ಸ್ವಚ್ಛ ಭಾರತ ಅನುದಾನ ದುರ್ಬಳಕೆ, ಕಾಂಗ್ರೆಸ್ ಸಚಿವ, ಶಾಸಕರ ವಿರುದ್ಧ ದೂರು
ಬೆಂಗಳೂರು, ಡಿಸೆಂಬರ್ 30: ಕಾಂಗ್ರೆಸ್ಸಿನ ಕೆಲ ಸಚಿವ ಹಾಗೂ ಶಾಸಕರ ವಿರುದ್ಧ ಸ್ವಚ್ಛ ಭಾರತ ಅನದಾನ ದುರ್ಬಳಕೆ ಆರೋಪ ಕೇಳಿಬಂದಿದೆ.
ಸ್ವಚ್ಛ ಭಾರತ ಅನದಾನ ದುರ್ಬಳಕೆ ಮಾಡಿಕೊಂಡಿದ್ದಾರೆಂದು ಕೆಲ ಕಾಂಗ್ರೆಸ್ ಸಚಿವರು, ಶಾಸಕರ ವಿರುದ್ಧ ಬಿಜೆಪಿಯ ಎನ್ ಆರ್ ರಮೇಶ್ ಅವರು ಲೋಕಾಯುಕ್ತ ಮತ್ತು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಕ್ಕೆ ದೂರು ನೀಡಿದ್ದಾರೆ.

ರಾಜ್ಯ ಕೃಷಿ ಸಚಿವ ಕೃಷ್ಣ ಬೈರೇಗೌಡ, ವಸತಿ ಸಚಿವ ಎಂ ಕೃಷ್ಣಪ್ಪ, ಶಾಸಕರಾದ ಹ್ಯಾರೀಶ್, ದಿನೇಶ್ ಗುಂಡೂರಾವ್, ಎಸ್ ಟಿ ಸೋಮಶೇಖರ್, ಪ್ರಿಯಾಕೃಷ್ಣ, ಜಮೀರ್ ಅಹಮ್ಮದ್ ಖಾನ್, ಬೈರಾತಿ ಬಸವರಾಜ ವಿರುದ್ಧ ದೂರು ದಾಖಲಿಸಿದ್ದಾರೆ.
ಇವರೆಲ್ಲರು ಸ್ವಚ್ಛ ಭಾರತ ಅನದಾನ ದುರ್ಬಳಕೆ ಮಾಡಿದ್ದು, ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಎನ್ ಆರ್ ರಮೇಶ್ ಅವರು ಎಸಿಬಿ ಮತ್ತು ಲೋಕಾಯುಕ್ತಗೆ ಮನವಿ ಮಾಡಿದ್ದಾರೆ.












Click it and Unblock the Notifications