಂಬರ್ 12ನಲ್ಲಿ ಈ ತಂತ್ರಜ್ಞಾನದ ಬಳಕೆ ಜಾರಿಗೆ ತರಲಾಯಿತು. ನೀರು ಪೂರೈಕೆಯ ನೆಲದಾಳದ ಪೈಪ್ಲೈನ್ ನಲ್ಲಿನ ಸಮಸ್ಯೆಗಳನ್ನು ಅತ್ಯಂತ ನಿಖರವಾಗಿ ಗುರುತಿಸಲು ಸಾಧ್ಯವಾಗಿಸಿದೆ. ತಂತ್ರಜ್ಞಾನದ ಸಹಾಯದಿಂದ 38 ಸ್ಥಳಗಳಲ್ಲಿ ರಸ್ತೆ ಅಗೆದು ದುರಸ್ತಿಪಡಿಸುವುದನ್ನು ತಪ್ಪಿಸಿದೆ. ಇದರಿಂದ ಜಲಮಂಡಳಿಗೆ ಖರ್ಚಾಗುತ್ತಿದ್ದ ಲಕ್ಷಾಂತರ ರೂಪಾಯಿ ಹಣ ಉಳಿತಾಯವಾಗಿದೆ.

ಇನ್ನೂ ಈ ತಂತ್ರಜ್ಞಾನದಿಂದ ದೋಷ ಪತ್ತೆ ಬೇಗ ಆಗುವುದು ಮಾತ್ರವಲ್ಲ, ರಸ್ತೆ ಅಗೆತದಿಂದ ನಾಗರಿಕರಿಗೆ ಎದುರಾಗುತ್ತಿದ್ದ ಸಮಸ್ಯೆಗಳು ತಪ್ಪುತ್ತವೆ. ರಸ್ತೆ ಅಗೆತದಿಂದ ಆಗುವ ಸಂಚಾರ ದಟ್ಟಣೆ, ಧೂಳು ಮತ್ತು ಶಬ್ದ ಮಾಲಿನ್ಯದಿಂದ ನಾಗರಿಕರಿಗೆ ಮುಕ್ತಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಉಳಿಯುವ ಸಾರ್ವಜನಿಕ ಹಣ ಇತರ ಕಾರ್ಯಗಳಿಗೆ ಬಳಕೆ ಮಾಡಲು ಸಾಧ್ಯವಾಗುತ್ತದೆ.
ನಿಖರ ಕಾರ್ಯಾಚರಣೆ, ಸಮಸ್ಯೆಗಳಿಗೆ ತ್ವರಿತ ಮುಕ್ತಿ
ರೋಬೋಟಿಕ್ ಕ್ಯಾಮೆರಾ ವ್ಯವಸ್ಥೆಗಳ ಮೂಲಕ ಜಲಮಂಡಳಿ ಸಿಬ್ಬಂದಿ ಪೈಪಲೈನ್ನಲ್ಲಿನ ದೋಷಗಳನ್ನು ಸ್ಪಷ್ಟವಾಗಿ ವೀಕ್ಷಿಸಲು ಸಾಧ್ಯವಾಗುತ್ತಿದೆ. ತಂತ್ರಜ್ಞಾನ ಅಳವಡಿಕೆಯಾದ ನಂತರ ಒಟ್ಟು 75 ದೂರುಗಳನ್ನು ಸ್ವೀಕರಿಸಲಾಗಿದೆ. ಅದರಲ್ಲಿ 67 ಸ್ಥಳಗಳಲ್ಲಿ ಈಗಾಗಲೇ ದುರಸ್ತಿ ಕಾರ್ಯ ಮುಗಿಸಲಾಗಿದೆ. ಬಾಕಿ ದೂರುಗಳಿಗೆ ಪರಿಹಾರ ಒದಗಿಸಲಾಗುತ್ತಿದೆ.
ಒಳಚರಂಡಿ ಕೊಳವೆಗಳಲ್ಲಿನ ತಡೆಗಳು (Blockages), ರಚನಾತ್ಮಕ ದೋಷಗಳು ಮತ್ತು ಆಂತರಿಕ ಹಾನಿಗಳು ಸೇರಿದಂತೆ 93ಕ್ಕೂ ಹೆಚ್ಚು ದೋಷ ಪತ್ತೆ ಮಾಡಲಾಗಿದೆ. ಹೊಸ ತಂತ್ರಜ್ಞಾನದಿಂದ ಸಮಸ್ಯೆಯ ನಿಖರ ಸ್ಥಳ ಮತ್ತು ಸ್ವರೂಪ ತಿಳಿಯಲು ಅನುಕೂಲವಾಗಿದೆ.
