Get Updates
Get notified of breaking news, exclusive insights, and must-see stories!

Hampi Incident: ಪ್ರಕರಣದ ತನಿಖೆ, ಮುಂದಿನ ಹಂತಗಳ ಬಗ್ಗೆ ಜಿ.ಪರಮೇಶ್ವರ ಮಹತ್ವದ ಮಾಹಿತಿ

ಬೆಂಗಳೂರು, ಮಾರ್ಚ್ 09: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ವಿದೇಶಿ ಪ್ರವಾಸಿ ಸೇರಿ ಇಬ್ಬರು ಮಹಿಳೆಯರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ತುಂಗಭದ್ರ ಎಡದಂತೆ ಮೇಲೆ ಸಿಕ್ಕ ಶವ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಜಿ.ಪರಮೇಶ್ವರ ಪ್ರತಿಕ್ರಿಯಿಸಿದರು. ಪ್ರಕರಣದ ಬಂಧಿತ ಆರೋಪಿಗಳ ಆರೋಗ್ಯ ತಪಾಸಣೆ ಮಾಡಲಾಗಿದೆ. ಅವರು ಮಾದಕ ವಸ್ತು ಸೇವಿಸಿರುವ ಬಗ್ಗೆ ಮಾಹಿತಿ ಸಿಕ್ಕಿಲ್ಲ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆಗೆ ಭಾನುವಾರ ಮಾತನಾಡಿದ ಅವರು, ಮಾರ್ಚ್ 6ರಂದು ರಾತ್ರಿ 10.30 ತುಂಗಭದ್ರಾ ನದಿ ಕ್ಯಾನಾಲ್ ಪಕ್ಕ ಕುಳಿತಿರುತ್ತಾರೆ. ಅಲ್ಲಿಗೆ ಬೈಕ್‌ನಲ್ಲಿ ಬಂದಿದ್ದ ಮೂವರು ಸವಾರರು ಆ ಪ್ರವಾಸಿಗರಿಗೆ ಪೆಟ್ರೋಲ್ ಇದೆಯಾ ಎಂದು ವಿಚಾರಿಸಿದ್ದಾರೆ. ಮಾತನಾಡುತ್ತಾ ಮೈ ಮೇಲೆ ಎರಗಿದಾಗ ಘರ್ಷಣೆ ನಡೆದಿದೆ. ಆಗ ಒಬ್ಬನನ್ನು ಕೆನಾಲ್‌ಗೆ ತಳ್ಳಿದ್ದಾರೆ.

Rape Case Near Hampi in Karnataka Home Minister Reaction Over the Case Probe

ಪ್ರಕರಣ ಸಂಬಂಧ ಮರುದಿನ ಪೊಲೀಸರಿಗೆ ದೂರು ನೀಡಲಾಗಿದೆ. ವಿವರ ಪಡೆದುಕೊಂಡ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಡಿವೈಎಸ್‌ಪಿ ನೇತೃತ್ವದ ಪೊಲೀಸರ ತಂಡ ರಚಿಸಿ ಕಾರ್ಯಾಚರಣೆ ಕೈಗೊಂಡಿದ್ದರು. ಈಗಾಗಲೇ ಇಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ತಲೆಮರೆಸಿಕೊಂಡಿರುವ ಓರ್ವ ಆರೋಪಿಗಾಗಿ ತೀವ್ರ ಶೋಧ ಕಾರ್ಯ ನಡೆದಿದೆ. ಆತನನ್ನೂ ಬಂಧಿಸಲಾಗುವುದು ಎಂದರು.

ಅತ್ಯಾಚಾರ ಸಂತ್ರಸ್ತರಿಂದ 164 ಹೇಳಿಕೆಗಳನ್ನು ಮ್ಯಾಜಿಸ್ಟ್ರೇಟ್ ಮುಂದೆ ಪಡೆದುಕೊಳ್ಳಲಾಗಿದೆ. ಮುಂದಿನ ತನಿಖೆಯನ್ನು ಚುರುಕುಗೊಳಿಸಲಾಗಿದೆ. ಬಳ್ಳಾರಿ ವಲಯ ಐಜಿಪಿ, ಎಸ್‌ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Rape Case Near Hampi in Karnataka Home Minister Reaction Over the Case Probe

ಪ್ರಕರಣದ ಮುಂದಿನ ಪ್ರಕ್ರಿಯೆ

ಸಂತ್ರಸ್ತರಿಗೆ ಚಿಕಿತ್ಸೆ, ಯಾವ ರೀತಿಯ ಸಹಾಯ ಮಾಡಬೇಕು ವಿದೇಶಿಗರು ಆಗಿರುವುದರಿಂದ ಅವರ ದೇಶಗಳ ರಾಯಬಾರಿ ಕಚೇರಿಗಳಿಗೆ ಮಾಹಿತಿ ನೀಡಬೇಕು. ಇದೆಲ್ಲ ಪ್ರಕ್ರಿಯೆ ಆರಂಭವಾಗಿದೆ. ತನಿಖೆಗೆ ಸಂಬಂಧಿಸಿದಂತೆ ಮತ್ತೆ ಯಾವಾಗ ಬರಬೇಕು ಎಂದು ಷರತ್ತು ಹಾಕಿ ಕಳುಹಿಸಲಾಗುತ್ತದೆ.

