ಬೆಂಗಳೂರು ವಾಸಿ ಉತ್ತರ ಕರ್ನಾಟಕ ಮಂದಿಗೆ ಏನಾಗಿದೆ?
ಕಳೆದ ಏಳೆಂಟು ವರ್ಷಗಳಲ್ಲಿ ಕಾವೇರಿ ಸಮಸ್ಯೆ ಬಂದಾಗಲೆಲ್ಲ ಬೆಂಗಳೂರಿನಲ್ಲಿ ಐಟಿ-ಬಿಟಿ ವಲಯದಲ್ಲಿ ಕೆಲಸ ಮಾಡುವ ಮೈಸೂರು-ಮಂಡ್ಯ ಭಾಗದ ಯುವಜನತೆ ತಾವೇತಾವಾಗಿ ಸಂಘಟನೆ ಮಾಡಿಕೊಂಡು ಬೆಂಗಳೂರಿನಲ್ಲಿ ಹೋರಾಟಕ್ಕೆ ಇಳಿಯುತ್ತಾರೆ.
ಕಳೆದ ಎರಡು ವರ್ಷಗಳಿಂದ ಕೋಲಾರ-ಚಿಕ್ಕಬಳ್ಳಾಪುರದ ಯುವಕ/ಯುವತಿಯರು "ಯುವಶಕ್ತಿ" ಹೆಸರಿನಲ್ಲಿ ಸಂಘಟಿತರಾಗಿ "ಶಾಶ್ವತ ನೀರಾವರಿ" ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಮತ್ತು ಬೆಂಗಳೂರಿನಲ್ಲಿ ಸಭೆ-ಸಮಾವೇಶಗಳನ್ನು ಸಂಘಟಿಸುತ್ತಿದ್ದಾರೆ.[ಮಹದಾಯಿ ನೀರು ಹಂಚಿಕೆ : ಕಥೆ ವ್ಯಥೆ ಟೈಮ್ ಲೈನ್]
ಆದರೆ, ಬೆಂಗಳೂರಿನಲ್ಲಿರುವ ಈ ಉತ್ತರ ಕರ್ನಾಟಕದ ಯುವಜನತೆಗೆ ಏನಾಗಿದೆ? ಬೆಂಗಳೂರಿನಲ್ಲಿ ಕೇವಲ "ಜೋಳದ ರೊಟ್ಟಿ ಮತ್ತು ಎಣ್ಣೆಗಾಯಿ ಪಲ್ಯ" ಸಿಗುವ ಖಾನಾವಳಿಗಳನ್ನು ಹುಡುಕಾಡುವುದಕ್ಕೇ ಸೀಮಿತವಾಗಿದೆಯೇ ಅವರ ಕ್ರಿಯಾಶೀಲತೆ? [ಗ್ಯಾಲರಿ: ಮಹದಾಯಿ ತೀರ್ಪು ಖಂಡಿಸಿ ರೈತರ ಆಕ್ರೋಶ]

ಅದು ಕೃಷ್ಣಾ-ಆಲಮಟ್ಟಿ ಯೋಜನೆ ಇರಬಹುದು, ಈಗ ಮಹದಾಯಿ-ಕಳಸಾಬಂಡೂರಿ ವಿಷಯ ಇರಬಹುದು, ಈ ಸಮಸ್ಯೆಯ ಬಾಧೆ ತಟ್ಟದ ದಕ್ಷಿಣ ಕರ್ನಾಟಕದವರನ್ನು ಬಿಡಿ, ಆದರೆ ಬೆಂಗಳೂರಿನಲ್ಲಿ ನೌಕರಿ ಮಾಡುತ್ತಿರುವ ಉತ್ತರ ಕರ್ನಾಟಕದ ಲಕ್ಷಾಂತರ ಯುವಜನತೆ ತಮ್ಮ ಮಣ್ಣಿನ ಋಣವನ್ನು ತೀರಿಸುವ ಸಂದರ್ಭಗಳನ್ನು ಕಳೆದುಕೊಂಡರೆ, ಅದು ಕ್ಷಮಾರ್ಹವಲ್ಲ. ಯೋಚಿಸಿ.[ಮಹದಾಯಿಗಾಗಿ ಟ್ವಿಟ್ಟರಲ್ಲೂ ಆಕ್ರೋಶದ ಕಿಡಿ]
ಕಳೆದ ಒಂದು ವರ್ಷದಲ್ಲಿ ಎರಡು ಬಾರಿ ನರಗುಂದ-ನವಲಗುಂದಗಳಿಗೆ ಹೋಗಿಬಂದು, ಅಲ್ಲಿಯ ಬಡ, ನಿರುದ್ಯೋಗಿ, ಬಹುತೇಕ ಅವಿದ್ಯಾವಂತ ರೈತರು ಸ್ವಯಂಪ್ರೇರಿತವಾಗಿ ಹೋರಾಟ ಮತ್ತು ಚಳವಳಿಗಳಲ್ಲಿ ಪಾಲ್ಗೊಂಡಿದ್ದನ್ನು ಕಂಡಿರುವ ನಾನು, ಅದೇ ತರಹದ ಕಾಳಜಿ ಮತ್ತು ಹೋರಾಟ ಮನೋಭಾವವನ್ನು ಹೊಟ್ಟೆ ತುಂಬಿದ ಈ ಯುವಜನತೆಯಲ್ಲಿ ಕಾಣದಿರುವ ಕಾರಣಕ್ಕೆ ಇಷ್ಟು ಕಟುವಾಗಿ, ಬಹಳ ಜವಾಬ್ದಾರಿ ಮತ್ತು ಬೇಸರದಿಂದ ಈ ಮಾತನ್ನು ಹೇಳುತ್ತಿದ್ದೇನೆ. [ಮಹದಾಯಿ ಯೋಜನೆಗೆ ಚಾಲನೆ ಸಿಕ್ಕಿದ್ದು ಹೇಗೆ?]
ಇದು ವಾಟ್ಸ್ಯಾಫ್, ಫೇಸ್ಬುಕ್, ಟ್ವಿಟ್ಟರ್ಗಳ ಯುಗ. ಸಮಯ ಬಂದಾಗ ಹೋರಾಟ ಕಟ್ಟುವುದು ಅಷ್ಟು ಕಷ್ಟವಲ್ಲ. ಮಣ್ಣಿನ ಋಣಬಾಧೆ ಬಾಧಿಸಬೇಕು ಅಷ್ಟೆ.
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications