ಬೆಂಗಳೂರಿನ ಕಾಲೇಜಲ್ಲಿ ದಸ್ತಾರ್ ತೆಗೆಯುವಂತೆ ಸಿಖ್ ವಿದ್ಯಾರ್ಥಿನಿಗೆ ಹೇಳಿದ ಶಿಕ್ಷಕ
ಬೆಂಗಳೂರು ಫೆಬ್ರವರಿ 24: ಕರ್ನಾಟಕ ಹೈಕೋರ್ಟ್ನ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಬೆಂಗಳೂರಿನ ಕಾಲೇಜೊಂದು ಸಿಖ್ ವಿದ್ಯಾರ್ಥಿನಿಯೊಬ್ಬಳ ದಸ್ತಾರ್ನ್ನು ತೆಗೆದು ತರಗತಿಗೆ ಪ್ರವೇಶಿಸುವಂತೆ ಸೂಚಿಸಿದೆ. ಹೈಕೋರ್ಟ್ ತ್ರಿಸದಸ್ಯ ಪೀಠವು ಕ್ಯಾಂಪಸ್ಗಳಲ್ಲಿ ಹಿಜಾಬ್ ನಿಷೇಧದ ವಿರುದ್ಧದ ಅರ್ಜಿಗಳ ವಿಚಾರಣೆಯನ್ನು ನಡೆಸುತ್ತಿದೆ. ವಿಚಾರಣೆ ಹಂತದಲ್ಲಿ ಆದೇಶವಿರುವ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಧಾರ್ಮಿಕ ವೇಷಭೂಷಣಗಳನ್ನು ಧರಿಸುವುದನ್ನು ನಿಷೇಧಿಸಿ ಫೆಬ್ರವರಿ 10 ರಂದು ಮಧ್ಯಂತರ ಆದೇಶವನ್ನು ಕೋರ್ಟ್ ನೀಡಿತ್ತು. ಇದನ್ನು ಉಲ್ಲೇಖಿಸಿ ಮೌಂಟ್ ಕಾರ್ಮೆಲ್ ಪಿಯು ಕಾಲೇಜು, ಅಮೃತಧಾರಿ ಸಿಖ್ ಆಗಿರುವ 17 ವರ್ಷದ ವಿದ್ಯಾರ್ಥಿಯನ್ನು ತರಗತಿಗಳಿಗೆ ಹಾಜರಾಗುವಾಗ ತನ್ನ ದಸ್ತಾರ್ನ್ನು ತೆಗೆಯಲು ಹೇಳಿದೆ.
ವಿದ್ಯಾರ್ಥಿಯ ತಂದೆ ಗುರುಚರಣ್ ಸಿಂಗ್, ಫೆಬ್ರವರಿ 16 ರಂದು ತರಗತಿಯಲ್ಲಿ ಕುಳಿತಿರುವಾಗ ಪೇಟವನ್ನು ತೆಗೆಯಬಹುದೇ ಎಂದು ಕಾಲೇಜು ಆಡಳಿತವು ತನ್ನ ಮಗಳನ್ನು ಕೇಳಿದೆ ಎಂದು ಹೇಳಿದ್ದಾರೆ. "ಆದರೆ ಅವಳು ಬ್ಯಾಪ್ಟೈಜ್ ಆಗಿದ್ದಾಳೆ (ಅಮೃತಧಾರಿ ಸಿಖ್ ಆಗಿ) ಎಂದು ಅವರು ಹೇಳಿದ್ದಾರೆ. ಇದು ನಮ್ಮ ನಂಬಿಕೆಯ ಅವಿಭಾಜ್ಯ ಅಂಗವಾಗಿದೆ. ನಾವು ಪೇಟವನ್ನು ಧರಿಸದೆ ಹೊರಗೆ ಹೋಗುವುದಿಲ್ಲ. ಆ ದಿನವೇ ನಾನು ಕಾಲೇಜು ಆಡಳಿತಕ್ಕೆ ಇಮೇಲ್ ಕಳುಹಿಸಿದ್ದೆ ಮತ್ತು ನಮ್ಮ ನಂಬಿಕೆಯ ಅವಿಭಾಜ್ಯ ಅಂಗವಾಗಿರುವ ಐದು ಕಾಕರ್ಗಳನ್ನು ಅವರಿಗೆ ವಿವರಿಸಿದೆ"ಎಂದು ಅವರು ಟಿಎನ್ಎಂಗೆ ತಿಳಿಸಿದರು.
ಕಾಲೇಜಿನಿಂದ ಅವರ ಇಮೇಲ್ಗೆ ಉತ್ತರ ಸಿಗದಿದ್ದರೂ, ತಮ್ಮ ಮಗಳಿಗೆ ಎಂದಿನಂತೆ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡಲಾಗಿದೆ ಎಂದು ಹೇಳಿದರು. ಆದರೆ, ಹೈಕೋರ್ಟ್ ಮಧ್ಯಂತರ ಆದೇಶ ಜಾರಿಗೊಳಿಸಲು ಫೆ.23ರ ಬುಧವಾರದಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಕಾಲೇಜಿಗೆ ಭೇಟಿ ನೀಡಿದಾಗ ಮತ್ತೆ ವಿಷಯ ಪ್ರಸ್ತಾಪವಾಯಿತು.

"ನಿನ್ನೆ (ಫೆ 23) ಕಾಲೇಜು ಅಧಿಕಾರಿಗಳು ನನ್ನನ್ನು ಭೇಟಿಯಾಗಲು ಬಯಸುತ್ತಾರೆ ಎಂದು ನನ್ನ ಮಗಳು ನನಗೆ ಕರೆ ಮಾಡಿದಳು" ಎಂದು ಅವರು ಹೇಳಿದರು. ಆದರೆ ಸಿಂಗ್ ಕಾರ್ಯನಿರತರಾಗಿದ್ದರಿಂದ ಅವರು ದೂರವಾಣಿ ಸಂಭಾಷಣೆ ನಡೆಸಬಹುದೇ ಎಂದು ಕೇಳಿದರು. "ಆದರೆ ಅವರು ನನ್ನನ್ನು ಬರಲೇಬೇಕು ಎಂದು ಕರೆದರು ಮತ್ತು ಅವರು ಹೈಕೋರ್ಟ್ ಮಧ್ಯಂತರ ಆದೇಶವನ್ನು ಉಲ್ಲೇಖಿಸಿದರು. ಅವರು ಅದನ್ನು ಪಾಲಿಸಬೇಕು ಎಂದು ಹೇಳಿದರು. ನನ್ನ ಮಗಳು ದಸ್ತಾರ್ ಇಲ್ಲದೆ ತರಗತಿಗಳಿಗೆ ಹಾಜರಾಗಬಹುದೇ ಎಂದು ಕೇಳಿದರು. ಅದನ್ನು ತೆಗೆದು ಹಾಕುವ ಕ್ಯಾಪ್ ಅಲ್ಲ ಎಂದು ನಾನು ಅವರಿಗೆ ವಿವರಿಸಿದೆ. ಹೈಕೋರ್ಟಿನ ಆದೇಶದಲ್ಲಿ ಟರ್ಬನ್ ಕೂಡ ಬೇಡ ಎಂದು ಎಲ್ಲಿಯೂ ಉಲ್ಲೇಖಿಸಿಲ್ಲ ಎಂದು ಹೇಳಿದ್ದೇನೆ. ಹಾಗಾಗಿ ಅಧಿಕಾರಿಗಳಿಂದ ಸ್ವಲ್ಪ ಸ್ಪಷ್ಟತೆ ಪಡೆಯುವಂತೆ ಕೇಳಿದ್ದೇನೆ"ಎಂದರು.

ಈ ಅವಧಿಯವರೆಗೆ ತನ್ನ ಮಗಳು ಕಾಲೇಜಿನಲ್ಲಿ ಓದುತ್ತಿದ್ದಾಳೆ. ಆದರೆ ಅವಳ ದಸ್ತಾರ್ ಅನ್ನು ತೆಗೆದುಹಾಕಲು ಎಂದಿಗೂ ಕೇಳಲಿಲ್ಲ ಮತ್ತು ಎಂದಿನಂತೆ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡಲಾಯಿತು ಎಂದು ಅವರು ಹೇಳಿದರು. "ಇತರ ಕೆಲವು ವಿದ್ಯಾರ್ಥಿಗಳು ದಸ್ತಾರ್ನ್ನು ಗುರಿಯಾಗಿಸಿಕೊಂಡಿರಬಹುದು. ಸಂವಿಧಾನದ ಪ್ರಕಾರ ಜನರು ತಮ್ಮ ಹಕ್ಕುಗಳಿಗಾಗಿ ಹೋರಾಡಬೇಕು ಆದರೆ ಇತರರನ್ನು ಗುರಿಯಾಗಿಸಬಾರದು ಎಂದು ನಾನು ಭಾವಿಸುತ್ತೇನೆ. ಹೈಕೋರ್ಟ್ ಆದೇಶದಿಂದ ದಸ್ತಾರ್ನ್ನು ನಿರ್ಬಂಧಿಸಲಾಗಿಲ್ಲ ಎಂದು ಸರ್ಕಾರಿ ಅಧಿಕಾರಿಗಳು ಈಗ ಸ್ಪಷ್ಟಪಡಿಸಿದ್ದಾರೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ'' ಎಂದು ಗುರುಚರಣ್ ಸಿಂಗ್ ಹೇಳಿದರು.
