ಎಂಟಿಆರ್ನಲ್ಲಿ ದೋಸೆ, ರವಾ ಇಡ್ಲಿ, ಹಲ್ವಾ ಸವಿದ ಸಿಎಂ
ಬೆಂಗಳೂರು, ಆ.22 : ಬಿಬಿಎಂಪಿ ಚುನಾವಣೆ ಪ್ರಚಾರ ಕಾರ್ಯಮುಗಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಬೆಳಗ್ಗೆ ಎಂಟಿಆರ್ಗೆ ಹೋಗಿ ಹಲ್ವಾ, ರವೆ ಇಡ್ಲಿ, ಮಸಾಲೆ ದೋಸೆ ಸವಿದಿದ್ದಾರೆ, ಕಡಿಮೆ ಸಕ್ಕರೆ ಹಾಕಿಸಿಕೊಂಡು ಫಿಲ್ಟರ್ ಕಾಫಿ ಕುಡಿದಿದ್ದಾರೆ.
ಶುಕ್ರವಾರ ಬೆಳಗ್ಗೆ 9.30ಕ್ಕೆ ಸಿದ್ದರಾಮಯ್ಯ ಅವರು ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ, ಚಿಂತಾಮಣಿ ಶಾಸಕ ಡಾ.ಎಂ.ಸಿ.ಸುಧಾಕರ್ ಮುಂತಾದವರು ಲಾಲ್ ಬಾಗ್ ಸಮೀಪವಿರುವ ಎಂಟಿಆರ್ಗೆ ಆಗಮಿಸಿ ಉಪಹಾರ ಸವಿದಿದ್ದಾರೆ.

ಮೊದಲು ಮೆನು ವಿಚಾರಿಸಿದ ಸಿದ್ದರಾಮಯ್ಯ ಅವರು ಬಾದಾಮಿ ಹಲ್ವಾ ತರುವಂತೆ ಸೂಚಿಸಿದರು. ಬಾದಾಮಿ ಹಲ್ವಾ ಸವಿದ ಬಳಿಕ ರವಾ ಇಡ್ಲಿ, ಚಟ್ನಿ, ಸಾಗು ಸವಿದರು. ನಂತರ ಹೋಟೆಲ್ನವರು ಪ್ರೀತಿಯಿಂದ ಕೊಟ್ಟ ಮಸಾಲೆ ದೋಸೆ ನೋಡಿ 'ಇವತ್ತು ಮಧ್ಯಾಹ್ನ ಊಟ ಬೇಡಪ್ಪ' ಎಂದು ದೋಸೆ ತಿಂದರು.
ಮಸಾಲೆ ದೋಸೆ ಮುರಿದ ಬಳಿಕ ಫಿಲ್ಟರ್ ಕಾಫಿ ತರುವಂತೆ ಸೂಚಿಸಿದರು. 'ಸ್ವಲ್ಪ ಸಕ್ಕರೆ ಕಡಿಮೆ ಹಾಕಪ್ಪ' ಎಂದು ಹೇಳುವುದನ್ನು ಮುಖ್ಯಮಂತ್ರಿಗಳು ಮರೆಯಲಿಲ್ಲ. 'ಉಪಹಾರಕ್ಕೆ ಹೊರಗೆ ಹೋಗೋಣ ಎಂದು ಬೆಳಗ್ಗೆ ಅಂದುಕೊಂಡಾಗ ತಕ್ಷಣ ನೆನಪಾಗಿದ್ದು ಎಂಟಿಆರ್' ಆದ್ದರಿಂದ ಇಲ್ಲಿಗೆ ಬಂದೆವು ಎಂದು ಸಿದ್ದರಾಮಯ್ಯ ಹೇಳಿದರು.

2004ರಲ್ಲಿ ಬಂದಿದ್ದರು : 'ರಾಜಕಾರಣಕ್ಕೆ ಬಂದ ಮೇಲೆ ಸಮಯದ ಅಭಾವದಿಂದ ಎಂಟಿಆರ್ಗೆ ಬರಲು ಆಗಿರಲಿಲ್ಲ. ಹಿಂದೆ 2004ರಲ್ಲಿ ಬಂದಿದ್ದೆ. ಇವತ್ತು ಮಸಾಲೆ ದೋಸೆ, ರವಾ ಇಡ್ಲಿ, ಬಿಸಿಬೇಳೆ ಬಾತ್ ತಿಂತಿದ್ದೀನಿ' ಎಂದು ಮಾಧ್ಯಮಗಳೊಂದಿಗೆ ಮಾತನಾಡುವಾಗ ಸಿದ್ದರಾಮಯ್ಯ ಹೇಳಿದರು.
-
LPG Crisis: ಎಲ್ಪಿಜಿ ಬಿಕ್ಕಟ್ಟಿನ ಸುಳಿಯಲ್ಲಿ ಭಾರತದ ಪ್ರಮುಖ ನಗರಗಳು: ದರ್ಶಿನಿಗಳು ಬಂದ್, ಪಿಜಿಗಳಲ್ಲಿ ಮೆನು ಚೇಂಜ್ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ












Click it and Unblock the Notifications