ಗವಿಗಂಗಾಧರೇಶ್ವರನನ್ನು ಸ್ಪರ್ಶಿಸದ ಸೂರ್ಯರಶ್ಮಿ: ಯುದ್ದದ ಸೂಚಕ
ಬೆಂಗಳೂರು, ಜ 15: ಪ್ರತೀವರ್ಷ ಮಕರ ಸಂಕ್ರಾಂತಿಯ ಪರ್ವಕಾಲದಲ್ಲಿ ಐತಿಹಾಸಿಕ ಗವಿಗಂಗಾಧರೇಶ್ವರನನ್ನು ಸೂರ್ಯರಶ್ಮಿ ಸ್ಪರ್ಶಿಸುವ ಪ್ರಕೃತಿಯ ಅಚ್ಚರಿ ಈ ಬಾರಿ ನಡೆಯಲಿಲ್ಲ.
ಸೂರ್ಯಾಸ್ತವಾಗುವ ವೇಳೆ ಶಿವಲಿಂಗಕ್ಕೆ ಸೂರ್ಯರಶ್ಮಿಯ ಅಭಿಷೇಕವಾಗುತ್ತಿತ್ತು, ಈ ಐತಿಹಾಸಿಕ ಕ್ಷಣವನ್ನು ವೀಕ್ಷಿಸಲು ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ಆದರೆ, ಸಂಕ್ರಾಂತಿಯ ದಿನದಂದು ಮೋಡಕವಿದ ವಾತಾವರಣ ಇದ್ದಿದ್ದರಿಂದ ಈ ಬಾರಿ ಸೂರ್ಯರಶ್ಮಿಯ ಸ್ಪರ್ಶವಾಗಲಿಲ್ಲ.
ಸಂಜೆ 5.17ನಿಮಿಷಕ್ಕೆ ಸೂರ್ಯರಶ್ಮಿಯ ಸ್ಪರ್ಶವಾಗಬೇಕಿತ್ತು. ಸೂರ್ಯರಶ್ಮಿಯ ಪ್ರವೇಶ ದೇವಾಲಯ ಮತ್ತು ಗರ್ಭಗುಡಿಯೊಳಗೆ ಆದರೂ, ಅದು ಪ್ರತೀವರ್ಷ ನಡೆಯುವಂತೆ ಶಿವಲಿಂಗಕ್ಕೆ ಸ್ಪರ್ಶವಾಗಲಿಲ್ಲ. ಇದು ನಡೆಯದೇ ಇದ್ದಿದ್ದರಿಂದ ಗಂಗಾಧರೇಶ್ವರನಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.
ಈ ಬಗ್ಗೆ ವಿವರಣೆಯನ್ನು ನೀಡಿರುವ ದೇವಾಲಯದ ಪ್ರಧಾನ ಆರ್ಚಕರಾದ ಸೋಮಸುಂದರ್ ದೀಕ್ಷಿತ್ ಅವರು, "ಸೂರ್ಯನ ರಶ್ಮಿ ಶಿವಲಿಂಗಕ್ಕೆ ಬೀಳದೇ ಇರುವುದರಿಂದ ತಪ್ಪು ಕಲ್ಪನೆಯಲ್ಲಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ"ಎಂದು ಹೇಳಿದ್ದಾರೆ.

ಅರ್ಧ ಮಂಟಪವನ್ನು ಪ್ರವೇಶ ಮಾಡಿ, ಗರ್ಭಗೃಹಕ್ಕೆ ಪ್ರವೇಶ
"ಸೂರ್ಯದ್ವಾರದಿಂದ, ಶಿವದ್ವಾರದಿಂದ, ಬಸವಣ್ಣನನ್ನು ಪೂರ್ತಿ ಆವರಿಸಿ, ಅಲ್ಲಿಂದ ಶೃಂಗಗಳ ಮಧ್ಯದಿಂದ ಅರ್ಧ ಮಂಟಪವನ್ನು ಪ್ರವೇಶ ಮಾಡಿ, ಗರ್ಭಗೃಹಕ್ಕೆ ಪ್ರವೇಶ ಮಾಡಿದಾಗ, ಅಲ್ಲಿಗೆ ದಕ್ಷಿಣಾಯಣ ಮುಗಿಯುತು ಎನ್ನುವುದು ಪ್ರತೀತಿ. ದಕ್ಷಿಣಾಯಣದಿಂದ ಉತ್ತರಾಯಾಣಕ್ಕೆ ಬರುವ ಆರಂಭದ ಎರಡು ನಿಮಿಷ ಯಾವಾಗಲೂ ಸೂರ್ಯನ ಬೆಳಕು ಇರುವುದಿಲ್ಲ"ಎಂದು ದೀಕ್ಷಿತರು ಹೇಳಿದ್ದಾರೆ.

ಕೊರೊನಾ ಪೀಡೆಯಿಂದ ಜಗತ್ತು ತತ್ತರಿಸಿತು
ಮೋಡಕವಿದ ವಾತಾವರಣ ಇದ್ದಿದ್ದರಿಂದ, ಸ್ವಾಮಿಗೆ ಕ್ಷೀರಾಭಿಷೇಕವನ್ನು ಮಾಡುವಾಗ, ಸೂರ್ಯರಶ್ಮಿಯ ಸ್ಪರ್ಶವಾಗಬೇಕಿತ್ತೋ,ಅದು ಆಗಿಲ್ಲ. ಕಳೆದ ಬಾರಿ 2.36ನಿಮಿಷ ಸೂರ್ಯರಶ್ಮಿ ಶಿವಲಿಂಗದ ಮೇಲೆ ಇತ್ತು.ಆಗಲೇ, ಜಗತ್ತಿಗೆ ತೊಂದರೆ ಇದೆ ಎನ್ನುವುದನ್ನು ನಾನು ಹೇಳಿದ್ದೆ. ಅದರಂತೇ, ಕೊರೊನಾ ಪೀಡೆಯಿಂದ ಜಗತ್ತು ತತ್ತರಿಸಿತು. ಅದೇ ರೀತಿ, ಈ ಬಾರಿಯ ಘಟನೆಯೂ ಒಳ್ಳೆಯ ಲಕ್ಷಣವಲ್ಲ"ಎಂದು ದೀಕ್ಷಿತರು ಅಭಿಪ್ರಾಯ ಪಟ್ಟಿದ್ದಾರೆ.

ಯುದ್ದ ನಡೆಯುವ ಸಂಭವ ಇರಬಹುದು
"ಸ್ವಾಮಿ ಈ ಬಾರಿ ನಗೋಚರವಾಗಿ ಪೂಜೆಯನ್ನು ಮಾಡಿಸಿಕೊಂಡು ಹೋಗಿದ್ದಾನೆ. ಇದೇ ಕಾಲದಲ್ಲಿ ಮಹಾಭಾರತದ ಯುದ್ದ ನಡೆದದ್ದು, ಭೀಷ್ಮರು ಶರಶಯ್ಯೆಯಿಂದ ದೇಹ ವಿಸರ್ಜನೆ ಮಾಡಿದ್ದದ್ದು. ಯುದ್ದ ನಡೆಯುವ ಸಂಭವ ಇರಬಹುದು, ಆ ರೀತಿ ಆಗಬಾರದೆಂದು ವಿಶೇಷ ಸಂಕಲ್ಪ ಪೂಜೆಯನ್ನು ಮಾಡಿದ್ದೇವೆ. ನನ್ನ 53 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯಾಗಿದೆ"ಎಂದು ಸೋಮಸುಂದರ್ ದೀಕ್ಷಿತ್ ಹೇಳಿದ್ದಾರೆ.
Recommended Video

ವಿಶ್ವಕ್ಕೇ ಯುದ್ದದ ಭೀತಿ ಕಾಡಬಹುದು
"ವಿಶ್ವಕ್ಕೇ ಯುದ್ದದ ಭೀತಿ ಕಾಡಬಹುದು. ಮಹಾಭಾರತದಲ್ಲಿ ಹದಿನೆಂಟು ಅಕ್ಷೋಹಿಣಿ ಸೈನಿಕರು ಮೃತಪಟ್ಟಿದ್ದರು. ಲಯಕರ್ತನಾದ ಶಿವನನ್ನು ಮೃತ್ಯುಂಜಯ ಜಪ/ಹೋಮದ ಮೂಲಕ ಪ್ರಾರ್ಥನೆ ಮಾಡಿದರೆ ಒಳ್ಳೆಯದು. ನಾವು ಅತಿರುದ್ರ ಹೋಮ ನಡೆಸುವುದಾಗಿ ಸಂಕಲ್ಪವನ್ನು ಮಾಡಿದ್ದೇವೆ"ಎಂದು ದೀಕ್ಷಿತ್ ಹೇಳಿದ್ದಾರೆ.
-
ಇರಾನ್ನಲ್ಲಿ 1000 ದಾಟಿದ ಸಾವು: ಯುಎಸ್- ಇಸ್ರೇಲ್ ತೀವ್ರ ವಾಯುದಾಳಿಗೆ ಸಜ್ಜು, 10 ಪ್ರಮುಖಾಂಶಗಳು -
Gulf: ನಾವಿಲ್ಲಿ ಸುರಕ್ಷಿತ: ಕತಾರ್ ಸರ್ಕಾರದ ನೆರವು ನೆನೆದ ಕನ್ನಡಿಗರು -
Khamenei Funeral: ಮಾ.4ರಂದು ಆಯತೊಲ್ಲಾ ಅಲಿ ಖಮೇನಿಗೆ ಅಂತಿಮ ವಿದಾಯ, ಅಂತ್ಯಕ್ರಿಯೆ ಅಪ್ಡೇಟ್ -
Toxic release postponed: ಯಶ್ ಅಭಿಮಾನಿಗಳಿಗೆ ಆಘಾತ: "ಟಾಕ್ಸಿಕ್" ಸಿನಿಮಾ ಬಿಡುಗಡೆ ದಿಢೀರ್ ಮುಂದೂಡಿಕೆ -
Karnataka Weather: ರಾಜ್ಯದಲ್ಲಿ ಏರುತ್ತಿದೆ ಬಿಸಿಲಿನ ಝಳ; ಬೆಂಗಳೂರಿನ ತಾಪಮಾನ 34 ಡಿಗ್ರಿಗೆ ಏರಿಕೆ -
ಮಧ್ಯಪ್ರಾಚ್ಯ ಸಂಘರ್ಷ: ಕನ್ನಡಿಗರ ರಕ್ಷಣೆಗೆ ತುರ್ತು ಕ್ರಮಕ್ಕೆ ಆಗ್ರಹಿಸಿ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ -
Gold Rate: ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಹೀಗಿದೆ, ನಿಮ್ಮ ನಗರದ ದರ ಪರಿಶೀಲಿಸಿ -
ಹೆಚ್ಚಾದ ಇರಾನ್-ಇಸ್ರೇಲ್ ಯುದ್ಧದ ತೀವ್ರತೆ, 3ನೇ ಮಹಾಯುದ್ಧದ ಆತಂಕ: 10 ಪ್ರಮುಖಾಂಶಗಳು ಹೀಗಿವೆ -
Fuel Price: ತೀವ್ರಗೊಂಡ ಯುದ್ಧದ ಕಿಚ್ಚು, ಕಚ್ಚಾ ತೈಲ ದರ ಏರಿಕೆಯಾದರೂ ಪೆಟ್ರೋಲ್-ಡೀಸೆಲ್ ಬೆಲೆ ಸ್ಥಿರ -
Shares Price Drop: ಇರಾನ್-ಇಸ್ರೇಲ್ ಯುದ್ಧದಿಂದ ಈ ವೈಮಾನಿಕ ಸಂಸ್ಥೆಗಳ ಶೇರು ಮೌಲ್ಯ ಭಾರೀ ಕುಸಿತ -
Iran Vs Israel War: 7 ದೇಶಗಳಲ್ಲಿ ಇಂದಿನ CBSE ಬೋರ್ಡ್ ಪರೀಕ್ಷೆಗಳು ಮುಂದೂಡಿಕೆ -
ಇಸ್ರೇಲ್ - ಇರಾನ್ ಸಂಘರ್ಷ: ಭಾರತದ ಮೇಲೆ ನೇರ ಮತ್ತು ಪರೋಕ್ಷವಾಗಿ ಬೀರುವ ಪರಿಣಾಮಗಳು










Click it and Unblock the Notifications