ಗೊರಗುಂಟೆ ಪಾಳ್ಯ ಮೇಲ್ಸೇತುವೆಗೆ ಶಿವಕುಮಾರ ಸ್ವಾಮೀಜಿ ಹೆಸರು
ಬೆಂಗಳೂರು, ಸೆಪ್ಟೆಂಬರ್ 20: ಗೊರಗುಂಟೆ ಪಾಳ್ಯ ಮೇಲ್ಸೇತುವೆಗೆ ಶ್ರೀ ಡಾ. ಶಿವಕುಮಾರ್ ಸ್ವಾಮೀಜಿ ಹೆಸರು ಅಧಿಕೃತವಾಗಿದ್ದು, ಸೆ.21ರಂದು ನಾಮಕರ ನಡೆಯಲಿದೆ.
ಬೆಂಗಳೂರು ಉತ್ತರ ಹೆಬ್ಬಾಗಿಲು ಎಂದೇ ಹೇಳಲಾಗುವ ನಗರದ ಗೊರಗುಂಟೆ ಪಾಳ್ಯದಿಂದ ಕೆನ್ನಮೆಟಲ್ ಕಾರ್ಖಾನೆವರೆಗಿನ ಮೇಲು ಸೇತುವೆಗೆ ಶಿವಕುಮಾರಸ್ವಾಮೀಜಿ ನಾಮಕರಣ ಮಾಡಕಾಗುತ್ತಿದೆ.
ಸಿದ್ದಗಂಗಾ ಮಠದಿಂದ ನೆರೆ ಸಂತ್ರಸ್ತರಿಗೆ 50 ಲಕ್ಷ ಪರಿಹಾರ; ಸಿಎಂಗೆ ಚೆಕ್ ಹಸ್ತಾಂತರ
ಸೆ.21ರಂದು ಸಂಜೆ 5.30ಕ್ಕೆ ಸಿದ್ಧಗಂಗಾಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿ ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮವನ್ನು ಮುಖ್ಯಮಮತ್ರಿ ಬಿಎಸ್. ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ.
ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಡಿವಿ ಸದಾನಂದಗೌಡ ಹಾಗೂ ಉಪಮುಖ್ಯಮಂತ್ರಿ , ಮೇಯರ್ ಗಂಗಾಂಬಿಕೆ ಆಗಮಿಸಲಿದ್ದಾರೆ.
ನಗರದಲ್ಲಿ ಮೊದಲ ಬಾರಿಗೆ ಒಂದು ಮೇಲ್ಸೇತುವೆಗೆ ಶಿವಕುಮಾರಸ್ವಾಮೀಜಿ ಹೆಸರು ನಾಮಕರಣ ಮಾಡಲಾಗುತ್ತಿದೆ. ಬೆಂಗಳೂರಿಗೆ ಆಗಮಿಸುವ ಉತ್ತರ ಭಾಗದ ಜನಕ್ಕೆ ಗೊರಗುಂಟೆಪಾಳ್ಯದ ಮೇಲು ಸೇತುವೆಯೇ ಹೆಬ್ಬಾಗಿಲು. ಹೀಗಾಗಿ ಈ ಸೇತುವೆಗೇ ಶಿವಕುಮಾರಸ್ವಾಮೀಜಿ ಹೆಸರಿಡಬೇಕೆಂದು ಮೇಯರ್ ಪ್ರಸ್ತಾಪಿಸಿದ್ದರು.