ನಿರ್ವಹಣಾ ಮಂಡಳಿಗೆ ಸದಸ್ಯರ ನೇಮಕವಿಲ್ಲ: ಸರ್ವಪಕ್ಷ ಸಭೆ ನಿರ್ಣಯ
ಬೆಂಗಳೂರು, ಅಕ್ಟೋಬರ್ 01: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಪಾಲಿಸುವುದರ ಬಗ್ಗೆ ಚರ್ಚಿಸಲು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ನಡೆಸಲಾಯಿತು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸರ್ವಪಕ್ಷಗಳ ಸಭೆಯಲ್ಲಿ ಕಾವೇರಿ ನಿರ್ವಹಣಾ ಮಂಡಳಿಗೆ ಸದಸ್ಯರ ನೇಮಕ ಮಾಡದಿರಲು ಒಕ್ಕೊರಲ ನಿರ್ಣಯ ಕೈಗೊಳ್ಳಲಾಗಿದೆ.
ಸಭೆಯಲ್ಲಿ
ತೆಗೆದುಕೊಳ್ಳಲಾದ
ನಿರ್ಣಯಗಳು:
*
ಕಾವೇರಿ
ನಿರ್ವಹಣಾ
ಮಂಡಳಿ
ರಚನೆಗೆ
ವಿರೋಧ,
ಮಂಡಳಿಗೆ
ಸದಸ್ಯರ
ಹೆಸರುಗಳನ್ನು
ಸೂಚಿಸದಿರಲು
ನಿರ್ಣಯ.
*
ಸುಪ್ರೀಂಕೋರ್ಟ್
ನೀಡಿರುವ
ಎರಡು
ನಿರ್ಣಯಗಳನ್ನು
ಬದಲಾಯಿಸಲು
ಕೋರಿ
ಮನವಿ
*
ತಮಿಳುನಾಡಿಗೆ
ನೀರು
ಬಿಡದಂತೆ
ಸಿದ್ದರಾಮಯ್ಯ
ಅವರಿಗೆ
ಸರ್ವಪಕ್ಷಸಭೆಯಲ್ಲಿ
ಸಲಹೆ
ಮಾಜಿ
ಮುಖ್ಯಮಂತ್ರಿ
ಬಿಎಸ್
ಯಡಿಯೂರಪ್ಪ,
ಎಚ್
ಡಿ
ಕುಮಾರಸ್ವಾಮಿ,
ಕಾಂಗ್ರೆಸ್
ನಾಯಕರಾದ
ಮಲ್ಲಿಕಾರ್ಜುನ
ಖರ್ಗೆ,
ಕೇಂದ್ರ
ಸಚಿವರಾದ
ಡಿವಿ
ಸದಾನಂದ
ಗೌಡ,
ರಮೇಶ್
ಜಿಗಜಿಣಗಿ,
ಸಂಸದರಾದ
ಶೋಭಾ
ಕರಂದ್ಲಾಜೆ,
ಸಚಿವ
ಸಂಪುಟ
ಸದಸ್ಯರಾದ
ಜಿ
ಪರಮೇಶ್ವರ್,
ಕಾಗೋಡು
ತಿಮ್ಮಪ್ಪ
ಸೇರಿದಂತೆ
ಬಹುತೇಕ
ಎಲ್ಲಾ
ಜನಪ್ರತಿನಿಧಿಗಳು
ಪಾಲ್ಗೊಂಡಿದ್ದಾರೆ.
[ಸುಪ್ರೀಂನ
ಎರಡು
ಆದೇಶ
ಬದಲಾಯಿಸಲು
ಕರ್ನಾಟಕದಿಂದ
ಮನವಿ]
ನೀರಲು ಬಿಡಲು ಸಾಧ್ಯವಿಲ್ಲ ಎಂದು ಸರ್ಕಾರ ತನ್ನ ನಿಲುವನ್ನು ಆರಂಭದಲ್ಲೇ ಪ್ರಕಟಿಸಿದ್ದು, ಈ ಬಗ್ಗೆ ಚರ್ಚೆ ನಡೆಯುತ್ತಿದೆ. ನಾಲ್ಕು ವಾರಗಳಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡಿ ಎಂದಿದ್ದ ಸುಪ್ರೀಂಕೋರ್ಟ್ ತನ್ನ ಆದೇಶ ಬದಲಿಸಿ ತ್ವರಿತವಾಗಿ ಮಂಡಳಿ ರಚನೆಗೆ ಆದೇಶಿಸಿದೆ.
ಸುಪ್ರೀಂ ಆದೇಶಕ್ಕೆ ಕೇಂದ್ರ ಸರ್ಕಾರ ಕೂಡಾ ತಲೆ ಬಾಗಿದೆ. ಅಕ್ಟೋಬರ್ 01ರಿಂದ ಅಕ್ಟೋಬರ್ 06ರ ತನಕ ಪ್ರತಿ ದಿನ 6,000 ಕ್ಯೂಸೆಕ್ಸ್ ನೀರು ಬಿಡುವಂತೆ ಕರ್ನಾಟಕಕ್ಕೆಸೂಚಿಸಿದೆ. ಈ ಎರಡು ವಿಷಯದ ಬಗ್ಗೆ ಕಾನೂನಿನ ಹೋರಾಟ ಹಾಗೂ ಶಾಸಕಾಂಗ ಯಾವ ರೀತಿ ಕ್ರಮ ಜರುಗಿಸಬೇಕು ಎಂಬುದನ್ನು ಚರ್ಚಿಸಲಾಗುತ್ತಿದೆ.