ಕಳ್ಳತನ ಬಯಲು ಮಾಡಿದ ಕಳ್ಳಿಯ ಸೆಲ್ಫಿ ಹುಚ್ಚು
ಬೆಂಗಳೂರು, ಸೆಪ್ಟೆಂಬರ್, 28: ಸೆಲ್ಫಿ ಮಾನಸಿಕ ಖಿನ್ನತೆಯ ಪ್ರತಿರೂಪ ಎಂಬ ಮನಶ್ಯಾಸ್ತ್ರಜ್ಞರ ವಾದದ ಜೊತೆಗೆ, ಕಳ್ಳರನ್ನು ಹಿಡಿಯಲು ಅನುಕೂಲವಾಗುವ ಕ್ರಿಯಾಶೀಲ ಅಂಶ ಎಂಬ ಇನ್ನೊಂದು ವಾಕ್ಯವನ್ನು ಸೆಲ್ಫಿ ಮಟ್ಟಿಗೆ ಸೇರಿಸಬಹುದು. ಏಕೆಂದರೆ ನಗರದಲ್ಲಿ ಸೆಲ್ಫಿ ಫೋಟೋದಿಂದ ಒಬ್ಬ ಕಳ್ಳಿ ಪತ್ತೆಯಾಗಿದ್ದಾಳೆ.
ಹೌದು. ರಾಮನಗರ ಜಿಲ್ಲೆಯ ಅಕ್ಕೂರು ಗ್ರಾಮದ ನಂದಿನಿ ಅಲಿಯಾಸ್ ರಂಜಿತಾ (22) ಸೆಲ್ಫಿಯಿಂದ ಸಿಕ್ಕಿಬಿದ್ದ ಕಳ್ಳಿ. ಕೆಲಸ ಮಾಡುತ್ತಿದ್ದ ಮನೆಯಿಂದ ಒಡವೆ ದೋಚಿದ್ದ ಈಕೆ, ಅವುಗಳನ್ನು ಧರಿಸಿ ಮೊಬೈಲ್ ನಲ್ಲಿ ಸೆಲ್ಫಿ ತೆಗೆದುಕೊಂಡಿದ್ದಳು. ಮನೆ ಒಡೆಯರ ದೂರಿನ ಆಧಾರದ ಮೇಲೆ ವಿಚಾರಣೆ ಕೈಗೊಂಡ ವರ್ತೂರು ಪೊಲೀಸರು ಈಕೆಯ ಮೊಬೈಲ್ ಪರೀಕ್ಷಿಸಿದ್ದಾರೆ. ಆಗ ಒಡತಿಯ ಒಡವೆ ಹಾಕಿಕೊಂಡು ತೆಗೆದುಕೊಂಡ ಸೆಲ್ಪಿ ಫೋಟೋಗಳು ಪತ್ತೆಯಾಗಿವೆ.[ಸೆಲ್ಫಿ ಮೋಹ ಒಂದು ಮಾನಸಿಕ ಕಾಯಿಲೆ - ಮನಶ್ಶಾಸ್ತ್ರಜ್ಞರು]

ತೂಬರಹಳ್ಳಿಯ ಯುಕೆ ಎನ್ ಅಪಾರ್ಟ್ ಮೆಂಟ್ ನಲ್ಲಿ ನೆಲೆಸಿರುವ ಸಾಫ್ಟ್ ವೇರ್ ಇಂಜಿನಿಯರ್ ಮುಕುಂದ ಎಂಬುವರ ಮನೆಯಲ್ಲಿ ನಂದಿನಿ ಸುಮಾರು ದಿನಗಳಿಂದ ಕೆಲಸ ಮಾಡುತ್ತಿದ್ದಳು. ಮೊಬೈಲ್ ನಲ್ಲಿ ದೊರೆತ ಫೋಟೋಗಳ ಸಾಕ್ಷಿಯಿಂದ ಈಕೆಯನ್ನು ಬಂಧಿಸಿದ ಪೊಲೀಸರು ಆಕೆ ಕದ್ದ 250 ಗ್ರಾಂ ಬಂಗಾರ ಹಾಗೂ 300ಗ್ರಾಂ ಬೆಳ್ಳಿ ಸೇರಿದಂತೆ 6 ಲಕ್ಷದ ಮೌಲ್ಯದ ಒಡವೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಯಾಕೆ ಒಡವೆ ಕದ್ದಳು?
ನಂದಿನಿ ಗಂಡ ಕೆಲವು ದಿನಗಳ ಹಿಂದೆ ತನ್ನ ಕಚೇರಿಯ ಕೆಲಸ ತೊರೆದಿದ್ದನು. ಈಕೆಯ ದುಡಿಮೆಯಿಂದಲೇ ಮನೆ ನಿರ್ವಹಣೆ ಆಗಬೇಕಿತ್ತು. ಈಕೆಯೊಬ್ಬಳ ಸಂಬಳದಿಂದ ಮನೆ ನಿರ್ವಹಣೆ ಕಷ್ಟವಾದ ಪರಿಣಾಮ ಈಕೆ ಮನೆ ಒಡತಿ ಇಡುತ್ತಿದ್ದ ಅಲ್ಮೇರಾದಿಂದ ಒಂದೊಂದೇ ಒಡವೆಗಳನ್ನು ಅಪಹರಿಸುತ್ತಿದ್ದಳು. ಬಳಿಕ ಅದನ್ನು ಧರಿಸಿ ಒಂದು ಸೆಲ್ಫಿ ತೆಗೆದುಕೊಂಡು ಹತ್ತಿರವಿರುವ ಗಿರವಿ ಅಂಗಡಿಗಳಲ್ಲಿ ಇಟ್ಟು ಹಣ ಪಡೆದುಕೊಳ್ಳುತ್ತಿದ್ದಳು.[[ಎಟಿಎಂ ಕಳ್ಳತನ ತಡೆಯಲು ಹೊಸ ಮಾದರಿಯ ಯಂತ್ರ]
ಹೇಗೆ ಪತ್ತೆ ಹಚ್ಚಲಾಯಿತು?
ತೂಬರಹಳ್ಳಿಯ ಯುಕೆ ಎನ್ ಅಪಾರ್ಟ್ ಮೆಂಟ್ ನಲ್ಲಿ ಗುರುತಿನ ಚೀಟಿ ಇದ್ದವರಿಗೆ ಮಾತ್ರ ಪ್ರವೇಶ ಇತ್ತು. ಇದರಿಂದ ಸೆಕ್ಯೂರಿಟಿ ಹಾಗೂ ಮನೆಕೆಲಸದವರ ಕೈವಾಡವಿದೆ ಎಂದು ಅನುಮಾನಿಸಿದ ಮನೆ ಒಡೆಯರು ಪೊಲೀಸರಿಗೆ ದೂರು ನೀಡಿದ್ದರು. ಮನೆ ಕೆಲಸದವಳಾದ ನಂದಿನಿಯನ್ನು ಕೇಳಿದಾಗ ಈಕೆ ಅನುಮಾನ ಬಂದಂತೆ ವರ್ತಿಸಿದ್ದಾಳೆ. ಬಳಿಕ ಆಕೆ ಮೊಬೈಲ್ ನೋಡಿದಾಗ ಎಲ್ಲಾ ಸತ್ಯಾಂಶ ಬಯಲಾಗಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications