ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ಮೊಬೈಲ್ ಹೇಗೆ ತಲುಪಿಸುತ್ತಿದ್ದರು ಗೊತ್ತೇ?
ಬೆಂಗಳೂರು, ಡಿಸೆಂಬರ್ 8: ಪರಪ್ಪನ ಅಗ್ರಹಾರ ಕೇಂದ್ರೀಯ ಕಾರಾಗೃಹಕ್ಕೆ ಪೂರೈಕೆಯಾಗುವ ಊಟದ ಜೊತೆ 6 ಮೊಬೈಲ್ಗಳು ಪತ್ತೆಯಾಗಿವೆ. ಮೂವರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಟಾಟಾ 207 ವಾಹನದ ಮಾಲೀಕ ಗುತ್ತಿಗೆದಾರ ಸುರೇಶ್ ಬಾಬು ಮತ್ತು ಚಾಲಕ, ಆಹಾರ ತಯಾರಕನನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆಗೆ ಪರಪ್ಪನ ಅಗ್ರಹಾರ ಪೊಲೀಸರು ವಶಕ್ಕೆ ಪಡೆದಿರುವುದಾಗಿ ಆಗ್ನೇಯ ವಿಭಾಗ ಡಿಸಿಪಿ ಡಾ ಎಂ.ಬಿ ಬೋರಲಿಂಗಯ್ಯ ತಿಳಿಸಿದ್ದಾರೆ.
ಪ್ರತಿದಿನ ಕೈದಿಗಳಿಗೆ ಆಹಾರ ಪದಾರ್ಥಗಳನ್ನು ವಾಹನದಲ್ಲಿ ಸರಬರಾಜು ಮಾಡಲಾಗುತ್ತಿತ್ತು. ಶುಕ್ರವಾರ ಬೆಳಗ್ಗೆ 11 ಗಂಟೆಗೆ ಸುರೇಶ್ ಬಾಬು ಮತ್ತು ಇಬ್ಬರು ಸಹಾಯಕ ಜೊತೆ ಮಟನ್ ಸೇರಿ ಇತರೆ ಪದಾರ್ಥಗಳನ್ನು ವಾಹನದಲ್ಲಿ ತಂದಿದ್ದ, ಜೈಲಿನ ಮುಖ್ಯದ್ವಾರದಲ್ಲಿ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ ವಾಹನ ತಪಸಾಣೆ ನಡೆಸುತ್ತಿದ್ದ ವೇಳೆ ಡೀಸೆಲ್ ಟ್ಯಾಂಕ್ ಹತ್ತಿರ ರಹಸ್ಯ ಬಾಕ್ಸ್ ಪತ್ತೆಯಾಗಿದೆ.

ಅನುಮಾನ ಬಂದು ಬಾಕ್ಸ್ ತೆಗೆದು ನೋಡಿದಾಗ ಆರು ಆಂಡ್ರಾಯ್ಡ್ ಮೊಬೈಲ್ಗಳು ಪತ್ತೆಯಾಗಿವೆ. ಪೊಲೀಸರು ತೆರಳಿ ವಾಹನ ಮತ್ತು ಮೊಬೈ ಜಪ್ತಿ ಮಾಡಿದ್ದಾರೆ. ಬಳಿಕ ಮೂವರನ್ನು ಬಂಧಿಸಲಾಗಿದೆ.












Click it and Unblock the Notifications