ಪ್ರೇಕ್ಷಕರ ಒತ್ತಾಯದ ಮೇರೆಗೆ ಪುರಹರ ನಾಟಕ ಮತ್ತೆ ರಂಗಕ್ಕೆ
ಬೆಂಗಳೂರು, ಜ.28: ಯುವ ಉತ್ಸಾಹಿ ರಂಗಕರ್ಮಿಗಳು ಸೇರಿಕೊಂಡು ಕಟ್ಟಿರುವ ಹೊಸ ತಂಡ ಆಕೃತಿ ಮೂಲಕ ಜನಮನ್ನಣೆ ಗಳಿಸಿದ ಐತಿಹಾಸಿಕ ನಾಟಕ 'ಪುರಹರ' ಮತ್ತೊಮ್ಮೆ ಪ್ರದರ್ಶನಕ್ಕೆ ಸಿದ್ಧವಾಗಿದೆ. ಕಳೆದ ಮೂರು ವರ್ಷಗಳಿಂದ ನಾಟಕ ಪ್ರದರ್ಶನಕ್ಕಾಗಿ ರಂಗಪ್ರೇಮಿಗಳಿಂದ ಒತ್ತಾಯ ಕೇಳಿ ಬಂದಿತ್ತು.
ಶೈವ-ವೈಷ್ಣವ ಪಂಥ, ಮುಸ್ಲಿಮ್ ಆಡಳಿತ, ಧರ್ಮ-ಕರ್ಮ, ವೀರತ್ವ, ಆಧ್ಯಾತ್ಮ ಹೀಗೆ ಅನೇಕ ವಿಷಯಗಳ ಸುತ್ತ ಸುತ್ತುವ ಈ ನಾಟಕದ ಕಥಾ ವಸ್ತುವಿನಲ್ಲಿ ನವಿರಾದ ಪ್ರೇಮಕಥೆಯೂ ಇದೆ.

ಕಾದಂಬರಿಗಾರರಾಗಿ ಜನಪ್ರಿಯತೆ ಗಳಿಸಿರುವ ಕರ್ಮ, ನನ್ನಿ ಖ್ಯಾತಿಯ ಕರಣಂ ಪವನ್ ಪ್ರಸಾದ್ ಅವರು ರಚಿಸಿರುವ ಈ ನಾಟಕವನ್ನು ಶ್ರೀಕಂಠ ಶ್ರೌತಿ ಅವರು ಅಚ್ಚುಕಟ್ಟಾಗಿ ನಿರ್ದೇಶಿಸಿದ್ದಾರೆ. [ಭೈರಪ್ಪ ಹೊಗಳಿದ 'ಕರ್ಮ' ಕೃತಿ ವಿಶ್ವದೆಲ್ಲೆಡೆ ಲಭ್ಯ]
ಮುಖ್ಯ ಪಾತ್ರದಲ್ಲಿ ಅರಬ್ ಆದಿಲ್ ಶಾ ಆಗಿ ಕರಣಂ ಪವನ್ ಪ್ರಸಾದ್ ನಟಿಸಿದ್ದರೆ, ಅವರ ಸಮನಾಗಿ ಅವಧೂತನ ಪಾತ್ರಕ್ಕೆ ವಿಜಯ್ ಜೆ ಜೋಯಿಸ್ ಜೀವ ತುಂಬಿದ್ದಾರೆ. ಉಳಿದ ಪಾತ್ರವರ್ಗ ಹಾಗೂ ನಾಟಕ ಪ್ರದರ್ಶನದ ವಿವರ ಮುಂದಿದೆ:
ರಚನೆ: ಕರಣಂ ಪವನ್ ಪ್ರಸಾದ್.
ನಿರ್ದೇಶನ: ಶ್ರೀಕಂಠ ಶ್ರೌತಿ
ಬೆಳಕು: ಮನಸ್ ಸಂಪತ್
ಪ್ರಸಾಧನ: ಗುರು
ಪಾತ್ರವರ್ಗ:
ಅರಬ್ ಆದಿಲ್ ಶಾ: ಕರಣಂ ಪವನ್ ಪ್ರಸಾದ್
ಅವಧೂತ: ವಿಜಯ್ ಜೆ ಜೋಯಿಸ್

ಅನಿರುದ್ಧ ಶರ್ಮ- ಶ್ರೇಯಸ್ ಶರ್ಮ ಕೆಎಸ್
ಮಣಿರುದ್ಧ ಶರ್ಮ: ಕಾರ್ತಿಕ್ ಬಿ ಗೌಡ
ಗರುಡಾಚಾರಿ- ರೋಹಿತ್ ಅಶೋಕ್ ಹೆಗ್ಡೆ
ಕಾಲಭೈರವ ಶರ್ಮ- ಭರತ್ ವಿ ರವ್
ವಾಸುದೇವರಾಯ-ಶಶಿಕುಮಾರ್ ಎ
ಖ್ವಾಜ ಬಷೀರ್-ತೇಜಸ್ವಿ ಆರ್
ಶ್ಯಾಮಸುಂದರ -ಸಮೀರ್ ಎನ್ ಎಂ
ವಿಜಯ ಹಾಗೂ ತಿರುಮಲ-ಪವನ್ ಕುಮಾರ್ ವಿ
ಗಜಾನನ- ವಾದಿರಾಜ್ ಭಾರ್ಗವ್
ಗೂಟ ಶಂಕರ- ರಾಕೇಶ್
ದೇವಿ-ಅದಿತಿ ಹಂದೆ
ಸುಶೀಲಮ್ಮ- ಅಪೂರ್ವ ಎಂ
ನಂದಿ-ಆದರ್ಶ್
ನಾಟಕದ ಅವಧಿ: 80 ನಿಮಿಷ
ಟಿಕೆಟ್ ಬೆಲೆ: 120 ರು
ಎಲ್ಲಿ?: ಕೆಎಚ್ ಕಲಾಸೌಧ, ಶ್ರೀರಾಮಾಂಜನೇಯ ಗುಡ್ಡ ದೇಗುಲದ ಹಿಂಭಾಗ
ಮರಡಿ ಸುಬ್ಬಯ್ಯ ಚೌಲ್ಟ್ರಿ ಹತ್ತಿರ
ಹನುಮಂತ ನಗರ
ಬೆಂಗಳೂರು
ದಿನಾಂಕ/ ದಿನ: ಜನವರಿ 31, 2016, ಸಂಜೆ 7.15
ಟಿಕೆಟ್ ಬುಕ್ ಮಾಡಲು
@ BookMyShow
http://in.bookmyshow.com/bengaluru/plays/purahara/ET00037883
@ FILMYSPHERE (20% discount coupon code for play PRHARA20)
https://www.filmysphere.com/purahara
ಟೆಲಿ ಬುಕ್ಕಿಂಗ್ ಗಾಗಿ: 99025 90303
(ಒನ್ಇಂಡಿಯಾ ಸುದ್ದಿ)
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications