ಬೆಂಗಳೂರಿನಲ್ಲಿ ಮಾರ್ಚ್ 9 ಕ್ಕೆ ಯೋಗಿ ಶ್ರೀ ಎಂ ಉಪನ್ಯಾಸ, ನಾಸ್ತಿಕರಿಗೂ ಯೋಗ ಪುಸ್ತಕ ಬಿಡುಗಡೆ
ಬೆಂಗಳೂರು: ಪದ್ಮಭೂಷಣ ಪುರಸ್ಕೃತರೂ ಹಾಗೂ ಅಧ್ಯಾತ್ಮ ಚಿಂತಕರೂ ಆದ ಯೋಗಿ ಶ್ರೀ ಎಂ (ಮುಮ್ತಾಜ್ ಅಲಿ ಖಾನ್) ಅವರ ವಿಶೇಷ ಉಪನ್ಯಾಸವು ನಗರದಲ್ಲಿ ಮಾರ್ಚ್ 9 ರಂದು ನಡೆಯಲಿದೆ. ತಮ್ಮ ವಿಶಿಷ್ಟ ಅಧ್ಯಾತ್ಮ ಚಿಂತನೆಗಳಿಂದ ಅಪಾರ ಅನುಯಾಯಿಗಳನ್ನು ಹೊಂದಿರುವ ಶ್ರೀ ಎಂ ಅವರ ನಗರ ಭೇಟಿಯು ಹಲವರ ಗಮನ ಸೆಳೆದಿದೆ. ಈ ಕಾರ್ಯಕ್ರಮಕ್ಕೂ ಅಪಾರ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ ಹುಟ್ಟುಹಾಕಿದೆ.
ಯೋಗಿ ಶ್ರೀ ಎಂ ಅವರು ಕೇರಳದ ತಿರುವನಂತಪುರದಲ್ಲಿ 6 ನವೆಂಬರ್ 1948 ರಂದು ಜನಿಸಿದರು. ಬಾಲ್ಯದಲ್ಲಿಯೇ ಆತ್ಮಸಾಕ್ಷಾತ್ಕಾರದ ಹಂಬಲದಿಂದ ಹಿಮಾಲಯಕ್ಕೆ ತೆರಳಿ ತಮ್ಮ ಗುರು ಮಹೇಶ್ವರನಾಥರಿಂದ ಯೋಗಿಗಳಿಂದ ಕ್ರಿಯಾಯೋಗ ದೀಕ್ಷೆಯನ್ನು ಪಡೆದರು.
ಗೃಹಸ್ಥಾಶ್ರಮದಲ್ಲಿದ್ದುಕೊಂಡೇ ಯೋಗಸಾಧನೆಯನ್ನು ನಡೆಸುತ್ತಾ, ಸರ್ವಧರ್ಮ ಸೌಹಾರ್ದ ಮತ್ತು ಮಾನವ ಏಕತೆಯ ಸಂದೇಶವನ್ನು ಜಗತ್ತಿನಾದ್ಯಂತ ಹರಡಲು ಬದುಕು ಮುಡಿಪಿಟ್ಟರು. ಅವರ ಆತ್ಮಚರಿತ್ರೆಯಾದ "ಹಿಮಾಲಯ ಗುರುವಿನ ಗರಡಿಯಲ್ಲಿ" ಅನೇಕ ಭಾಷೆಗಳಿಗೆ ಅನುವಾದಗೊಂಡು ದಾಖಲೆಯ ಮಾರಾಟವನ್ನು ಕಂಡಿದೆ.

ವಿಸ್ಮಯಕಾರಿ ಹಾಗೂ ಮಾನವಾತೀತ ಅನುಭವಗಳನ್ನು ಅವರು ತಮ್ಮ ಆತ್ಮಚರಿತ್ರೆಯಲ್ಲಿ ಸ್ಫುಟವಾಗಿಯೂ ನಿರ್ಭೀತಿಯಿಂದಲೂ ಹಂಚಿಕೊಂಡಿದ್ದಾರೆ. ಉಪನಿಷತ್ತುಗಳು, ವೇದಾಂತ, ಭಗವದ್ಗೀತೆ, ಕ್ರಿಯಾಯೋಗ ಮತ್ತು ಸೂಫಿ ತತ್ತ್ವಗಳಲ್ಲಿ ಪರಿಣತಿ ಹೊಂದಿರುವ ಶ್ರೀ ಎಂ ಅವರ ಸಂದೇಶ ಸರಳ ಮತ್ತು ಸ್ಪಷ್ಟ - "ಒಳತಿರುಳನ್ನು ಗ್ರಹಿಸಬೇಕು; ಕೇವಲ ತತ್ತ್ವಗಳಿಂದ ಪ್ರಯೋಜನವಿಲ್ಲ."
