ಜನವರಿ 4ರಿಂದ 6ರ ತನಕ ಸಂಸ್ಕೃತ ಸಂಜೀವಿನೀ ಪ್ರಾಂತ ಸಮ್ಮೇಲನಮ್
ಬೆಂಗಳೂರು, ಜನವರಿ 1: ಇದೇ ತಿಂಗಳ 4, 5 ಹಾಗೂ 6ನೇ ತಾರೀಕಿನಂದು (ಶುಕ್ರ, ಶನಿ ಹಾಗೂ ಭಾನುವಾರ) ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಇರುವ ಜ್ಞಾನಾಕ್ಷಿ ವಿದ್ಯಾನಿಕೇತನದಲ್ಲಿ ಸಂಸ್ಕೃತ ಸಂಜೀವಿನೀ ಪ್ರಾಂತ ಸಮ್ಮೇಲನಮ್ ಆಯೋಜಿಸಲಾಗಿದೆ. ಮೂರು ದಿನಗಳ ಕಾರ್ಯಕ್ರಮಗಳ ವಿವರ ಹೀಗಿದೆ.
ಜನವರಿ 4, ಶುಕ್ರವಾರ ಬೆಳಗ್ಗೆ 10 ಗಂಟೆ, ಉಜ್ಜೀವಿನೀ (ಪ್ರದರ್ಶಿನೀ) ಉದ್ಘಾಟನಾ ಕಾರ್ಯಕ್ರಮ
ಸಾನ್ನಿಧ್ಯ: ಕೈಲಾಸಾಶ್ರಮ ಮಹಾಸಂಸ್ಥಾನದ ಜಯೇಂದ್ರಪುರೀ ಮಹಾಸ್ವಾಮಿಗಳು
ಉದ್ಘಾಟಕರು: ಮಾಜಿ ಕ್ರಿಕೆಟರ್ ಜಾವಗಲ್ ಶ್ರೀನಾಥ್
ಮುಖ್ಯ ಅತಿಥಿ: ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಕೆ.ಆರ್.ವೇಣುಗೋಪಾಲ್
ವಕ್ತಾರರು: ಸಂಸ್ಕೃತ ಭಾರತೀ ಕ್ಷೇತ್ರ ಸಂಘಟನಾ ಮಂತ್ರಿ ದತ್ತಾತ್ರೇಯ ವಜ್ರಳ್ಳಿ

ಜನವರಿ 5, ಶನಿವಾರ ಬೆಳಗ್ಗೆ 10 ಗಂಟೆ, ಸಂಸ್ಕೃತ ಸಂಜೀವಿನಿಯ (ಪ್ರಾಂತ ಸಮ್ಮೇಳನ) ಉದ್ಘಾಟನಾ ಕಾರ್ಯಕ್ರಮ
ಸಾನ್ನಿಧ್ಯ: ಕೈಲಾಸಾಶ್ರಮ ಮಹಾಸಂಸ್ಥಾನದ ಜಯೇಂದ್ರಪುರೀ ಮಹಾಸ್ವಾಮಿಗಳು
ಅಧ್ಯಕ್ಷರು: ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ
ಮುಖ್ಯ ಅತಿಥಿಗಳು: ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಸಿಬಿಐ ಮಾಜಿ ನಿರ್ದೇಶಕ ಡಿ.ಆರ್.ಕಾರ್ತಿಕೇಯನ್
ಮುಖ್ಯ ವಕ್ತಾರರು: ಸಂಸ್ಕೃತ ಭಾರತೀ ಅಖಿಲ ಭಾರತ ಸಂಘಟನಾ ಮಂತ್ರಿ ದಿನೇಶ ಕಾಮತ
ಜನವರಿ 6, ಭಾನುವಾರ ಮಧ್ಯಾಹ್ನ 2.30
ಸಾನ್ನಿಧ್ಯ: ಕೈಲಾಸಾಶ್ರಮ ಮಹಾಸಂಸ್ಥಾನದ ಜಯೇಂದ್ರಪುರೀ ಮಹಾಸ್ವಾಮಿಗಳು, ಬಂಜಾರಾ ಗುರು ಪೀಠದ ಸರದಾರ ಸೇವಾಲಾಲ ಮಹಾಸ್ವಾಮಿಗಳು
ಮುಖ್ಯ ಅತಿಥಿ: ಇಸ್ಕಾನ್ ಅಧ್ಯಕ್ಷ ಮಧುಪಂಡಿತದಾಸರು
ಅಧ್ಯಕ್ಷತೆ ಮತ್ತು ಮುಖ್ಯ ಭಾಷಣ ಸಂಸ್ಕೃತ ಭಾರತೀ ಕರ್ನಾಟಕ ದಕ್ಷಿಣ ಪ್ರಾಂತ ಅಧ್ಯಕ್ಷ ಟಿ.ಎನ್.ಪ್ರಭಾಕರ












Click it and Unblock the Notifications