ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅವಿರತದಿಂದ ಈ ವಾರಾಂತ್ಯ ಎರಡು ವಿಶೇಷ ಕಾರ್ಯಕ್ರಮ

By Prasad
|
Google Oneindia Kannada News

ಬೆಂಗಳೂರು, ಜೂ. 05 : ಬಡಮಕ್ಕಳಿಗೆ ಪುಸ್ತಕ ವಿತರಣೆ, ಕವನ ವಾಚನ, ನಾಟಕ ಪ್ರದರ್ಶನ, ಪರಿಸರ ಜಾಗೃತಿ ಕುರಿತಂತೆ ಏನಾದರೊಂದು ಕಾರ್ಯಕ್ರಮ ಹಮ್ಮಿಕೊಳ್ಳುತ್ತ, ಅವಿರತವಾಗಿ ಸಮಾಜಸೇವೆಯಲ್ಲಿ ನಿರತವಾಗಿರುವ 'ಅವಿರತ' ಸಂಸ್ಥೆ ಈ ವಾರಾಂತ್ಯ ಮತ್ತೆರಡು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಕಾರ್ಯಕ್ರಮ 1 : ಜೂನ್ 6, ಶನಿವಾರದಂದು ಜವಾಹರ್ ಲಾಲ್ ನೆಹರು ತಾರಾಲಯದಲ್ಲಿ ವಿಜ್ಞಾನ ಪ್ರದರ್ಶಿಕೆಗಳ ಬಗ್ಗೆ ಅವಿರತ ಸದಸ್ಯರಿಗೆ ತರಬೇತಿ ಕಾರ್ಯಕ್ರಮವಿದೆ. ತರಬೇತಿ ಪಡೆದ ಸದಸ್ಯರು ಅವಿರತದೊಡನೆ ತೊಡಗಿಸಿಕೊಂಡರುವ ಅಥವಾ ಇತರೇ ಆಯ್ದ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ವಿಜ್ಞಾನ ಪ್ರದರ್ಶನಗಳನ್ನು ಆಯೋಜಿಸಬಹುದು.

ಈ ಮುಂಚೆ ಹೆಸರು ಕೊಟ್ಟು ನೋಂದಾಯಿಸಿಕೊಂಡಿರುವ ಸದಸ್ಯರು 10 ಗಂಟೆಗೆ ಸರಿಯಾಗಿ ತಾರಾಲಯ ತಲುಪತಕ್ಕದ್ದು. [ಜೂನ್ 5ರಂದು ಈವಯ್ಯ ಏನು ಮಾಡುತ್ತಿದ್ದ?]

ವಿವರಗಳು

ವಿಳಾಸ :
ಜವಾಹರಲಾಲ್ ನೆರಹೂ ತಾರಾಲಯ
ಬೆಂಗಲೂರು ಅಸೋಸಿಯೇಷನ್ ಫಾರ್ ಸೈನ್ಸ್ ಎಜ್ಯುಕೇಷನ್
ಟಿ ಚೌಡಯ್ಯ ರಸ್ತೆ, ಹೈ ಗ್ರೌಂಡ್ಸ್
ಬೆಂಗಳೂಹು - 560 001
ಗುರುತಿನ ಸ್ಥಳ : ಇಂದಿರಾ ಗಾಂಧಿ ಸಂಗೀತ ಕಾರಂಜಿ ಎದುರು, ರಾಜ ಭವನದ ಬಳಿ.

ಸಮಯ : ಬೆಳಗ್ಗೆ 10 ಗಂಟೆ

Science exhibition and Environment Day plantation by Aviratha

ಕಾರ್ಯಕ್ರಮ 2 : ಜೂನ್ 7, ಭಾನುವಾರದಂದು, ವಿಶ್ವ ಪರಿಸರ ದಿನ ನಿಮಿತ್ತ ಅವಿರತ-ಆರೇಕಲ್ ಸಂಸ್ಥೆಯ ಸಹಭಾಗಿತ್ವದಲ್ಲಿ, ಮಲ್ಲತ್ತಹಳ್ಳಿಯಲ್ಲಿರುವ ಬೆಂಗಳೂರು ವಿಶ್ವವಿದ್ಯಾನಿಲಯದ ಕಲಾಗ್ರಾಮದಲ್ಲಿ ವನ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ವಿವರಗಳು

ಸ್ಥಳ : ಕಲಾ ಗ್ರಾಮ, ಮಲ್ಲತ್ತಹಳ್ಳಿ ರಸ್ತೆ, ಕೆಂಗುಂಟೆ, ಜ್ಞಾನಭಾರತಿ, ಬೆಂಗಳೂರು - 560 072

ಸಮಯ : ಬೆಳಗ್ಗೆ 9

ಗೂಗಲ್ ಮ್ಯಾಪ್ | ಫೇಸ್ ಬುಕ್ ಪುಟ :

ನೀವೂ ಬನ್ನಿ, ನಿಮ್ಮ ಸ್ನೇಹಿತರನ್ನೂ ಕರೆ ತನ್ನಿ ಎಂದು ಅವಿರತ ಸಂಸ್ಥೆಯ ಸದಸ್ಯರು ಕೋರಿದ್ದಾರೆ.

English summary
Aviratha, a multifaceted NGO is conducting two programs in the weekend in Bengaluru. One, training program for Aviratha members on science exhibition and two, plantation with Oracle software company on Sunday, as part of World Environment Day celebration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X