ಗಾಂಜಾ ಮಾರಾಟದಲ್ಲಿ ಸಿಕ್ಕಿಬಿದ್ದ ಇಂಜಿನಿಯರಿಂಗ್ ಪದವೀಧರೆ ಹಿಂದಿತ್ತು "ಲವ್ ಕಹಾನಿ"
ಬೆಂಗಳೂರು, ಜೂನ್ 16: ಜಗತ್ತಿನಲ್ಲಿ ಎಂತೆಂಥ ಪ್ರೇಮಕಥೆಗಳನ್ನೋ ಕೇಳಿರುತ್ತೇವೆ, ಕಂಡಿರುತ್ತೇವೆ. ತನ್ನ ಪ್ರೇಮಿಗಾಗಿ ಏನು ಬೇಕಾದರೂ ಮಾಡಲು ಸಿದ್ಧ ಎಂದು ಜೀವವನ್ನೇ ಬಿಟ್ಟ ಎಷ್ಟು ಉದಾಹರಣೆ ಸಿಗುವುದಿಲ್ಲ ಹೇಳಿ...
ಬೆಂಗಳೂರಿನಲ್ಲಿ ಬುಧವಾರ ಪೊಲೀಸರ ಕೈಗೆ ಸಿಕ್ಕಿಬಿದ್ದ ಇಂಜಿನಿಯರಿಂಗ್ ಪದವೀಧರೆ ರೇಣುಕಾ ಗಾಂಜಾ ಮಾರಾಟದ ಹಿಂದೆ ಇಂಥದ್ದೇ ಲವ್ ಕಹಾನಿಯಿದೆ. ಇಂಜಿನಿಯರಿಂಗ್ ಓದಿದ್ದರೂ ತನ್ನ ಪ್ರಿಯಕರನಿಗಾಗಿ ಓದು, ಮನೆ ಎಲ್ಲವನ್ನೂ ಬಿಟ್ಟು ನಗರದಲ್ಲಿ ಬಂದು ಗಾಂಜಾ ಮಾರಾಟಕ್ಕೆ ಇಳಿದಿದ್ದ ಈ ಯುವತಿ ಈಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ.
ಚೆನ್ನೈನ ಕಾಲೇಜಿನಲ್ಲಿ ಇಂಜಿನಿಯರಿಂಗ್ ಕಲಿಯುತ್ತಿದ್ದ ರೇಣುಕಾ, ಸಿದ್ಧಾರ್ಥ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಮದುವೆ ವಿಷಯ ಬಂದಾಗ, ಸಿದ್ಧಾರ್ಥ್ ರೇಣುಕಾಳಿಗೆ ತನ್ನ ಹೊಸ ಬಿಸಿನೆಸ್ ಬಗ್ಗೆ ಹೇಳಿಕೊಂಡಿದ್ದ.

"ಹೊಸ ಬಿಸಿನೆಸ್ ಶುರು ಮಾಡಿದ್ದೀನಿ. ಅದರಿಂದ ತುಂಬ ಲಾಭವಿದೆ. ಹಣ ಗಳಿಸಿ ನಂತರ ಮದುವೆಯಾಗೋಣ..." ಎಂದು ಪ್ರಿಯಕರ ಸಿದ್ಧಾರ್ಥ ರೇಣುಕಾಗೆ ಪುಸಲಾಯಿಸಿದ್ದ ಕೂಡ. ತನ್ನ ಪ್ರಿಯಕರನ ಮಾತನ್ನೇ ನಂಬಿ ಎಲ್ಲವನ್ನೂ ಬದಿಗಿಟ್ಟು ಗಾಂಜಾ ಮಾರಾಟಕ್ಕೆ ಸಹಕಾರ ನೀಡಲು ಒಪ್ಪಿಕೊಂಡಳು ರೇಣುಕಾ.
ಇದೇ ಸಮಯದಲ್ಲಿ ಸಿದ್ಧಾರ್ಥ ಪ್ರೀತಿ ವಿಷಯ ತಿಳಿಯುತ್ತಿದ್ದಂತೆ ಮನೆಯಲ್ಲಿ ವಿರೋಧವೂ ವ್ಯಕ್ತವಾಗಿತ್ತು. ಹೀಗಾಗಿ ಊರು ಬಿಟ್ಟಿದ್ದ ರೇಣುಕಾ ನೇರ ಬೆಂಗಳೂರು ಸೇರಿ, ಇಬ್ಬರೂ ಒಟ್ಟಾಗಿ ಗಾಂಜಾ ಬಿಸಿನೆಸ್ ಮುಂದುವರೆಸಿದ್ದರು.
ರೇಣುಕಾಳ ಮೂಲಕ ಗಾಂಜಾ ಮಾರಾಟ ದಂಧೆ ಸಿದ್ಧಾರ್ಥ್ಗೆ ಇನ್ನಷ್ಟು ಸುಲಭ ಅನಿಸಿತ್ತು. ಇದನ್ನೇ ಮುಂದುವರೆಸಿದ ಸಿದ್ಧಾರ್ಥ್, ತನ್ನ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸಿಕೊಂಡ. ಪೊಲೀಸರಿಗೆ ಅನುಮಾನ ಬರಬಾರದೆಂದು ರೇಣುಕಾ ಕೈಲಿ ಗಾಂಜಾ ಸಪ್ಲೈ ಮಾಡಿಸುತ್ತಿದ್ದ. ಗಾಂಜಾ ತೆಗೆದುಕೊಳ್ಳುವವರಿಗೆ ಸುಲಭವಾಗಿ ವಿಳಾಸ ಸಿಗಲಿ ಎಂದು ಮುಖ್ಯರಸ್ತೆ ಬಳಿಯೇ ರೂಂ ಮಾಡುತ್ತಿದ್ದಳು ರೇಣುಕಾ. ಆದರೆ ಈ ವ್ಯವಹಾರ ತುಂಬಾ ದಿನ ನಡೆಯಲಿಲ್ಲ.

ಈ ಗಾಂಜಾ ವ್ಯವಹಾರದ ಜಾಡು ತಿಳಿದುಕೊಂಡ ಪೊಲೀಸರು ಬುಧವಾರ ಸದಾಶಿವನಗರದಲ್ಲಿ ರೇಣುಕಾಳನ್ನು ಬಂಧಿಸಿ ಎರಡೂವರೆ ಕೆ.ಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಪ್ರೇಮಿ ಸಿದ್ದಾರ್ಥ್ಗಾಗಿ ಹುಡುಕಾಟ ಮುಂದುವರೆಸಿದ್ದಾರೆ. ಆದರೆ ಪ್ರೇಮಿಯನ್ನೇ ನಂಬಿ ಗಾಂಜಾ ಮಾರಾಟಕ್ಕಿಳಿದಿದ್ದ ರೇಣುಕಾ ಈಗ ಕಂಬಿ ಎಣಿಸುವಂತೆ ಆಗಿದೆ. ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications