ಗವಿಗಂಗಾಧರೇಶ್ವರನನ್ನು ಸ್ಪರ್ಶಿಸದ ಸೂರ್ಯರಶ್ಮಿ: ಯುದ್ದದ ಸೂಚಕ
ಬೆಂಗಳೂರು, ಜ 15: ಪ್ರತೀವರ್ಷ ಮಕರ ಸಂಕ್ರಾಂತಿಯ ಪರ್ವಕಾಲದಲ್ಲಿ ಐತಿಹಾಸಿಕ ಗವಿಗಂಗಾಧರೇಶ್ವರನನ್ನು ಸೂರ್ಯರಶ್ಮಿ ಸ್ಪರ್ಶಿಸುವ ಪ್ರಕೃತಿಯ ಅಚ್ಚರಿ ಈ ಬಾರಿ ನಡೆಯಲಿಲ್ಲ.
ಸೂರ್ಯಾಸ್ತವಾಗುವ ವೇಳೆ ಶಿವಲಿಂಗಕ್ಕೆ ಸೂರ್ಯರಶ್ಮಿಯ ಅಭಿಷೇಕವಾಗುತ್ತಿತ್ತು, ಈ ಐತಿಹಾಸಿಕ ಕ್ಷಣವನ್ನು ವೀಕ್ಷಿಸಲು ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ಆದರೆ, ಸಂಕ್ರಾಂತಿಯ ದಿನದಂದು ಮೋಡಕವಿದ ವಾತಾವರಣ ಇದ್ದಿದ್ದರಿಂದ ಈ ಬಾರಿ ಸೂರ್ಯರಶ್ಮಿಯ ಸ್ಪರ್ಶವಾಗಲಿಲ್ಲ.
ಸಂಜೆ 5.17ನಿಮಿಷಕ್ಕೆ ಸೂರ್ಯರಶ್ಮಿಯ ಸ್ಪರ್ಶವಾಗಬೇಕಿತ್ತು. ಸೂರ್ಯರಶ್ಮಿಯ ಪ್ರವೇಶ ದೇವಾಲಯ ಮತ್ತು ಗರ್ಭಗುಡಿಯೊಳಗೆ ಆದರೂ, ಅದು ಪ್ರತೀವರ್ಷ ನಡೆಯುವಂತೆ ಶಿವಲಿಂಗಕ್ಕೆ ಸ್ಪರ್ಶವಾಗಲಿಲ್ಲ. ಇದು ನಡೆಯದೇ ಇದ್ದಿದ್ದರಿಂದ ಗಂಗಾಧರೇಶ್ವರನಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.
ಈ ಬಗ್ಗೆ ವಿವರಣೆಯನ್ನು ನೀಡಿರುವ ದೇವಾಲಯದ ಪ್ರಧಾನ ಆರ್ಚಕರಾದ ಸೋಮಸುಂದರ್ ದೀಕ್ಷಿತ್ ಅವರು, "ಸೂರ್ಯನ ರಶ್ಮಿ ಶಿವಲಿಂಗಕ್ಕೆ ಬೀಳದೇ ಇರುವುದರಿಂದ ತಪ್ಪು ಕಲ್ಪನೆಯಲ್ಲಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ"ಎಂದು ಹೇಳಿದ್ದಾರೆ.

ಅರ್ಧ ಮಂಟಪವನ್ನು ಪ್ರವೇಶ ಮಾಡಿ, ಗರ್ಭಗೃಹಕ್ಕೆ ಪ್ರವೇಶ
"ಸೂರ್ಯದ್ವಾರದಿಂದ, ಶಿವದ್ವಾರದಿಂದ, ಬಸವಣ್ಣನನ್ನು ಪೂರ್ತಿ ಆವರಿಸಿ, ಅಲ್ಲಿಂದ ಶೃಂಗಗಳ ಮಧ್ಯದಿಂದ ಅರ್ಧ ಮಂಟಪವನ್ನು ಪ್ರವೇಶ ಮಾಡಿ, ಗರ್ಭಗೃಹಕ್ಕೆ ಪ್ರವೇಶ ಮಾಡಿದಾಗ, ಅಲ್ಲಿಗೆ ದಕ್ಷಿಣಾಯಣ ಮುಗಿಯುತು ಎನ್ನುವುದು ಪ್ರತೀತಿ. ದಕ್ಷಿಣಾಯಣದಿಂದ ಉತ್ತರಾಯಾಣಕ್ಕೆ ಬರುವ ಆರಂಭದ ಎರಡು ನಿಮಿಷ ಯಾವಾಗಲೂ ಸೂರ್ಯನ ಬೆಳಕು ಇರುವುದಿಲ್ಲ"ಎಂದು ದೀಕ್ಷಿತರು ಹೇಳಿದ್ದಾರೆ.

ಕೊರೊನಾ ಪೀಡೆಯಿಂದ ಜಗತ್ತು ತತ್ತರಿಸಿತು
ಮೋಡಕವಿದ ವಾತಾವರಣ ಇದ್ದಿದ್ದರಿಂದ, ಸ್ವಾಮಿಗೆ ಕ್ಷೀರಾಭಿಷೇಕವನ್ನು ಮಾಡುವಾಗ, ಸೂರ್ಯರಶ್ಮಿಯ ಸ್ಪರ್ಶವಾಗಬೇಕಿತ್ತೋ,ಅದು ಆಗಿಲ್ಲ. ಕಳೆದ ಬಾರಿ 2.36ನಿಮಿಷ ಸೂರ್ಯರಶ್ಮಿ ಶಿವಲಿಂಗದ ಮೇಲೆ ಇತ್ತು.ಆಗಲೇ, ಜಗತ್ತಿಗೆ ತೊಂದರೆ ಇದೆ ಎನ್ನುವುದನ್ನು ನಾನು ಹೇಳಿದ್ದೆ. ಅದರಂತೇ, ಕೊರೊನಾ ಪೀಡೆಯಿಂದ ಜಗತ್ತು ತತ್ತರಿಸಿತು. ಅದೇ ರೀತಿ, ಈ ಬಾರಿಯ ಘಟನೆಯೂ ಒಳ್ಳೆಯ ಲಕ್ಷಣವಲ್ಲ"ಎಂದು ದೀಕ್ಷಿತರು ಅಭಿಪ್ರಾಯ ಪಟ್ಟಿದ್ದಾರೆ.

ಯುದ್ದ ನಡೆಯುವ ಸಂಭವ ಇರಬಹುದು
"ಸ್ವಾಮಿ ಈ ಬಾರಿ ನಗೋಚರವಾಗಿ ಪೂಜೆಯನ್ನು ಮಾಡಿಸಿಕೊಂಡು ಹೋಗಿದ್ದಾನೆ. ಇದೇ ಕಾಲದಲ್ಲಿ ಮಹಾಭಾರತದ ಯುದ್ದ ನಡೆದದ್ದು, ಭೀಷ್ಮರು ಶರಶಯ್ಯೆಯಿಂದ ದೇಹ ವಿಸರ್ಜನೆ ಮಾಡಿದ್ದದ್ದು. ಯುದ್ದ ನಡೆಯುವ ಸಂಭವ ಇರಬಹುದು, ಆ ರೀತಿ ಆಗಬಾರದೆಂದು ವಿಶೇಷ ಸಂಕಲ್ಪ ಪೂಜೆಯನ್ನು ಮಾಡಿದ್ದೇವೆ. ನನ್ನ 53 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯಾಗಿದೆ"ಎಂದು ಸೋಮಸುಂದರ್ ದೀಕ್ಷಿತ್ ಹೇಳಿದ್ದಾರೆ.
Recommended Video

ವಿಶ್ವಕ್ಕೇ ಯುದ್ದದ ಭೀತಿ ಕಾಡಬಹುದು
"ವಿಶ್ವಕ್ಕೇ ಯುದ್ದದ ಭೀತಿ ಕಾಡಬಹುದು. ಮಹಾಭಾರತದಲ್ಲಿ ಹದಿನೆಂಟು ಅಕ್ಷೋಹಿಣಿ ಸೈನಿಕರು ಮೃತಪಟ್ಟಿದ್ದರು. ಲಯಕರ್ತನಾದ ಶಿವನನ್ನು ಮೃತ್ಯುಂಜಯ ಜಪ/ಹೋಮದ ಮೂಲಕ ಪ್ರಾರ್ಥನೆ ಮಾಡಿದರೆ ಒಳ್ಳೆಯದು. ನಾವು ಅತಿರುದ್ರ ಹೋಮ ನಡೆಸುವುದಾಗಿ ಸಂಕಲ್ಪವನ್ನು ಮಾಡಿದ್ದೇವೆ"ಎಂದು ದೀಕ್ಷಿತ್ ಹೇಳಿದ್ದಾರೆ.
-
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್: ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ, ಮಹತ್ವ ಮಾತುಕತೆ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಇರಾನ್ ಮೇಲೆ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸುವುದಾಗಿ ಡೊನಾಲ್ಡ್ ಟ್ರಂಪ್ ಘೋಷಣೆ, ಇರಾನ್ ಮುಂದೆ ಮಂಡಿಯೂರಿತೇ ಅಮೆರಿಕ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ











Click it and Unblock the Notifications