ನಾಲ್ಕು ಗೋಡೆ ನಡುವೆ ನಡೆವ ಆ ಕ್ರಿಯೆ ಅಪರಾಧವಲ್ಲ: RJ ಪ್ರಿಯಾಂಕಾ ಸಂದರ್ಶನ
ಬೆಂಗಳೂರು, ಸೆಪ್ಟೆಂಬರ್ 06: "ನಾಲ್ಕು ಗೋಡೆಯ ನಡುವೆ ನಡೆವ ಕ್ರಿಯೆ(ಸಲಿಂಗಕಾಮ) ಅಪರಾಧವಲ್ಲ. ಅದನ್ನು ಸಾರ್ವಜನಿಕಗೊಳಿಸುವುದು ಸರಿಯಲ್ಲ. ಸುಪ್ರೀಂ ಕೋರ್ಟಿನ ಇಂದಿನ ತೀರ್ಪು ನಮ್ಮ ಸಮುದಾಯದ ಮಟ್ಟಿಗೆ ಅತ್ಯಂತ ಮಹತ್ವದ್ದು. ತೀರ್ಪಿನ ಬಗ್ಗೆ ಕೇಳಿ ವ್ಯಕ್ತಪಡಿಸಲಾಗದಷ್ಟು ಸಂತಸವಾಗಿದೆ..."
ಇದು ಪ್ರಪ್ರಥಮ ಟ್ರಾನ್ಸ್ ಜೆಂಡರ್ RJ (ರೇಡಿಯೋ ಜಾಕಿ) ಪ್ರಿಯಾಂಕಾ ಅವರ ಮಾತು. ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಆಗಷ್ಟೇ ಟೌನ್ ಹಾಲ್ ನಲ್ಲಿ ನಡೆದ ಸಂಭ್ರಮಾಚರಣೆಯನ್ನು ಮುಗಿಸಿಬಂದ ಪ್ರಿಯಾಂಕಾ, ತಮ್ಮ ಖುಷಿಯನ್ನು 'ಒನ್ಇಂಡಿಯಾ ಕನ್ನಡದ' ಜೊತೆ ಹಂಚಿಕೊಂಡರು.
"ಈ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ನ ಐದು ನ್ಯಾಯಾಧೀಶರಿಗೆ ನಮ್ಮ ಸಮುದಾಯದ ಪರವಾಗಿ ನಮನಗಳು. ಐಪಿಸಿ ಸೆಕ್ಷನ್ 377 ಎಷ್ಟು ದುರ್ಬಳಕೆಯಾಗುತ್ತಿತ್ತು ಎಂಬುದು ಕೋರ್ಟಿನ ಗಮನಕ್ಕೆ ಬಂದಿದ್ದು ಶ್ಲಾಘನೀಯ. ನಾವು ಯಾವ ತಪ್ಪು ಮಾಡದಿದ್ದರೂ ನಮ್ಮನ್ನು ಈ ಸೆಕ್ಷನ್ ಅಡಿಯಲ್ಲಿ ಹಿಂಸಿಸಲಾಗುತ್ತಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಗುಂಪುಗೂಡಿ ನಮ್ಮಷ್ಟಕ್ಕೆ ನಾವು ಸಂತಸ ಹಂಚಿಕೊಳ್ಳುತ್ತಿದ್ದರೂ, ಏನಾದರೂ ಚರ್ಚಿಸುತ್ತಿದ್ದರೂ ನಮ್ಮ ಮೇಲೆ ಸೆಕ್ಷನ್ 377 ಅನ್ನು ಹೇರಲಾಗುತ್ತಿತ್ತು. ಇವೆಲ್ಲಕ್ಕೂ ಈ ತೀರ್ಪು ತಿಲಾಂಜಲಿ ಹಾಕಿದೆ" ಎಂದು ನೆಮ್ಮದಿಯ ನಿಟ್ಟುಸಿರುಬಿಟ್ಟರು ಪ್ರಿಯಾಂಕಾ.

"ನಾವೂ ಎಲ್ಲರಂತೆಯೇ ಮನುಷ್ಯರು. ನಮಗೂ ಹಕ್ಕಿದೆ, ಸ್ವಾತಂತ್ರ್ಯವಿದೆ. ಆದರೆ ಸಮಾಜ ನಮ್ಮನ್ನು ನೋಡುತ್ತಿದ್ದ ದೃಷ್ಟಿಯೇ ಬೇರೆ. ನಾಲ್ಕು ಗೋಡೆಯ ಮಧ್ಯೆ ನಡೆವ ಕ್ರಿಯೆಯನ್ನು ಸಾರ್ವಜನಿಕಗೊಳಿಸುವುದು ಸರಿಯಲ್ಲ. ಅದೂ ಒಂದು ಸಹಜ ಕ್ರಿಯೆಯಷ್ಟೆ. ಅದನ್ನು ಘನ ಸುಪ್ರೀಂ ಕೋರ್ಟ್ ಅರ್ಥಮಾಡಿಕೊಂಡು ನಮಗೆ ನ್ಯಾಯ ನೀಡಿದ್ದಕ್ಕಾಗಿ ಅನಂತಾನಂತ ಧನ್ಯವಾದಗಳು. ನಮ್ಮ ವಿರುದ್ಧ ಸುಖಾಸುಮ್ಮನೆ ಕೇಸು ಜಡಿಯುತ್ತಿದ್ದ, ಹಿಂಸೆ ಮಾಡುತ್ತಿದ್ದ ಪೊಲೀಸರಿಗೂ ಈ ತೀರ್ಪು ಎಚ್ಚರಿಕೆಯ ಗಂಟೆ" ಎಂದು ಪ್ರಿಯಾಂಕಾ ಅಭಿಪ್ರಾಯಪಟ್ಟರು.
"ಸೆಕ್ಷನ್ 377 ನಲ್ಲಿ ಇನ್ನೂ ಏನೇನಿದೆ ಎಂಬುದನ್ನು ವಿವರವಾಗಿ ಓದಿ, ನಮ್ಮ ಸಮುದಾಯದ ಹಿತದೃಷ್ಟಿಯಿಂದ ಇನ್ನು ಯಾವ್ಯಾವ ಬದಲಾವಣೆಗಳಾಗಬೇಕು ಎಂಬ ಬಗ್ಗೆ ಚರ್ಚೆ ನಡೆಸುತ್ತೇವೆ. ನಮ್ಮ ಸುಮುದಾಯಕ್ಕೆ ನ್ಯಾಯಾಂಗ ವ್ಯವಸ್ಥೆ ಮೇಲಿನ ಗೌರವ ಇದೀಗ ದುಪ್ಪಟ್ಟಾಗಿದೆ" ಎಂದು ಹೆಮ್ಮೆ ತುಂಬಿದ ಕಣ್ಣಲ್ಲಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು ಪ್ರಿಯಾಂಕಾ.

ಬೆಂಗಳೂರಿನವರೇ ಆದ ಪ್ರಿಯಾಂಕಾ ಪ್ರಪ್ರಥಮ ಮಹಿಳಾ ಆರ್ಜೆಯಾಗಿ, ರೇಡಿಯೋ ಜರ್ನಲಿಸ್ಟ್ ಆಗಿ, ಪ್ರೋಗ್ರಾಂ ಎಗ್ಸಿಕ್ಯೂಟಿವ್ ಆಗಿ, ತೃತೀಯ ಲಿಂಗಿಗಳ ಸಮುದಾಯದ ಧ್ವನಿಯಾಗಿದ್ದಾರೆ.

ಭಾರತೀಯ ದಂಡ ಸಂಹಿತೆ(ಐಪಿಸಿ) ಸೆಕ್ಷನ್ 377ರ ಪ್ರಕಾರ ಸಲಿಂಗಕಾಮವನ್ನು ಅಪರಾಧ ಎಂದು ಪರಿಗಣಿಸಲಾಗಿತ್ತು. ಈ ಅಪರಾಧಕ್ಕೆ 10 ವರ್ಷಗಳ ವರೆಗೆ ಶಿಕ್ಷೆಯನ್ನೂ ನೀಡಬಹುದಿತ್ತು. ಇದರಿಂದ ಸಲಿಂಗಿಗಳ ಹಕ್ಕಿಗೆ ಧಕ್ಕೆ ಬರುತ್ತದೆ ಎಂದು ದೂರಿ, ಸೆಕ್ಷನ್ 377 ಅನ್ನು ರದ್ದುಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು.
ಆದರೆ ಸಹಮತದ ಸಲಿಂಗಕಾಮ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ನ ಪಂಚಸದಸ್ಯ ಪೀಠ ಇಂದು (ಸೆಪ್ಟೆಂಬರ್ 6ರ ಗುರುವಾರ) ಐತಿಹಾಸಿಕ ತೀರ್ಪು ನೀಡಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
RCB Vs SRH: ಎಸ್ಆರ್ಎಚ್ ವಿರುದ್ಧದ ಐಪಿಎಲ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕಿಂಗ್ ಕುರಿತು ಆರ್ಸಿಬಿ ಬಿಗ್ ಅಪ್ಡೇಟ್ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಜೋಶ್ ಹ್ಯಾಜಲ್ವುಡ್ ಔಟ್, 7 ಕೋಟಿಯ ಆಟಗಾರನಿಗಿಲ್ಲ ಸ್ಥಾನ; ಅಶ್ವಿನ್ ಹೇಳಿದ ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ 11 ಇಲ್ಲಿದೆ -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್












Click it and Unblock the Notifications