Get Updates
Get notified of breaking news, exclusive insights, and must-see stories!

Sir M Visvesvaraya Terminal: ₹314 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ರೈಲ್ವೆ ಟರ್ಮಿನಲ್‌ನಲ್ಲಿ ಪ್ರಯಾಣಿಕರ ಪರದಾಟ-ಯಾಕೆ?

Sir M Visvesvaraya Terminal: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜಗತ್ತಿನ ಅತ್ಯಂತ ಸುಂದರ ವಿಮಾನ ನಿಲ್ದಾಣಗಳಲ್ಲೊಂದಾಗಿದೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೇ ರೀತಿ ನಿರ್ಮಾಣ ಮಾಡಲಾದ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಇದೀಗ ಕಳೆಪೆ ನಿರ್ವಹಣೆ ಪಟ್ಟವನ್ನು ಪಡೆದುಕೊಂಡಿದೆ. ಹಾಗಾದರೆ ಈ ಟರ್ಮಿನಲ್‌ ಅನ್ನು ಎಷ್ಟು ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ ಹಾಗೂ ಇಲ್ಲಿ ಏನೆಲ್ಲ ಸಮಸ್ಯೆಗಳಿವೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ವಿಮಾನ ನಿಲ್ದಾಣ ಮಾದರಿಯಲ್ಲೇ ಪ್ರಯಾಣಿಕರಿಗೆ ಐಷಾರಾಮಿ ಸೌಲಭ್ಯ ಕಲ್ಪಿಸುವ ಸಲುವಾಗಿ 314 ಕೋಟಿ ರೂಪಾಯಿ ವೆಚ್ಚದಲ್ಲಿ ಬೈಯಪ್ಪನಹಳ್ಳಿಯಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಿರ್ಮಾಣ ಮಾಡಲಾಗಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಂತೆ ಇದೆ. ಆದರೆ ಎಲ್ಲಾ ಕಡೆ ಕಳಪೆ ನಿರ್ವಹಣೆಯಿಂದ ಕೂಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ ಅಂತಾ ಕನ್ನಡಪ್ರಭ ವರದಿ ಮಾಡಿದೆ.

Sir M Visvesvaraya Terminal Passengers worried at 314 Crore Railway Terminal-why

ಟಿಕೆಟ್‌ ಪಡೆಯುವ ಪ್ರದೇಶ ಹಾಗೂ ನೆಲ ಮಹಡಿಯಲ್ಲಿ ವೇಟಿಂಗ್ ಹಾಲ್‌ಗಳು, ಮೊದಲ ಮಹಡಿಯಲ್ಲಿ ಆಹಾರ ಕೌಂಟರ್‌ಗಳನ್ನು ಒಳಗೊಂಡಿರುವ ಪ್ರದೇಶವನ್ನು ಸಂಪೂರ್ಣ ಹವಾನಿಯಂತ್ರಿತವಾಗಿ ಮಾಡಲಾಗಿದೆ. ಇದು ಭಾರತದಲ್ಲಿ ಮೊದಲನೆಯದಾಗಿದೆ. ಇನ್ನು ಇದರ ಆವರಣದಲ್ಲಿರುವ ಕಟ್ಟಡದಲ್ಲಿ ಮೂರು ಚಿಲ್ಲಿಂಗ್ ಪ್ಲಾಂಟ್‌ಗಳನ್ನು ಸ್ಥಾಪನೆ ಮಾಡಲಾಗಿದೆ.

ಇನ್ನು ಇದೀಗ ಬೆಂಗಳೂರಿನಲ್ಲಿ ಪ್ರತಿನಿತ್ಯವೂ ತಾಪಮಾನ ಏರಿಕೆ ಆಗುತ್ತಿದ್ದು, ಈ ಪ್ಲಾಂಟ್‌ಗಳಲ್ಲಿ ಪದೇ ಪದೇ ಸಮಸ್ಯೆಗಳು ಉಂಟಾಗುತ್ತಿದೆ. ಇದರಿಂದ ಸಾರ್ವಜನಿಕರು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇಲ್ಲಿನ ಎರಡು ಸ್ಥಾವರಗಳು ಕಾರ್ಯನಿರ್ವಹಿಸುತ್ತಿಲ್ಲ. ಆದರೆ ಒಂದು ಕಾರ್ಯನಿರ್ವಹಿಸುತ್ತಿದೆ ಎಂದು ಇನ್ನೂ ಕೆಲವು ಮೂಲಗಳು ತಿಳಿಸಿವೆ. "ಕಾನ್ಕೋರ್ಸ್ ಪ್ರದೇಶವು ದೊಡ್ಡದಾಗಿದೆ. ಎಲ್ಲಾ ಮೂರು ಪ್ಲಾಂಟ್‌ಗಳು ಕೆಲಸ ಮಾಡಿದರೆ ಮಾತ್ರ ಒಳಗೆ ತಂಪಾಗಿರುತ್ತದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ನಿಲ್ದಾಣದ ತುದಿಯಲ್ಲಿ ಬೃಹತ್ ಬ್ಲೋವರ್‌ಗಳು ಒಳಗೆ ಗಾಳಿಯಲ್ಲಿ ಪಂಪ್ ಮಾಡುವುದನ್ನು ಕಂಡುಬಂದಿತು. ಆದರೆ ಅದು ಸೀಮಿತ ವ್ಯಾಪ್ತಿಯನ್ನು ಹೊಂದಿತ್ತು. ಒಟ್ಟಾರೆಯಾಗಿ, ಮುಖ್ಯವಾಗಿ ಗಾಜಿನ ಹೊರಭಾಗಗಳು ಮತ್ತು ಬಾಗಿಲುಗಳು ಕಿಟಕಿಗಳು ಇಲ್ಲದೆ ನಿಲ್ದಾಣವು ತಾಪಮಾನಕ್ಕೆ ಕಾದ ಹಂಚಿನಂತಾಗಿದೆ ಎಂದು ಹಲವು ಮೂಲಗಳಿಂದ ತಿಳಿದುಬಂದಿದೆ.

ಇನ್ನು ಪ್ರತಿನಿತ್ಯ ರಾತ್ರಿ 10:30ರಿಂದ ಬೆಳಗ್ಗೆ 8:30ರವರೆಗೆ ಎಸಿಯ ಸ್ವಿಚ್ ಆಫ್ ಮಾಡಲಾಗುತ್ತದೆ ಎಂದು ನಿಲ್ದಾಣದ ಒಳಗಿನ ಕಾರ್ಯಾಚರಣೆಗಳ ಬಗ್ಗೆ ತಿಳಿದಿರುವ ಮೂಲವೊಂದು ಆರೋಪ ಮಾಡಿದೆ. ರೈಲ್ವೆ ಅಧಿಕಾರಿಗಳು ಬಹುಶಃ ವಿದ್ಯುತ್ ಉಳಿಸಲು ಈ ರೀತಿ ಪ್ರಯತ್ನ ಮಾಡುತ್ತಿದ್ದಾರೆ. ಸ್ಟೇಷನ್ ಮಾಸ್ಟರ್ಸ್ ಕೊಠಡಿಯು ಗೋಡೆಗೆ ಫ್ಯಾನ್ ಹೊಂದಿದ್ದರೆ, ಟಿಕೆಟ್ ಚೆಕ್ ಮಾಡುವ ಕೊಠಡಿಯು ಫ್ಯಾನ್ ಮತ್ತು ಕೂಲರ್ ಹೊಂದಿದೆ. ಇಲ್ಲಿ ಫ್ಯಾನ್ ಆಗಲಿ, ಎಸಿಯಾಗಲಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಪ್ರಯಾಣಿಕರು ವೇಟಿಂಗ್ ರೂಂನಲ್ಲಿ ಬಿಸಿಲಿನ ಝಳದಿಂದ ಬೆಂದು ಹೋಗುವಂತಾಗಿದೆ.

ಕಳೆದ ಎರಡು ತಿಂಗಳಲ್ಲಿ ಎಸ್‌ಎಂವಿಟಿ ಅಧಿಕಾರಿಗಳಿಂದ ಅನೇಕ ದೂರುಗಳು ಬಂದಿವೆ. ನಿಲ್ದಾಣದ ಒಳಗಿನ ಝಳದ ಕುರಿತು ಸಾರ್ವಜನಿಕರು ಅಸಮಾಧಾನಗೊಂಡಿದ್ದಾರೆ. ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿಯೂ ದೂರು ನೀಡಿದ್ದಾರೆ ಎಂದು ಡಿಆರ್‌ಎಂ ಕಚೇರಿಯಲ್ಲಿನ ರೈಲ್ವೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಪ್ರತಿದಿನ ಸರಾಸರಿ 14 ರೈಲುಗಳು ಆಗಮಿಸಲಿದ್ದು, 30,000 ದವರೆಗೆ ಪ್ರಯಾಣಿಕರು ಬಂದು ಹೋಗುತ್ತಾರೆ. ಹಬ್ಬದ ಸಮಯದಲ್ಲಿ ಈ ಅಂಕಿ-ಅಂಶವು 3,000 ಅಥವಾ 4,000ರಷ್ಟು ಹೆಚ್ಚಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ. ಬಿಹಾರಕ್ಕೆ ಹೋಗುವ ಸಂಗಮಿತ್ರ ಎಕ್ಸ್‌ಪ್ರೆಸ್, ಗುವಾಹಟಿ ಎಕ್ಸ್‌ಪ್ರೆಸ್ ಮತ್ತು ಹೌರಾ ಎಕ್ಸ್‌ಪ್ರೆಸ್ ಇಲ್ಲಿಂದ ಚಲಿಸುವ ರೈಲುಗಾಳಾಗಿವೆ.

ಇನ್ನು ಬೆಂಗಳೂರು ವಿಭಾಗದ ಆಡಳಿತ ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಪರೀಕ್ಷಿತ್ ಮೋಹನ್‌ಪುರಿ ಮಾತನಾಡಿ, ಎಸ್‌ಎಂವಿಟಿಯಲ್ಲಿ ಒದಗಿಸಲಾದ ಚಿಲ್ಲರ್ ಪ್ಲಾಂಟ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಪೈಪ್‌ಲೈನ್‌ನಿಂದ ನೀರು ಸೋರಿಕೆ ಆಗುತ್ತಿದೆ. ಅದು ಗಾಳಿ ನಿಯಂತ್ರಣ ಘಟಕಕ್ಕೆ ಸರಬರಾಜು ಮಾಡುತ್ತಿದೆ. ಈ ಸೋರಿಕೆಯಿಂದಾಗಿ ನಿಲ್ದಾಣದಲ್ಲಿ ಕೂಲಿಂಗ್ ಸಮಸ್ಯೆಯಿತ್ತು. ಆದರೂ, ಸೋರಿಕೆಯನ್ನು ಇತ್ತೀಚೆಗೆ ಗುರುತಿಸಲಾಗಿದ್ದು, ಇದೀಗ ಎರಡು ಚಿಲ್ಲರ್ ಪ್ಲಾಂಟ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+