ಹೆಂಗಿತ್ತು ಸೋಂಪುರ ಗ್ರಾಮ ಹೇಗಾಯ್ತು ಗೊತ್ತಾ
ಬೆಂಗಳೂರು, ಮಾ.21: ಸರ್ಕಾರಿ ಹಾಗೂ ಖಾಸಗಿ ಅಭಿವೃದ್ಧಿ ಯೋಜನೆಗಳಲ್ಲಿ ರೈತರು ಮತ್ತು ಸಾಮಾನ್ಯ ಜನರು ಭೂಮಿ, ಆಶ್ರಯಕ್ಕಾಗಿರುವ ಸೂರನ್ನು ಕಳೆದುಕೊಳ್ಳುವುದು ಸಹಜ. ಅವರಿಗೆ ಪರಿಹಾರವೆಂದು ಅಷ್ಟಿಷ್ಟು ಹಣವನ್ನು ನೀಡಿ ಕೈತೊಳೆದುಕೊಳ್ಳುವುದು ರೂಢಿಯಾಗಿ ಬಿಟ್ಟಿದೆ.
ಆದರೆ, ನಂದಿ ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ ಪ್ರೈಸಸ್ (ನೈಸ್) ಯೋಜನೆಗಾಗಿ ಭೂಮಿ ಕೊಟ್ಟವರಿಗೆ ಈ ಯಾವುದೇ ಭಯ ಇಲ್ಲ. ಯಾಕೆಂದರೆ ಇವರಿಗೆಲ್ಲಾ ಊಹೆಗಿಂತ ಹೆಚ್ಚಾಗಿ ನೈಸ್, ಕಾಂಕ್ರೀಟ್ ಮನೆಗಳನ್ನು ಸೋಂಪುರ ಗ್ರಾಮದಲ್ಲಿ ಕಟ್ಟಿಕೊಟ್ಟಿದೆ.

ಭೂಮಿ ಕೊಟ್ಟವರಿಗೆ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಪರಿಹಾರ ಧನ ನೀಡಿ ಮನೆಗೊಬ್ಬರಿಗಂತೆ ಸಂಸ್ಥೆಯಲ್ಲಿ ಉದ್ಯೋಗ ಒದಗಿಸಲಾಗಿದೆ. ಜೊತೆಗೆ ಮನೆ ಕೊಟ್ಟವರ ಹಿಂದಿನ ಮನೆಯ ಎರಡು ಪಟ್ಟು ಹೆಚ್ಚಿನ ಅಳತೆಯಲ್ಲಿ ಸುಸಜ್ಜಿತ ಮನೆಗಳನ್ನು ಕಟ್ಟಿಕೊಡಲಾಗಿದೆ. ಇದರ ಜೊತೆಗೆ ಇವುಗಳ ಉಸ್ತುವಾರಿಯನ್ನು ನೈಸ್ ಸಂಸ್ಥೆಯೇ ನೋಡಿಕೊಳ್ಳುತ್ತಿದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ನಗರದ ಮನೆಗಳಂತೆ ವಿಶಾಲವಾದ ಹಾಲ್, ದೊಡ್ಡದಾದ ಬೆಡ್ ರೂಂಗಳು, ಅಚ್ಚುಕಟ್ಟಾದ ಅಡುಗೆಮನೆ, ದೇವರ ಮನೆ, ಸ್ನಾನದ ಕೋಣೆ ಹೀಗೆ ಎಲ್ಲಾ ಸೌಲಭ್ಯಗಳನ್ನು ಸೋಂಪುರದ ನಿವಾಸಿಗಳಿಗೆ ನೀಡಲಾಗಿದೆ.
ಇನ್ನು ಈ ಮನೆಗಳ ನಿರ್ಮಾಣದ ವೆಚ್ಚವೆಲ್ಲಾ ನೈಸ್ ಸಂಸ್ಥೆಯದ್ದು. ಈ ಮನೆಗಳನ್ನು ಮನೆಯ ಯಜಮಾನನ ಬದಲಾಗಿ ಆತನ ಪತ್ನಿಯ ಹೆಸರಲ್ಲಿ ನೋಂದಾವಣಿ ಮಾಡಿಸಲಾಗಿದೆ. ಇದರಿಂದ ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುತ್ತೆ ಅಂತಾರೆ ನೈಸ್ ಸಂಸ್ಥೆ ಅಧಿಕಾರಿಗಳು.

ಇಪ್ಪತ್ತಮೂರಕ್ಕಿಂತಲೂ ಹೆಚ್ಚು ಮನೆಗಳಿದ್ದ ಈ ಹಳ್ಳಿಯನ್ನು ಈಗ ಸಂಪೂರ್ಣವಾಗಿ ನವೀಕರಿಸಲಾಗಿದೆ. ಇನ್ನು ಇದರ ಪಕ್ಕದ ವರಾಹಸಂದ್ರ ಹಳ್ಳಿಯಲ್ಲಿ ವಿಜಯನಗರ ಕಾಲದ ನಂದಿ ದೇವಾಲಯವಿತ್ತು. ಆ ದೇವಾಲಯವನ್ನು ಅದೇ ಸ್ಥಳದಲ್ಲಿ ಹೊಸ ಮಾದರಿಯಲ್ಲಿ ನಿರ್ಮಿಸಲಾಗಿದೆ. ಇನ್ನು ಇದರ ಪೂಜೆಗಾಗಿ ಒಂದು ಅರ್ಚಕರ ಕುಟುಂಬಕ್ಕೆ ಇಲ್ಲಿ ವ್ಯವಸ್ಥೆ ಮಾಡಲಾಗಿದೆ.
ಈ ನವೀಕರಿಸಲಾಗಿರುವ ಹಳ್ಳಿಯಲ್ಲಿ ವಿದ್ಯುತ್, ಒಳಚರಂಡಿ, ಕುಡಿಯುವ ನೀರಿಗಾಗಿ ಬೃಹತ್ತಾದ ಟ್ಯಾಂಕ್, ಕೇಬಲ್ ಕನೆಕ್ಷನ್, ಟಾರ್ ರಸ್ತೆ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಜನರಿಗೆ ನೀಡಲಾಗಿದೆ.
ಒಟ್ಟು 143 ಹಳ್ಳಿಗಳು, 246 ಕೆರೆಗಳು, 26 ದೇವಾಲಯಗಳು, ಪ್ರಾಥಮಿಕ ಶಾಲೆಗಳು, ಹಳ್ಳಿಗೊಂದರಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಜೊತೆಗೆ ಇನ್ನೂ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವ ಯೋಜನೆ ನೈಸ್ ಸಂಸ್ಥೆಗಿದೆ. (ಒನ್ಇಂಡಿಯಾ ಕನ್ನಡ)
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications