Get Updates
Get notified of breaking news, exclusive insights, and must-see stories!

ಬೆಂಗಳೂರು ವಾಸಿ ಉತ್ತರ ಕರ್ನಾಟಕ ಮಂದಿಗೆ ಏನಾಗಿದೆ?

ಕಳೆದ ಏಳೆಂಟು ವರ್ಷಗಳಲ್ಲಿ ಕಾವೇರಿ ಸಮಸ್ಯೆ ಬಂದಾಗಲೆಲ್ಲ ಬೆಂಗಳೂರಿನಲ್ಲಿ ಐಟಿ-ಬಿಟಿ ವಲಯದಲ್ಲಿ ಕೆಲಸ ಮಾಡುವ ಮೈಸೂರು-ಮಂಡ್ಯ ಭಾಗದ ಯುವಜನತೆ ತಾವೇತಾವಾಗಿ ಸಂಘಟನೆ ಮಾಡಿಕೊಂಡು ಬೆಂಗಳೂರಿನಲ್ಲಿ ಹೋರಾಟಕ್ಕೆ ಇಳಿಯುತ್ತಾರೆ.

ಕಳೆದ ಎರಡು ವರ್ಷಗಳಿಂದ ಕೋಲಾರ-ಚಿಕ್ಕಬಳ್ಳಾಪುರದ ಯುವಕ/ಯುವತಿಯರು "ಯುವಶಕ್ತಿ" ಹೆಸರಿನಲ್ಲಿ ಸಂಘಟಿತರಾಗಿ "ಶಾಶ್ವತ ನೀರಾವರಿ" ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಮತ್ತು ಬೆಂಗಳೂರಿನಲ್ಲಿ ಸಭೆ-ಸಮಾವೇಶಗಳನ್ನು ಸಂಘಟಿಸುತ್ತಿದ್ದಾರೆ.[ಮಹದಾಯಿ ನೀರು ಹಂಚಿಕೆ : ಕಥೆ ವ್ಯಥೆ ಟೈಮ್ ಲೈನ್]

ಆದರೆ, ಬೆಂಗಳೂರಿನಲ್ಲಿರುವ ಈ ಉತ್ತರ ಕರ್ನಾಟಕದ ಯುವಜನತೆಗೆ ಏನಾಗಿದೆ? ಬೆಂಗಳೂರಿನಲ್ಲಿ ಕೇವಲ "ಜೋಳದ ರೊಟ್ಟಿ ಮತ್ತು ಎಣ್ಣೆಗಾಯಿ ಪಲ್ಯ" ಸಿಗುವ ಖಾನಾವಳಿಗಳನ್ನು ಹುಡುಕಾಡುವುದಕ್ಕೇ ಸೀಮಿತವಾಗಿದೆಯೇ ಅವರ ಕ್ರಿಯಾಶೀಲತೆ? [ಗ್ಯಾಲರಿ: ಮಹದಾಯಿ ತೀರ್ಪು ಖಂಡಿಸಿ ರೈತರ ಆಕ್ರೋಶ]

Ravi Krishna Reddy on Mahadayi Verdict North Karnataka people in Bengaluru

ಅದು ಕೃಷ್ಣಾ-ಆಲಮಟ್ಟಿ ಯೋಜನೆ ಇರಬಹುದು, ಈಗ ಮಹದಾಯಿ-ಕಳಸಾಬಂಡೂರಿ ವಿಷಯ ಇರಬಹುದು, ಈ ಸಮಸ್ಯೆಯ ಬಾಧೆ ತಟ್ಟದ ದಕ್ಷಿಣ ಕರ್ನಾಟಕದವರನ್ನು ಬಿಡಿ, ಆದರೆ ಬೆಂಗಳೂರಿನಲ್ಲಿ ನೌಕರಿ ಮಾಡುತ್ತಿರುವ ಉತ್ತರ ಕರ್ನಾಟಕದ ಲಕ್ಷಾಂತರ ಯುವಜನತೆ ತಮ್ಮ ಮಣ್ಣಿನ ಋಣವನ್ನು ತೀರಿಸುವ ಸಂದರ್ಭಗಳನ್ನು ಕಳೆದುಕೊಂಡರೆ, ಅದು ಕ್ಷಮಾರ್ಹವಲ್ಲ. ಯೋಚಿಸಿ.[ಮಹದಾಯಿಗಾಗಿ ಟ್ವಿಟ್ಟರಲ್ಲೂ ಆಕ್ರೋಶದ ಕಿಡಿ]

ಕಳೆದ ಒಂದು ವರ್ಷದಲ್ಲಿ ಎರಡು ಬಾರಿ ನರಗುಂದ-ನವಲಗುಂದಗಳಿಗೆ ಹೋಗಿಬಂದು, ಅಲ್ಲಿಯ ಬಡ, ನಿರುದ್ಯೋಗಿ, ಬಹುತೇಕ ಅವಿದ್ಯಾವಂತ ರೈತರು ಸ್ವಯಂಪ್ರೇರಿತವಾಗಿ ಹೋರಾಟ ಮತ್ತು ಚಳವಳಿಗಳಲ್ಲಿ ಪಾಲ್ಗೊಂಡಿದ್ದನ್ನು ಕಂಡಿರುವ ನಾನು, ಅದೇ ತರಹದ ಕಾಳಜಿ ಮತ್ತು ಹೋರಾಟ ಮನೋಭಾವವನ್ನು ಹೊಟ್ಟೆ ತುಂಬಿದ ಈ ಯುವಜನತೆಯಲ್ಲಿ ಕಾಣದಿರುವ ಕಾರಣಕ್ಕೆ ಇಷ್ಟು ಕಟುವಾಗಿ, ಬಹಳ ಜವಾಬ್ದಾರಿ ಮತ್ತು ಬೇಸರದಿಂದ ಈ ಮಾತನ್ನು ಹೇಳುತ್ತಿದ್ದೇನೆ. [ಮಹದಾಯಿ ಯೋಜನೆಗೆ ಚಾಲನೆ ಸಿಕ್ಕಿದ್ದು ಹೇಗೆ?]

ಇದು ವಾಟ್ಸ್ಯಾಫ್, ಫೇಸ್‌ಬುಕ್, ಟ್ವಿಟ್ಟರ್‌ಗಳ ಯುಗ. ಸಮಯ ಬಂದಾಗ ಹೋರಾಟ ಕಟ್ಟುವುದು ಅಷ್ಟು ಕಷ್ಟವಲ್ಲ. ಮಣ್ಣಿನ ಋಣಬಾಧೆ ಬಾಧಿಸಬೇಕು ಅಷ್ಟೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+