ರಾಜಧಾನಿಯಲ್ಲಿ ಮಳೆ: ತಂಪಾಯ್ತು ಬೆಂಗಳೂರು
ಉದ್ಯಾನ ನಗರಿ ಬೆಂಗಳೂರಿನಲ್ಲಿ ಇಂದು ಮಳೆಯಾಗಿದ್ದು, ಬಿಸಿಲ ಬೇಗೆಯಲ್ಲಿ ಬೆಂದಿದ್ದ ರಾಜಧಾನಿಯ ಜನರು ಕೊಂಚ ನಿರಾಳರಾಗಿದ್ದಾರೆ.
ಬೆಂಗಳೂರು, ಏಪ್ರಿಲ್ 17: ಬಿಸಿಲ ಬೇಗೆಗೆ ಬಸವಳಿದ್ದಿದ್ದ ರಾಜಧಾನಿಯ ಜನರಿಗೆ ಇಂದು ಕೊಂಚ ಸಮಾಧಾನವಾಗಿದೆ. ಯಶವಂತಪುರ, ಆಡುಗೋಡಿ, ಶಾಂತಿನಗರ, ಮೆಜೆಸ್ಟಿಕ್, ಕೋರಮಂಗಲ, ಹೊಸೂರು ಮುಖ್ಯರಸ್ತೆ ಸೇರಿದಂತೆ ರಾಜಧಾನಿಯ ಹಲವೆಡೆ ಇಂದು ಗಾಳಿ ಸಹಿತ ಮಳೆಯಾಗಿದೆ.
ಉದ್ಯಾನನಗರಿ ಕೊಂಚ ತಂಪಾಗಿದ್ದರೂ, ಹಲವು ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಸಂಚಾರ ಅಸ್ತವ್ಯಸ್ಥಗೊಂಡಿದೆ. ಆನೇಕಲ್ ತಾಲೂಕು ಮತ್ತು ಅತ್ತಿಬೆಲೆಯಲ್ಲೂ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.













Click it and Unblock the Notifications