'ಸಿದ್ದು ಸಾಕು': ಸರ್ಕಾರದ ವೈಫಲ್ಯಕ್ಕೆ ಟ್ವಿಟ್ಟಿಗರಿಂದ ಕೂಗು
ಬೆಂಗಳೂರು, ಸೆಪ್ಟೆಂಬರ್ 7: ಒಂದೆಡೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ, ಇನ್ನೊಂದೆಡೆ ಬಿಜೆಪಿಯ ಮಂಗಳೂರು ಚಲೋ ಬೃಹತ್ ಜಾಥಾದಿಂದಾಗಿ ಕರ್ನಾಟಕ ರಾಜ್ಯವೀಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ.
ಅದರಲ್ಲೂ ಕಳೆದ ಎರಡು ವರ್ಷಗಳಲ್ಲಿ ನಡೆದ ಆರ್ ಎಸ್ ಎಸ್,ಬಿಜೆಪಿ, ವಿಎಚ್ ಪಿ ಕಾರ್ಯಕರ್ತರ ಹತ್ಯೆ, ವಿಚಾರವಾದಿ ಎಂ ಎಂ ಕಲಬುರ್ಗಿ ಹತ್ಯೆ, ಇದೀಗ ಗೌರಿ ಲಂಕೇಶ್ ಹತ್ಯೆ... ಎಲ್ಲವೂ ಕರ್ನಾಟಕ ಸರ್ಕಾರ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ವಿಫಲವಾಗಿರುವುದನ್ನು ಸೂಚಿಸುತ್ತಿವೆ ಎಂದು ವಿರೋಧಪಕ್ಷಗಳು ದೂರಿವೆ.
ನಿನ್ನೆ ತಾನೇ #SiddaramaiahMustResign ಎಂಬ ಹ್ಯಾಶ್ ಟ್ಯಾಗ್ ಸೃಷ್ಟಿಯಾಗಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗದ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಹಲವರು ಟ್ವೀಟ್ ಮಾಡಿ ಆಗ್ರಹಿಸಿದ್ದರು. ಇಂದು #SidduSaaku
ಎಂಬ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದ್ದು, ಕಾನೂನು- ಸುವ್ಯವಸ್ಥೆ ಕಾಪಾಡಲು ವಿಫಲರಾದ ಸಿದ್ದರಾಮಯ್ಯ ಅವರಿಗೆ 'ಸಿದ್ದು ಸಾಕು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟ್ವಿಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
|
ಭ್ರಷ್ಟಾಚಾರದಲ್ಲಿ ನಂ.1!
ಭ್ರಷ್ಟಾಚಾರದಲ್ಲಿ ಕರ್ನಾಟಕ ಅಗ್ರಸ್ಥಾನದಲ್ಲಿದೆ, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ಇಲ್ಲಿನ ಸರ್ಕಾರಕ್ಕೆ ಗೊತ್ತಿಲ್ಲ, ಸಿದ್ದರಾಮಯ್ಯ ಸರ್ಕಾರ ಆಡಳಿತ ನಡೆಸಲು ವಿಫಲವಾಗಿದೆ, ಸಿದ್ದು ಸಾಕು! ಎಂದು ಸಂಸದೆ ಮೀನಾಕ್ಷಿ ಲೇಖಿ ಟ್ವೀಟ್ ಮಾಡಿದ್ದಾರೆ.
| Array |
ಕಾನೂನು-ಸುವ್ಯವಸ್ಥೆ
ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಅತ್ಯಂತ ಕೆಳಮಟ್ಟಕ್ಕೆ ತಲುಪಿದೆ. ಓಲೈಕೆ ರಾಜಕಾರಣ ಹಲವು ಅಮಾಯಕರನ್ನು ಬಲಿತೆಗೆದುಕೊಳ್ಳುತ್ತಿದೆ. ಆದರೂ ಕಾಂಗ್ರೆಸ್ ಸರ್ಕಾರ ನಿದ್ದೆ ಮಾಡುತ್ತಿದೆ ಎಂದು ಗಿರೀಶ್ ಆಳ್ವಾ ಎನ್ನುವವರು ಟ್ವೀಟ್ ಮಾಡಿದ್ದಾರೆ.
|
ಸುವ್ಯವಸ್ಥೆ ಅಂದ್ರೆ ಪೊಲೀಸರ ಪ್ರಾಬಲ್ಯ!
ಸಿದ್ದರಾಮಯ್ಯ ಮತ್ತವರ ಸಹೋದ್ಯೋಗಿಗಳ ಪ್ರಕಾರ ಕಾನೂನು -ಸುವ್ಯವಸ್ಥೆ ಎಂದರೆ ಪೊಲೀಸರ ಪ್ರಾಬಲ್ಯ! ಇದು ಕಾನೂನಿನ ಆಳ್ವಿಕೆಗಿಂತ ಭಿನ್ನವಾಗಿದೆ! ಎಂದು ಮುನಿರಾಜು ಗೌಡ ಎನ್ನುವವರು ಟ್ವೀಟ್ ಮಾಡಿದ್ದಾರೆ.
|
ಮಿತಿಮೀರಿದ ಭ್ರಷ್ಟಾಚಾರ
ಸರ್ಕಾರದ ಎಲ್ಲಾ ವಿಭಾಗಗಳಲ್ಲೂ ಮಿತಿಮೀರಿದ ಭ್ರಷ್ಟಾಚಾರ, ಕಾನೂನು ಸುವ್ಯವಸ್ಥೆಯ ವೈಫಲ್ಯ, ಜಾತೀಯತೆ ಇವು ಪ್ರಸ್ತುತ ಕರ್ನಾಟಕ ಸರ್ಕಾರದ ಚಿತ್ರಣ ಎಂದು ವೀರೇಶ್ ಹಂಚಿನಾಳ ಎನ್ನುವವರು ಟ್ವೀಟ್ ಮಾಡಿದ್ದಾರೆ.












Click it and Unblock the Notifications