ಹಿರಿಯ ಆರೆಸ್ಸೆಸ್ ಪ್ರಚಾರಕ ಮೈಚ ಜಯದೇವ್ ನಿಧನ
ಹಿರಿಯ ಆರೆಸ್ಸೆಸ್ ಪ್ರಚಾರಕ್ ಮೈಚ ಜಯದೇವ್ (1934-2017) ಬೆಂಗಳೂರಿನ ಸಾಗರ್ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾಗಿದ್ದಾರೆ. ಮಧಾಹ್ನ 12.30ರ ನಂತರ ಚಾಮರಾಜಪೇಟೆಯ ಕೇಶವ ಕೃಪಾದಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ
ಬೆಂಗಳೂರು, ಫೆಬ್ರವರಿ 20: ಹಿರಿಯ ಆರೆಸ್ಸೆಸ್ ಪ್ರಚಾರಕ್ ಎಂಸಿ ಜಯದೇವ್ (83) ಸೋಮವಾರ ನಿಧನರಾಗಿದ್ದಾರೆ. ಕಳೆದ ಕೆಲವು ತಿಂಗಳಿಂದ ವಯೋಸಹಜ ಕಾಯಿಲೆಗಳಿಂದ ಅವರು ಬಳಲುತ್ತಿದ್ದರು. ಸೋಮವಾರ ಬೆಳಗ್ಗೆ 9ಕ್ಕೆ ಸಾಗರ್ ಆಸ್ಪತ್ರೆಯಲ್ಲಿ ಅವರು ನಿಧನರಾಗಿದ್ದಾರೆ.
ಜಯದೇವ್ ಅವರ ಪಾರ್ಥಿವ ಶರೀರವನ್ನು ಸೋಮವಾರ (ಫೆಬ್ರವರಿ 20) ರಾತ್ರಿ 7.30ರವರೆಗೆ ಅಂತಿಮ ದರ್ಶನಕ್ಕಾಗಿ ಕೇಶವಕೃಪಾದಲ್ಲಿ ಇಡಲಾಗುವುದು. ಫೆ.21ರಂದು ಮಧ್ಯಾಹ್ನ ಮೈಸೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಜಯದೇವ್ ಅವರು ಮೈಸೂರಿನಲ್ಲಿ ಫೆಬ್ರವರಿ 9, 1934ರಲ್ಲಿ ಜನಿಸಿದ್ದರು. ಅವರ ತಂದೆ ಹೆಸರು ಚನ್ನಬಸಪ್ಪ.[ಕಮ್ಯೂನಿಸ್ಟರ ರಕ್ತದಾಹ: ಕೇರಳದಲ್ಲಿ ಸಂಘ ಪರಿವಾರದ 'ತಲೆ' ಗಳಿಗೆ ಬೆಲೆಯಿಲ್ಲ ಕಾಂತಾ!]
ವಾಣಿಜ್ಯ ಪದವೀಧರರಾಗಿದ್ದ ಅವರು, ನಂತರ ಕಾನೂನು ವ್ಯಾಸಂಗ ಮಾಡಿದ್ದರು. ಕಾಲೇಜು ದಿನಗಳಲ್ಲಿ ಅವರು ಆರ್ ಎಸ್ ಎಸ್ ನ ಸ್ವಯಂಸೇವಕರಾದರು. ಆ ನಂತರ ಸಂಘಟನೆಯ ಸಕ್ರಿಯ ಸದಸ್ಯರಾದರು. ಬೆಂಗಳೂರಿನ ಹಿಂದೂಸ್ತಾನ್ ಗ್ಯಾರೇಜ್ ಮೋಟಾರ್ಸ್ ನಲ್ಲಿ ಕೆಲವು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದರು.
1960ರಲ್ಲಿ ಜಯದೇವ್ ಅವರು ಆರ್ ಎಸ್ ಎಸ್ ನ ಬೆಂಗಳೂರು ಮಹಾನಗರ್ ಕಾರ್ಯನಿರ್ವಾಹ್ ಆದರು. 1975ರವರೆಗೆ ಈ ಜವಾಬ್ದಾರು ನಿರ್ವಹಿಸಿದರು. ತುರ್ತು ಪರಿಸ್ಥಿತಿ ವೇಳೆಯಲ್ಲಿ ಅವರು ಎರಡು ವರ್ಷಗಳ ಕಾಲ ಜೈಲುವಾಸ ಅನುಭವಿಸಿದರು. ರಾಷ್ಟ್ರೋತ್ಥಾನ ಪರಿಷತ್ ನ ಸ್ಥಾಪಕರ ಪೈಕಿ ಅವರೂ ಒಬ್ಬರಾಗಿದ್ದರು.[ತುಮಕೂರಿನಲ್ಲಿ ಆರ್ ಎಸ್ ಎಸ್ ಪಥ ಸಂಚಲನ ತಡೆದ ಪೊಲೀಸರು ]
1961ರಿಂದ 1995ರವರೆಗೆ ರಾಷ್ಟ್ರೋತ್ಥಾನ ಪರಿಷತ್ ನ ಪ್ರಧಾನ ನಿರ್ವಾಹಕರಾಗಿ ಕಾರ್ಯ ನಿರ್ವಹಿಸಿದರು. 2002ರಲ್ಲಿ ಸಹ್ ಕ್ಷೇತ್ರಿಯ್ ಪ್ರಚಾರಕ್, 2004ರಲ್ಲಿ ಕ್ಷೇತ್ರಿಯ್ ಪ್ರಚಾರಕ್, 2012ರಲ್ಲಿ ಅಖಿಲ್ ಭಾರತೀಯ ಕಾರ್ಯಕಾರಿಣಿ ಸದಸ್ಯ, 2015ರ ಮಾರ್ಚ್ ನಿಂದ ಹಿರಿಯ ಪ್ರಚಾರಕ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಆರ್ ಎಸ್ ಎಸ್ ಸರಸಂಘಚಾಲಕ್ ಮೋಹನ್ ಭಾಗ್ವತ್, ದತ್ತಾತ್ರೇಯ ಹೊಸಬಾಳೆ, ಮಂಗೇಶ್ ಭಿಂಡೆ, ಸಿಆರ್ ಮುಕುಂದ ಸೇರಿದಂತೆ ಸಂಘಟನೆಯ ಹಲವು ಮುಖಂಡರು ಜಯದೇವ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.