ಮೌಂಟ್ ಕಾರ್ಮೆಲ್ ಪಿಯು ಕಾಲೇಜು ಆಡಳಿತವು ವಿದ್ಯಾರ್ಥಿನಿಗೆ ಪಗಡಿವನ್ನು ತೆಗೆದುಹಾಕಲು ಹೇಳಲಿಲ್ಲ. ಆದರೆ ಮಧ್ಯಂತರ ಆದೇಶದ ದೃಷ್ಟಿಯಿಂದ ಇತರ ಕೆಲವು ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಎತ್ತಿದ್ದರಿಂದ ಮಾತ್ರ ಕೇಳಲಾಯಿತು. ವಾಸ್ತವವಾಗಿ ಯಾವುದೇ ಸಮಸ್ಯೆ ಇಲ್ಲ ಮತ್ತು ನಾವು ಹೈಕೋರ್ಟ್ ಮಧ್ಯಂತರ ಆದೇಶದ ಬಗ್ಗೆ ಚರ್ಚೆ ನಡೆಸಿದ್ದೇವೆ. ಆಕೆ ದಸ್ತಾರ್ ತೆಗೆಯಲೇಬೇಕು ಎಂದು ನಾವು ಯಾವತ್ತೂ ಒತ್ತಾಯಿಸಿಲ್ಲ. ಹಿಜಾಬ್ ಧರಿಸುವ ತಮ್ಮ ಹಕ್ಕಿನ ಬಗ್ಗೆ ದನಿಯೆತ್ತಿದ ಇಬ್ಬರು ವಿದ್ಯಾರ್ಥಿಗಳು ಮಾತ್ರ ದಸ್ತಾರ್, ಬಳೆಗಳು ಮತ್ತು ಸರಪಳಿಗಳನ್ನು ಅನುಮತಿಸಬಹುದೇ ಎಂದು ಕೇಳಿದರು. ನಾವು ಎಂದಿಗೂ ಸಮಸ್ಯೆಯನ್ನು ನಾವೇ ಸೃಷ್ಟಿಸಿಲ್ಲ ಎಂದು ಕಾಲೇಜಿನ ಆಡಳಿತಾಧಿಕಾರಿ ಎಂ ಜಿನೆವೀವ್ ಅವರು ಟಿಎನ್ಎಂಗೆ ತಿಳಿಸಿದರು.
ಸಿಖ್ ವಿದ್ಯಾರ್ಥಿಯನ್ನು ತರಗತಿಯಿಂದ ಹೊರಗೆ ಕುಳಿತುಕೊಳ್ಳಲು ಕೇಳಲಾಗಿಲ್ಲ. ದಸ್ತಾರ್ ಅನ್ನು ಧರಿಸುವುದು ಅವಳ ಜೀವನ ವಿಧಾನದ ಅವಿಭಾಜ್ಯ ಅಂಗವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಆಕೆಯ ತಂದೆ ನಮಗೆ ಪತ್ರ ಬರೆದಿದ್ದರು ಎಂದು ಗುರುಚರಣ್ ಹೇಳಿದರು.
Recommended Video
ಇನ್ನೂ ಶಿರೋಮಣಿ ಗುರುದ್ವಾರ ಪ್ರಬಂಧಕ್ ಕಮಿಟಿ ಈ ಬಗ್ಗೆ ಪ್ರಸ್ತಾಪಿಸಿ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದೆ. ದಸ್ತಾರ್ ಧರಿಸುವ ಮಹತ್ವದ ಬಗ್ಗೆ ಪತ್ರದಲ್ಲಿ ವಿವರಿಸಲಾಗಿದೆ. ದಸ್ತಾರ್ ಧರಿಸುವುದು ತಮ್ಮ ನಂಬಿಕೆ ಹಾಗೂ ಅದು ಅವರ ಅವಿಭಾಜ್ಯ ಅಂಗ ಎಂದು ಹೇಳಿಕೊಂಡಿದೆ. ಹೀಗಾಗಿ ಕಾಲೇಜಿನಲ್ಲಿ ದಸ್ತಾರ್ ಧರಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications