ಬೆಂಗಳೂರಿನ ಉತ್ತರಾಧಿಮಠದಲ್ಲಿ 'ಹರಿದಾಸ ಹಬ್ಬ'

ಬೆಂಗಳೂರು, ಏಪ್ರಿಲ್ 14: ನಗರದ ಉತ್ತರಾಧಿಮಠವು 'ಹರಿದಾಸ ಹಬ್ಬ'ವನ್ನು ಏ.22 ರಿಂದ ಏ. 27ರವರೆಗೆ ನ್ಯಾಷನಲ್ ಕಾಲೇಜು ಬಳಿ ಇರುವ ಉತ್ತರಾಧಿಮಠದಲ್ಲಿ ಹಮ್ಮಿಕೊಂಡಿದೆ. ಉತ್ತರಾಧಿ ಮಠದ ಸತ್ಯಾರ್ಥತೀರ್ಥ ಸ್ವಾಮೀಜಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿದ್ದಾರೆ.

ಲೇಖಕ ಡಾ. ಎ.ಬಿ ಶ್ಯಾಮಾಚಾರ್ಯ ಅವರಿಗೆ ಪ್ರಸನ್ನ ವೆಂಕಟ ಪುರಸ್ಕಾರ ನೀಡಲಾಗುತ್ತದೆ. ಏ.23ರಿಂದ 27ರವರೆಗೆ ವಿ. ಜೆ.ಎಸ್. ಶ್ರೀಕಂಠ ಭಟ್ ಸಹಕಲಾವಿದರು, ಪರಿಮಳಾ ಗಿರಿಯಾಚಾರ್ ಸಹಕಲಾವಿದರು, ರಾಯಚೂರು ಶೇಷಗಿರಿ ರಾವ್, ಪುತ್ತೂರು ನರಸಿಂಹನಾಯಕ್, ಅನಂತ ಕುಲಕರ್ಣಿ ಹಾಗೂ ಸಹ ಕಲಾವಿದರಿಂದ ದಾಸವಾಣಿ ಕಾರ್ಯಕ್ರಮ ನಡೆಯಲಿದೆ.

Six days Haridasa habba festival from April 22

ಹರಿದಾಸ ಹಬ್ಬ ಎಂದರೆ ಭಕ್ತರು ಭಗವಂತನಿಗೆ ದಾಸನಾಗುವ ಒಂದು ಪ್ರಕ್ರಿಯೆಯಾಗಿದೆ. ಇದು ದಾಸರ ಹಬ್ಬ, ಈ ಹಬ್ಬಕ್ಕೆ ಇಂತಿಷ್ಟೇ ದಿನಗಳು ಸೀಮಿತವಾಗಬೇಕಿಲ್ಲ. ಪ್ರತಿ ದಿನವೂ ಹಬ್ಬ ಮಾಡುತ್ತಾ ಭಗವಂತನನ್ನು ಆರಾಧಿಸಬಹುದಾಗಿದೆ. ಒಟ್ಟು ಒಂದು ವಾರಗಳ ಕಾಲ ದಾಸವಾಣಿ ಕಾರ್ಯಕ್ರಮ ಜರುಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+