ಬೆಂಗಳೂರಿನಲ್ಲಿ ಸ್ವಲ್ಪ ಕ್ಲೀನ್ ಮಾಡಿ ಅಭಿಯಾನ
ಬೆಂಗಳೂರು, ನ. 22 : ಬೆಂಗಳೂರಿನ ಜನರಿಗೆ ಬಡವಾವಣೆಗಳನ್ನು ಸ್ವಚ್ಛಗೊಳಿಸಿ ಎಂದು ತಿಳಿಸುವ ಸ್ವಲ್ಪ ಕ್ಲೀನ್ ಮಾಡಿ ಅಭಿಯಾನಕ್ಕೆ ಭಾರೀ ಬೆಂಬಲ ದೊರಕಿದೆ. ಕಳೆದ ಎಂಟು ವರ್ಷಗಳಿಂದ ಕಸದ ಗುಂಡಿಯಾಗಿದ್ದ ಆರ್.ಟಿ.ನಗರ ಸಮೀಪದ ಚಾಮುಂಡಿನಗರದ ಮುಖ್ಯರಸ್ತೆಯಲ್ಲಿ ಭಾನುವಾರ ನಡೆದ ಸ್ವಲ್ಪ ಕ್ಲೀನ್ ಮಾಡಿ ಅಭಿಯಾನದಿಂದ ಸ್ಥಳ ಸ್ವಚ್ಛವಾಗಿದೆ.
Resurgent India ಸಂಸ್ಥೆ ಬೆಂಗಳೂರಿನಲ್ಲಿ "ರೀಡ್ ಮಾಡಿ, ಲೀಡ್ ಮಾಡಿ, ಸ್ವಲ್ಪ ಕ್ಲೀನ್ ಮಾಡಿ" ಎಂಬ ಅಭಿಯಾನ ಆರಂಭಿಸಿದೆ. ಸಂಸ್ಥೆಯ ಅಧ್ಯಕ್ಷ ರಾಜೀವ್ ಗೌಡ ಈ ಅಭಿಯಾನದ ರೂವಾರಿ. ಚಾಮುಂಡಿನಗರದಲ್ಲಿ ಭಾನುವಾರ ಸಂಸ್ಥೆ ಸ್ಥಳೀಯ ಬಿಬಿಎಂಪಿ ಸದಸ್ಯರ ಸಹಕಾರದಲ್ಲಿ ನಡೆದ ಅಭಿಯಾನದಿಂದಾಗಿ, ಕಸದ ತೊಟ್ಟಿಯಾಗಿದ್ದ ಮುಖ್ಯ ರಸ್ತೆ ಸದ್ಯ ಸ್ವಚ್ಛವಾಗಿದೆ.

ಮೊದಲು ರಾಜೀವ್ ಗೌಡ ತಮ್ಮ ತಂಡದೊಂದಿಗೆ ಚಾಮುಂಡಿ ನಗರಕ್ಕೆ ಆಗಮಿಸಿ ನಾಲ್ಕು ದಿನಗಳಿಂದ ಅಲ್ಲಿನ ಸಮಸ್ಯೆ ಬಗ್ಗೆ ಪರಿಶೀಲನೆ ಮಾಡಿದ್ದರು. ನಂತರ ಸ್ಥಳೀಯರ ಸಹಕಾರದೊಂದಿಗೆ ಸ್ಥಳವನ್ನು ಸ್ವಚ್ಛಗೊಳಿಸಿ, ಕಸದ ಗುಂಡಿಯನ್ನು ತೆರವುಗೊಳಿಸಿದ್ದಾರೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಸ್ಥಳವನ್ನು ಕ್ಲೀನ್ ಮಾಡುವುದು ಹೇಗೆ ಎಂದು ಜನರಿಗೆ ಪ್ರಾತ್ಯಕ್ಷಿಕೆ ನೀಡಲಾಯಿತು. (ಸ್ವಲ್ಪ ಕ್ಲೀನ್ ಅಪ್ ಮಾಡಿ ಅಭಿಯಾನಕ್ಕೆ ಚಾಲನೆ)
ಕಸದ ಗುಂಡಿಯ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗದೇ ಬಿಬಿಎಂಪಿ ಸದಸ್ಯರೇ ಅದನ್ನು ಕೈಬಿಟ್ಟಿದ್ದರು. ಆದರೆ, ಸ್ವಲ್ಪ ಕ್ಲೀನ್ ಮಾಡಿ ಅಭಿಯಾನದಿಂದ ಎಂಟು ವರ್ಷಗಳಿಂದ ಹಾಗೇ ಉಳಿದಿದ್ದ ಸ್ಥಳ ಸುಂದರವಾಗಿದೆ. ವೈಜ್ಞಾನಿಕವಾಗಿಯೇ ಇಲ್ಲಿನ ಕಸದ ಸಮಸ್ಯೆಯನ್ನು ಬಗೆಹರಿಸಲಾಗಿದೆ.
ಮೊದಲು ಪೌರ ಕಾರ್ಮಿಕರ ಸಹಾಯದಿಂದ ಸ್ಥಳದಲ್ಲಿನ ಕಸನವನ್ನು ತೆಯಲಾಯಿತು. ಪುಟ್ ಪಾತ್ ಸೇರಿದಂತೆ ಕೆಲವು ದುರಸ್ತಿಗಳನ್ನು ಪೂರ್ಣಗೊಳಿಸಲಾಯಿತು. ನಂತರ ಭಾನುವಾರ ಅಂತಿಮವಾಗಿ ಸ್ಥಳವನ್ನು ವಿಶ್ರಾಂತಿ ತೆಗೆದುಕೊಳ್ಳಲು ಯೋಗ್ಯವಾದ ಸ್ಥಳವಾಗಿ ಪರಿವರ್ತಿಸಲಾಯಿತು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications