Get Updates
Get notified of breaking news, exclusive insights, and must-see stories!

ಅವಿರತದಿಂದ ಈ ವಾರಾಂತ್ಯ ಎರಡು ವಿಶೇಷ ಕಾರ್ಯಕ್ರಮ

ಬೆಂಗಳೂರು, ಜೂ. 05 : ಬಡಮಕ್ಕಳಿಗೆ ಪುಸ್ತಕ ವಿತರಣೆ, ಕವನ ವಾಚನ, ನಾಟಕ ಪ್ರದರ್ಶನ, ಪರಿಸರ ಜಾಗೃತಿ ಕುರಿತಂತೆ ಏನಾದರೊಂದು ಕಾರ್ಯಕ್ರಮ ಹಮ್ಮಿಕೊಳ್ಳುತ್ತ, ಅವಿರತವಾಗಿ ಸಮಾಜಸೇವೆಯಲ್ಲಿ ನಿರತವಾಗಿರುವ 'ಅವಿರತ' ಸಂಸ್ಥೆ ಈ ವಾರಾಂತ್ಯ ಮತ್ತೆರಡು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಕಾರ್ಯಕ್ರಮ 1 : ಜೂನ್ 6, ಶನಿವಾರದಂದು ಜವಾಹರ್ ಲಾಲ್ ನೆಹರು ತಾರಾಲಯದಲ್ಲಿ ವಿಜ್ಞಾನ ಪ್ರದರ್ಶಿಕೆಗಳ ಬಗ್ಗೆ ಅವಿರತ ಸದಸ್ಯರಿಗೆ ತರಬೇತಿ ಕಾರ್ಯಕ್ರಮವಿದೆ. ತರಬೇತಿ ಪಡೆದ ಸದಸ್ಯರು ಅವಿರತದೊಡನೆ ತೊಡಗಿಸಿಕೊಂಡರುವ ಅಥವಾ ಇತರೇ ಆಯ್ದ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ವಿಜ್ಞಾನ ಪ್ರದರ್ಶನಗಳನ್ನು ಆಯೋಜಿಸಬಹುದು.

ಈ ಮುಂಚೆ ಹೆಸರು ಕೊಟ್ಟು ನೋಂದಾಯಿಸಿಕೊಂಡಿರುವ ಸದಸ್ಯರು 10 ಗಂಟೆಗೆ ಸರಿಯಾಗಿ ತಾರಾಲಯ ತಲುಪತಕ್ಕದ್ದು. [ಜೂನ್ 5ರಂದು ಈವಯ್ಯ ಏನು ಮಾಡುತ್ತಿದ್ದ?]

ವಿವರಗಳು

ವಿಳಾಸ :
ಜವಾಹರಲಾಲ್ ನೆರಹೂ ತಾರಾಲಯ
ಬೆಂಗಲೂರು ಅಸೋಸಿಯೇಷನ್ ಫಾರ್ ಸೈನ್ಸ್ ಎಜ್ಯುಕೇಷನ್
ಟಿ ಚೌಡಯ್ಯ ರಸ್ತೆ, ಹೈ ಗ್ರೌಂಡ್ಸ್
ಬೆಂಗಳೂಹು - 560 001
ಗುರುತಿನ ಸ್ಥಳ : ಇಂದಿರಾ ಗಾಂಧಿ ಸಂಗೀತ ಕಾರಂಜಿ ಎದುರು, ರಾಜ ಭವನದ ಬಳಿ.

ಸಮಯ : ಬೆಳಗ್ಗೆ 10 ಗಂಟೆ

Science exhibition and Environment Day plantation by Aviratha

ಕಾರ್ಯಕ್ರಮ 2 : ಜೂನ್ 7, ಭಾನುವಾರದಂದು, ವಿಶ್ವ ಪರಿಸರ ದಿನ ನಿಮಿತ್ತ ಅವಿರತ-ಆರೇಕಲ್ ಸಂಸ್ಥೆಯ ಸಹಭಾಗಿತ್ವದಲ್ಲಿ, ಮಲ್ಲತ್ತಹಳ್ಳಿಯಲ್ಲಿರುವ ಬೆಂಗಳೂರು ವಿಶ್ವವಿದ್ಯಾನಿಲಯದ ಕಲಾಗ್ರಾಮದಲ್ಲಿ ವನ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ವಿವರಗಳು

ಸ್ಥಳ : ಕಲಾ ಗ್ರಾಮ, ಮಲ್ಲತ್ತಹಳ್ಳಿ ರಸ್ತೆ, ಕೆಂಗುಂಟೆ, ಜ್ಞಾನಭಾರತಿ, ಬೆಂಗಳೂರು - 560 072

ಸಮಯ : ಬೆಳಗ್ಗೆ 9

ಗೂಗಲ್ ಮ್ಯಾಪ್ | ಫೇಸ್ ಬುಕ್ ಪುಟ :

ನೀವೂ ಬನ್ನಿ, ನಿಮ್ಮ ಸ್ನೇಹಿತರನ್ನೂ ಕರೆ ತನ್ನಿ ಎಂದು ಅವಿರತ ಸಂಸ್ಥೆಯ ಸದಸ್ಯರು ಕೋರಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+