ಬೆಂಗಳೂರು ಭೇಟಿ, ಉಪನ್ಯಾಸ
ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಮಾರ್ಚ್ 9 ರಂದು ಸಂಜೆ 6 ರಿಂದ 7ರವರೆಗೂ ಶ್ರೀ ಎಂ ಅವರಿಂದ "ಸಾಮಾನ್ಯ ಮನಸಿನಾಚೆಗೆ - ಉಪನಿಷತ್ತಿನ ದೃಷ್ಟಿಕೋನ" ಎಂಬ ವಿಷಯದ ಕುರಿತು ಇಂಗ್ಲೀಷಿನಲ್ಲಿ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಆಸಕ್ತರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಈ ಸುಸಂದರ್ಭದಲ್ಲೇ ಶ್ರೀ ಎಂರವರ Yoga Also for the Godless ಪುಸ್ತಕದ ಕನ್ನಡ ಅನುವಾದ
"ಯೋಗ - ನಾಸ್ತಿಕರಿಗೂ ಸಹ" ಬಿಡುಗಡೆಯಾಗಲಿದೆ.
-
Toxic release postponed: ಯಶ್ ಅಭಿಮಾನಿಗಳಿಗೆ ಆಘಾತ: "ಟಾಕ್ಸಿಕ್" ಸಿನಿಮಾ ಬಿಡುಗಡೆ ದಿಢೀರ್ ಮುಂದೂಡಿಕೆ -
ಕರ್ನಾಟಕ ವಿದ್ಯುತ್ ನಿಗಮ ಬೆಳಕಿನ ಸಂಸ್ಥೆಗೆ ಕತ್ತಲೆಯ ಛಾಯೆ: ಸರ್ಕಾರಿ ನಿರ್ಲಕ್ಷದ ಒಳನೋಟ -
Bengaluru: ‘92 ಲಕ್ಷದ ಪ್ಯಾಕೇಜ್ ಇದ್ದರೂ ಉಳಿಯಲಿಲ್ಲ ಕೆಲಸ’; ಒಂದೇ ದಿನ ಶೇ. 40ರಷ್ಟು ಸಿಬ್ಬಂದಿ ವಜಾ ಮಾಡಿದ ಐಟಿ ಕಂಪನಿ -
Karna Serial: "ಕರ್ಣ" ಧಾರಾವಾಹಿಯಿಂದ ಹೊರಬಂದ ಟಿ.ಎಸ್.ನಾಗಾಭರಣ, ಹಿರಿಯ ನಟ ಅಭಿಜಿತ್ ಎಂಟ್ರಿ -
Gold Rate: ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಹೀಗಿದೆ, ನಿಮ್ಮ ನಗರದ ದರ ಪರಿಶೀಲಿಸಿ -
'ವಂತಾರ'ಕ್ಕೆ ಒಂದು ವರ್ಷ: ಆರೋಗ್ಯ ಸುಧಾರಿಸಿದ ಅನೇಕ ಪ್ರಾಣಿಗಳು ಮರಳಿ ಕಾಡಿಗೆ -
Elnaaz Norouzi: ಭಾರತದಲ್ಲೇ ನೆಲೆಸಿದ್ದಾರೆ ಇರಾನ್ ಸುಂದರಿ, ಮತ್ತೆ ಅಲ್ಲಿಗೆ ಕಾಲಿಟ್ಟರೆ ನನ್ನ ಕೊಲ್ತಾರೆ ಎಂದ ನಟಿ ಎಲ್ನಾಜ್ -
South India: ದಕ್ಷಿಣ ಭಾರತದಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಭಾವ: ತಮಿಳುನಾಡು ಮುನ್ನಡೆ, ಕರ್ನಾಟಕದಲ್ಲಿ ಏಕೆ ಹಿನ್ನಡೆ -
Middle East War: ಗಲ್ಫ್ ದೇಶಗಳಿಗೆ ರಫ್ತು ಸ್ಥಗಿತ; ರಾಜ್ಯದಲ್ಲೇ ಉಳಿದ ತರಕಾರಿ, ಮೊಟ್ಟೆ, ಹಾಲಿನ ಉತ್ಪನ್ನ- ರೈತರು ಕಂಗಾಲು -
Bengaluru: ಗೊರಗುಂಟೆಪಾಳ್ಯದ ಟ್ರಾಫಿಕ್ಗೆ ಸಿಗಲಿದ್ಯಾ ಮುಕ್ತಿ? ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು 'ಸುರಂಗ ರಸ್ತೆ' ಪ್ರಸ್ತಾಪ -
Rama Navami 2026: ಶ್ರೀರಾಮನವಮಿ ದಿನಾಂಕ, ಮುಹೂರ್ತ, ಮಹತ್ವ, ಪೂಜಾ ವಿಧಾನ ಸೇರಿ ಸಂಪೂರ್ಣ ವಿವರ -
ಅಮೆರಿಕ ಮತ್ತು ಬ್ರಿಟನ್ ನಡುವೆ ಬಿರುಕು, ಡೊನಾಲ್ಡ್ ಟ್ರಂಪ್ ತೀವ್ರ ಅಸಮಾಧಾನ | Operation Roaring Lion












Click it and Unblock the Notifications