ಬೆಂಗಳೂರು ಮೂಲದ ಸ್ಪ್ರಿಂಕ್.ಆನ್ಲೈನ್ನಿಂದ ಗಣೇಶ ಹಬ್ಬಕ್ಕೆ ಭೂರಿ ಭೋಜನ
ಬೆಂಗಳೂರು, ಸೆಪ್ಟೆಂಬರ್ 9: ಹಬ್ಬಗಳಲ್ಲಿ ಅತ್ಯಂತ ಉತ್ಸಾಹಕರ ಅಂಶವೆಂದರೆ ನಾವು ಸೇವಿಸುವ ಆಹಾರ. ಈ ವರ್ಷದ ಗಣೇಶ ಚತುರ್ಥಿಯಂದು ಸ್ಪ್ರಿಂಕ್.ಆನ್ಲೈನ್ ಮನೆಯಂತಹ ಊಟಕ್ಕೆ ಚಂದಾದಾರಿಕೆ ಆಧರಿತ ಪ್ಲಾಟ್ಫಾರಂ ವಿವಿಧ ಬಗೆಯ ದಕ್ಷಿಣ ಭಾರತೀಯ ಮತ್ತು ಉತ್ತರ ಭಾರತೀಯ ಭೋಜನಗಳೊಂದಿಗೆ ಬಂದಿದೆ. ಗಣೇಶನಂತೆಯೇ ಬಹಳಷ್ಟು ಜನರು ಆಹಾರಪ್ರಿಯರು. ನಾವು ನಮ್ಮ ಕುಟುಂಬ ಮತ್ತು ನಮ್ಮನ್ನು ಭೋಜನದೊಂದಿಗೆ ಆನಂದಿಸುವ ಅವಕಾಶ ಒದಗಿಸುವುದು ಸೂಕ್ತವಾಗಿದೆ.
ಅಲ್ಲದೆ ಈ ವರ್ಷ ಅನಿರೀಕ್ಷಿತ ಸಾಂಕ್ರಾಮಿಕದಿಂದ ನಾವು ಗಣೇಶ ಚತುರ್ಥಿಯ ಸಾಮಾನ್ಯ ಹುರುಪು ಮತ್ತು ಉತ್ಸಾಹ ಇಲ್ಲದಂತಾಗಿದೆ. ಆದರೆ ಚಿಂತಿಸಬೇಕಾಗಿಲ್ಲ. ನೀವು ವರ್ಚುಯಲಿ ಹಬ್ಬವನ್ನು ಆನಂದಿಸಬಹುದು ಮತ್ತು ಕೆಲವು ಬಾಯಲ್ಲಿ ನೀರೂರಿಸುವ ತಿನಿಸುಗಳನ್ನು ಮನೆಯಲ್ಲಿಯೇ ಇದ್ದು ಸವಿಯಬಹುದು. ಸ್ಪ್ರಿಂಕ್.ಆನ್ಲೈನ್ ಗಣೇಶ ಚತುರ್ಥಿಗೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಪ್ರಯತ್ನಿಸಬೇಕಾದ ಮತ್ತು ವೆಚ್ಚ ಉಳಿಸುವ ಭೋಜನದೊಂದಿಗೆ ಬಂದಿದೆ.
ಇನ್ನೇಕೆ ಕಾಯುತ್ತಿದ್ದೀರಿ? ನೀವು ಬೆಂಗಳೂರಿನಲ್ಲಿದ್ದರೆ ಈಗಲೇ ಯೋಜಿಸಿ ಮತ್ತು ನಿಮ್ಮ ಹಬ್ಬದ ಭೋಜನವನ್ನು ಸ್ಪ್ರಿಂಕ್ ಮೂಲಕ ಆರ್ಡರ್ ಮಾಡಿ - ಸ್ಪೆಷಲ್. ಸ್ಪ್ರಿಂಕ್. ಆನ್ ಲೈನ್ ಮೂಲಕ ಪಡೆದುಕೊಳ್ಳಿ.
Ganesh Chaturthi 2021: ಗಣೇಶ ಚತುರ್ಥಿ ಪೂಜಾ ವಿಧಾನ, ಶುಭ ಮುಹೂರ್ತ ಹಾಗೂ ಮಹತ್ವ
ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿಯಂದು ಗಣೇಶ ಉತ್ಸವ ಆರಂಭವಾಗುತ್ತದೆ ಮತ್ತು ಈ 10 ದಿನಗಳ ಗಣೇಶೋತ್ಸವವನ್ನು ದೇಶಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಗಣೇಶನು ಭದ್ರ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಜನಿಸಿದನು ಮತ್ತು ಈ ದಿನಾಂಕವನ್ನು ಗಣೇಶ ಚತುರ್ಥಿಯೆಂದು ಆಚರಿಸಲಾಗುತ್ತದೆ. ಈ ಬಾರಿ 10 ದಿನಗಳ ಗಣೇಶ ಹಬ್ಬವು ಸೆಪ್ಟೆಂಬರ್ 10 ರಿಂದ ಆರಂಭವಾಗಲಿದ್ದು, ವಿಗ್ರಹ ವಿಸರ್ಜನೆಯ ನಂತರ 2021 ರ ಸೆಪ್ಟೆಂಬರ್ 19, ಭಾನುವಾರ ಅನಂತ ಚತುರ್ದಶಿಯಂದು ಕೊನೆಗೊಳ್ಳುತ್ತದೆ.
ಗಣೇಶ ಚತುರ್ಥಿ ವಿಶೇಷ ದಕ್ಷಿಣ ಭಾರತದ ಭೋಜನ
ಒಂದು ಊಟದಲ್ಲಿ ಇಡೀ ಹಬ್ಬದ ಸವಿ ಒಳಗೊಂಡಿರುವುದನ್ನು ಕಲ್ಪಿಸಿಕೊಳ್ಳಿ. ದಕ್ಷಿಣದ ಭೋಜನದಲ್ಲಿ ಪುರನ್ ಪುರಿ(2 ), ಹಿಚುಕಿದ ಅವರೇಕಾಳು ಸಾಗು, ಬ್ಲಾಕ್ ಚನ್ನ ಸುಂಡಲ್, ಕೊಬ್ಬರಿ ಅನ್ನ, ಮುರಕು(1 ತುಂಡು), ಬೇಳೆ ಕ್ಯಾರೆಟ್ ಕೋಸಂಬರಿ, ಕರ್ಜಿಕಾಯಿ, ಕಡಲೇಬೀಜದ ಪಚಡಿ ಒಳಗೊಂಡಿರುತ್ತದೆ. ಈ ಸ್ವಾದಿಷ್ಟ ಊಟದೊಂದಿಗೆ ನೀವು ಗಣೇಶ ಚತುರ್ಥಿ ಹಬ್ಬದ ವೈಭವ ಅನುಭವಿಸುತ್ತೀರಿ.
ಗಣೇಶ ಚತುರ್ಥಿ ವಿಶೇಷ ದಕ್ಷಿಣ ಭಾರತದ ಡಿನ್ನರ್
ಅಡುಗೆ ಮಾಡುವುದನ್ನು ಬಿಟ್ಟು ಸಂಭ್ರಮಕ್ಕೆ ಗಮನ ನೀಡಿ. ನೀವು ಕುಟುಂಬದೊಂದಿಗೆ ಅಥವಾ ಸಹವರ್ತಿಗಳೊಂದಿಗೆ ಆರೋಗ್ಯಕರ ಆಹಾರ ಆನಂದಿಸುವ ಮೂಲಕ ಹಬ್ಬವನ್ನು ಆನಂದಿಸಬಹುದು. ಆರೋಗ್ಯಕರ ಭೋಜನ ನಿಮ್ಮ ಕಾಳಜಿಯಾದರೆ ಗಣೇಶ ಚತುರ್ಥಿಯ ವಿಶೇಷ ಹಬ್ಬದ ಆರೋಗ್ಯಕರ ಆಹಾರಕರ ಹಾಗೂ ಸ್ವಾದಿಷ್ಟ ತಿನಿಸುಗಳ ಮೂಲಕ ಹಬ್ಬವನ್ನು ಸಂಭ್ರಮಿಸಿ. ನಿಮ್ಮ ಭೋಜನದಲ್ಲಿ ಪಾಲಕ್ ಪುರಿ(2), ಕಡಲೆ ಆಲೂ ಗಸಿ, ಬೀನ್ಸ್ ಪೊರಿಯಾಲ್, ಪುಳಿಯೋಗರೆ, ಮುರುಕು, ಬೇಳೆ ಸೌತೆ ಕೋಸಂಬರಿ, ಚಾಕೊಲೇಟ್ ಕಡುಬು, ರಾಯಿತಾವನ್ನು ಆನಂದಿಸಿ.
ಗಣೇಶ ಚತುರ್ಥಿಯ ವಿಶೇಷ ಉತ್ತರ ಭಾರತದ ಭೋಜನ
ಗಣೇಶ ಚತುರ್ಥಿಗೆ ನೀವು ಉತ್ತರ ಭಾರತದ ವಿಶೇಷ ಸ್ಪರ್ಶ ತಪ್ಪಿ ಹೋಗುತ್ತಿದೆ ಎನಿಸಿದರೆ ನಿಮ್ಮ ಬಂಧುಮಿತ್ರರೊಂದಿಗೆ ಹಬ್ಬವನ್ನು ಸಂಭ್ರಮಿಸುವುದು ಸೂಕ್ತವಾಗಿದೆ. ಸ್ಪ್ರಿಂಕ್.ಆನ್ಲೈನ್ ಮೂಲಕ ಬಜೆಟ್ ಸ್ನೇಹಿ, ಮನೆಯಲ್ಲಿನ ಊಟದಂತೆ ಸವಿಯಬಹುದು. ಪ್ರತಿಯೊಬ್ಬರ ಅಚ್ಚುಮೆಚ್ಚಿನ ಪುರಮ್ ಪುರಿ (2 ತುಣುಕುಗಳು), ಅಲಸಂದೆ ಕರಿ, ಆಲೂ ಮೇಥಿ ಸಬ್ಜಿ, ಹಸಿರು ಹೆಸರುಕಾಳು ಮತ್ತು ಬೇಳೆಯ ದಾಲ್, ಮಸಾಲಾ ಬಾತ್, ರಾಯಿತಾ, ಕಾರಂಜಿ ಸ್ವೀಟ್, ಬಟರ್ ಚಕ್ಲಿ ಒಳಗೊಂಡಿರುತ್ತದೆ.
Recommended Video
ಗಣೇಶ ಚತುರ್ಥಿ ವಿಶೇಷ ಉತ್ತರ ಭಾರತದ ಡಿನ್ನರ್
ಹಬ್ಬವನ್ನು ಸ್ಪ್ರಿಂಕ್ನ ಉತ್ತರ ಭಾರತದ ಡಿನ್ನರ್ನೊಂದಿಗೆ ಆನಂದಿಸಿ ಅದರಲ್ಲಿ ಪಾಲಕ್ ಪುರಿ(2 ತುಣುಕುಗಳು), ಬಟಾಣಿ ಕರಿ, ಆಲೂ, ಟಮಾಟಾರ್ ಸಬ್ಜಿ, ಪ್ಲೈನ್ ಕಡಿ, ಸ್ಟೀಮ್ಡ್ ರೈಡ್, ಸಾಬೂದಾನಾ ವಡ(1 ತುಣುಕು) ಚಾಕೊಲೇಟ್ ಕಡುಬು, ಬಟರ್ ಚಕ್ಲಿ ಒಳಗೊಂಡಿರುತ್ತದೆ.