ಸಾರ್ವಜನಿಕ ಸ್ನೇಹಿ ಕ್ರಮ
ಜಲಮಂಡಳಿ ವ್ಯಾಪ್ತಿಯಲ್ಲಿನ ಸಮಸ್ಯೆಗಳಿಗೆ ರೋಬೋಟಿಕ್ಸ್ ಬಳಕೆಯು ತ್ವರಿತ ಪರಿಹಾರ ಒದಗಿಸುತ್ತಿದೆ. ಜೊತೆಗೆ ಮಂಡಳಿಯ ಸೇವೆಗಳನ್ನು ಪುನಃಸ್ಥಾಪಿಸಲು ಸಾಧ್ಯವಾಗಿದೆ. ಜೊತೆಗೆ ಕಾರ್ಮಿಕ ಸುರಕ್ಷತೆಗೆ ಪೂರಕವಾಗಿ ಈ ತಂತ್ರಜ್ಞಾನ ಕೆಲಸ ಮಾಡಲಿದೆ. ಈ ಸಂಬಂಧ ಅಧಿಕಾರಿಗಳು ಜನಸ್ನೇಹಿ ವಿಧಾನಗಳನ್ನು ಅಳವಡಿಸಿಕೊಳ್ಳುವುದಕ್ಕೆ ಆದ್ಯತೆ ನೀಡಿದೆ.
ಸಾರ್ವಜನಿಕರ ಹಿತದೃಷ್ಟಿಯಿಂದ, ವೆಚ್ಚ ತಗ್ಗಿಸಲು ಮತ್ತು ದೂರುಗಳಿಗೆ ತ್ವರಿತವಾಗಿ ಸ್ಪಂದಿಸಲು ಮುಂಬರುವ ದಿನಗಳಲ್ಲಿ ರೋಬೋಟಿಕ್ ತಪಾಸಣೆಯನ್ನು ನಗರದ ಇತರೆ ವಲಯಗಳಿಗೂ ವಿಸ್ತರಿಸಲು ಜಲಮಂಡಳಿ ನಿರ್ಧಾರ ಮಾಡಿದೆ. ನೀರಿನ ಸರಬರಾಜು, ಕೊಳವೆ, ಒಳಚರಂಡಿ, ಪೈಪ್ಲೈನ್ ಮಾರ್ಗದಲ್ಲಿ ದೋಷ ಉಂಟಾದರೆ ತ್ವರಿತವಾಗಿ ಪರಿಹಾರ ಒದಗಿಸಲು ತಂತ್ರಜ್ಞಾನ ನಿರ್ಣಾಯಕ ಪಾತ್ರ ವಹಿಸಿದೆ ಎಂದು BWSSB ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
-
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
ಡಿವೋರ್ಸ್ವರೆಗೆ ಪತಿಯ ನಿವಾಸದಲ್ಲೇ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿ: ನಟ ವಿಜಯ್ ಪತ್ನಿ ಕೋರ್ಟ್ಗೆ ಮನವಿ -
Yash: ಪತ್ನಿ ರಾಧಿಕಾ ಪಂಡಿತ್ ಹುಟ್ಟುಹಬ್ಬಕ್ಕೆ ಹೊಸ ಲುಕ್ನಲ್ಲಿ ಯಶ್ ಪ್ರತ್ಯಕ್ಷ -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
ಟಿ20 ವಿಶ್ವಕಪ್ 2026 ಫೈನಲ್ ನಂತರ ಎಲ್ಲಾ ಮಾದರಿಯ ಕ್ರಿಕೆಟ್ಗೆ ಸೂರ್ಯಕುಮಾರ್ ಯಾದವ್ ನಿವೃತ್ತಿ ಘೋಷಣೆ ವದಂತಿ -
Vijay Divorce: ಡಿವೋರ್ಸ್ ವದಂತಿ ನಡುವೆಯೇ ನಟಿ ತ್ರಿಶಾ ಜೊತೆ ಕಾಣಿಸಿಕೊಂಡ ದಳಪತಿ ವಿಜಯ್; ವಿಡಿಯೋ ವೈರಲ್ -
UPSC Results: ಯಾದಗಿರಿ ಜಿಲ್ಲೆ ಒಂದರಲ್ಲೇ 4 ಮಂದಿ ಯುಪಿಎಸ್ಸಿ ಪಾಸ್, ಯಾರವರು? ಹಿನ್ನೆಲೆ ಏನು -
Karnataka Weather: ಕಲಬುರಗಿಯಲ್ಲಿ 39 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲ ಬೇಗೆ -
ದುಬೈ ವಿಮಾನ ನಿಲ್ದಾಣಕ್ಕೆ ನುಗ್ಗಿದ ಡ್ರೋನ್, ಎಲ್ಲಾ ವಿಮಾನ ಹಾರಾಟ ದಿಢೀರ್ ಸ್ಥಗಿತ | Operation Roaring Lion -
LPG Price Hike: ಗೃಹಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆ 60 ರೂಪಾಯಿ ಏರಿಕೆ, ವಾಣಿಜ್ಯ ಸಿಲಿಂಡರ್ ದರ 115 ರೂಪಾಯಿ ಹೆಚ್ಚಳ -
SWR: ಬೆಂಗಳೂರಿನಿಂದ ಇಲ್ಲಿಗೆ ಮಾ.10ರಿಂದ ವಿಶೇಷ ರೈಲುಗಳ ಸಂಚಾರ, ವೇಳಾಪಟ್ಟಿ ಹೀಗಿದೆ












Click it and Unblock the Notifications