ಯುವತಿ ಕೈ ಹಿಡಿದು ಎಳೆದಾಡಿದ ಕಾಮಾಂಧರ ಸೆರೆ
ಬೆಂಗಳೂರು, ನ. 26: ಕೆಲಸಕ್ಕೆ ತೆರಳಲು ಕದಿರೇನಳ್ಳಿ ಮೇಲ್ಸೆತುವೆ ಬಳಿ ಕ್ಯಾಬ್ ಗಾಗಿ ಕಾಯುತ್ತಿದ್ದ ಯುವತಿಯ ಕೈ ಹಿಡಿದು ಎಳೆದಾಡಿದ ಮೂವರು ಕಾಮುಕರನ್ನು ಪೊಲೀಸರು ಬಂಧಿಸಿದ್ದಾರೆ.
ಮರಗೆಲಸ ಮಾಡಿಕೊಂಡಿರುವ ಭೂವನೇಶ್ವರಿ ನಗರದ ಸತೀಶ್(25) ಕಾರ್ತಿಕ್ (23)ಮತ್ತು ಮಣಿ (26) ಬಂಧಿತರು ಎಂದು ಬನಶಂಕರಿ ಪೊಲೀಸರು ತಿಳಿಸಿದ್ದಾರೆ.[ಲೈಂಗಿಕ ದೌರ್ಜನ್ಯ ಹೆಸರಲ್ಲಿ ವಂಚನೆ ಯತ್ನ: ಪತ್ರಕರ್ತ ಸೆರೆ]

ಬನಶಂಕರಿ ಭವಾನಿ ನಗರದಲ್ಲಿ ವಾಸವಿರುವ ಯುವತಿ ರಾತ್ರಿ ಪಾಳಿ ಕೆಲಸಕ್ಕೆಂದು ವೈಟ್ ಫೀಪ್ಡ್ ಗೆ ತೆರಳಲು ತನ್ನ ತಂದೆಯ ಜತೆ ಕದಿರೇನಳ್ಳಿ ಮೇಲ್ಸೆತುವೆ ಬಳಿ ಬಂದಿದ್ದಾಳೆ. ಈ ವೇಳೆ ಅಲ್ಲಿಗೆ ಆಗಮಿಸಿದ ಪಾನಮತ್ತ ಯುವಕರ ತಂಡ ಯುವತಿಯನ್ನು ಚುಡಾಯಿಸಿದೆ. ಅಲ್ಲದೇ ಆಕೆಯ ಕೈ ಹಿಡಿದು ಎಳೆಯಲು ಮುಂದಾಗಿದ್ದಾರೆ.[ವಿವಾದದಲ್ಲೇ ಮುಳುಗೆದ್ದ ಟಾಪ್ 10 'ದೇವಮಾನವರು']
ಇದನ್ನು ಗಮನಿಸಿದ ಸ್ಥಳೀಯರು ಮತ್ತು ಯುವತಿ ತಂದೆ ಕೈ ಗೆ ಸಿಕ್ಕ ಸತೀಶನಿಗೆ ಸರಿಯಾಗಿ ಧರ್ಮದೇಟು ನೀಡಿದ್ದಾರೆ. ಕಾರ್ತಿಕ್ ಮತ್ತು ಮಣಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಆದರೆ ಇವರ ಬಗ್ಗೆ ಸ್ಪಷ್ಟ ಮಾಹಿತಿ ಕಲೆಹಾಕಿದ ಪೊಲೀಸರು ಮಂಗಳವಾರ ಬಂಧಿಸಿ ಜೈಲಿಗೆ ಕಳಿಸಿದ್ದಾರೆ.












Click it and Unblock the Notifications