ವಿದೇಶದಿಂದ ಬಂದ ಮಹಿಳೆಯ ಸೇರಿದಂತೆ ಇಬ್ಬರ ಮೇಲಿನ ಈ ಕೃತ್ಯ ನಡೆಯಬಾರದಿತ್ತು. ರಾಜ್ಯದಲ್ಲಿ ಪ್ರವಾಸೋದ್ಯಮ ಉತ್ತಮವಾಗಿರಬೇಕು. ಪ್ರವಾಸಿಗರನ್ನು ಆಕರ್ಷಿಸಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಹಲವು ಕ್ರಮ ಕೈಗೊಂಡಿದೆ. ಆದರೆ ಇಂತಹ ಘಟನೆಗಳಾದಾಗ ವಿದೇಶಿ ಪ್ರವಾಸಿಗರು ಬರಲು ಹಿಂದೇಟು ಹಾಕುತ್ತಾರೆ. ಹೆಚ್ಚು ಪ್ರವಾಸಿಗರು ಬರುವ ಸ್ಥಳಗಳಲ್ಲಿ ಹೆಚ್ಚು ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲು ಸೂಚಿಸಲಾಗಿದೆ. ಇಂತಹ ಘಟನೆಗಳು ಮರು ಕಳುಹಿಸಬಾರದು.

ಅದಕ್ಕಾಗಿ ಹೆಚ್ಚು ಸುರಕ್ಷತೆ ಕೈಗೊಳ್ಳಲು ಪೊಲೀಸ್ ಇಲಾಖೆಯಿಂದ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಪ್ರವಾಸಿ ತಾಣಗಳಲ್ಲಿ ಭದ್ರತಾ ವ್ಯವಸ್ಥೆ ಹೆಚ್ಚಳ

ಕೊಪ್ಪಳ ಜಿಲ್ಲೆ ಮಾತ್ರವಲ್ಲದೆ ಬೇರೆಬೇರೆ ಕಡೆಯೂ ಸುರಕ್ಷತೆಯಿಂದ ಬಂದು ಹೋಗಲು ಅನುವು ಮಾಡಿಕೊಡಲು ಸರ್ಕಾರ ಕ್ರಮ ವಹಿಸಿದೆ. ಸಂತ್ರಸ್ತರನ್ನು ಬೆಂಗಳೂರಿಗೆ ಕರೆತಂದು ಆನಂತರ ರಾಯಭಾರಿಗಳಿಗೆ ಒಪ್ಪಿಸಲಾಗುವುದು. ಪ್ರವಾಸಿ ತಾಣಗಳಲ್ಲಿ ಪ್ಯಾಟ್ರೋಲಿಂಗ್ ವ್ಯವಸ್ಥೆ ಜಾಸ್ತಿ ಮಾಡುತ್ತೇವೆ. ಹೆಚ್ಚು ಸಂಖ್ಯೆಯಲ್ಲಿ ಟೂರಿಸ್ಟ್ ಪೊಲೀಸ್ ಮಾಡುತ್ತೇವೆ. ಹೋಮ್ ಸ್ಟೇ ಅನಧಿಕೃತವಾಗಿದ್ದರೆ ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುವುದು.

ಬೆಂಗಳೂರು ನಗರದಲ್ಲಿ ಅನುಮಾನಸ್ಪದವಾಗಿ ಓಡಾಡುವುದು ಕಂಡು ಬಂದರೆ ಬೀಟ್ ಪೊಲೀಸರು ಬೆರಳಚ್ಚು ಪಡೆಯುವ ವ್ಯವಸ್ಥೆ ಇದೆ. ಸಿಸ್ಟಮ್‌ನಲ್ಲಿ ಪರಿಶೀಲಿಸಿದಾಗ ಗೊತ್ತಾಗುತ್ತದೆ.

ಪರಿಶಿಷ್ಟರ ಹಣ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಆರೋಪ, ಈ ವಿಷಯವೇ ಬೇರೆ ಇದೆ. ಈ ಬಗ್ಗೆ ದೊಡ್ಡ ಚರ್ಚೆಯೇ ಮಾಡಬಹುದು. ಪ್ರತಿ ಇಲಾಖೆಯಲ್ಲೂ ಎಸ್‌ಸಿಪಿ‌ಮತ್ತು ಟಿಎಸ್‌ಪಿ ಇದೆ. ಅದನ್ನೆಲ್ಲ ಲೆಕ್ಕ ಹಾಕಬೇಕಲ್ಲವೇ? ಸಮಾಜ ಕಲ್ಯಾಣ ಇಲಾಖೆಯದ್ದು ಮಾತ್ರ ಲೆಕ್ಕ ಹಾಕಲು ಸಾಧ್ಯವಿಲ್ಲ ಎಂದು ತಿರುಗೇಟು ಕೊಟ್ಟರು.

ಖರ್ಗೆ ಹೇಳಿಕೆ: ನಾವೆಲ್ಲರು ಒಟ್ಟಾಗಿದ್ದೇವೆ: ಸಚಿವ

ಮಲ್ಲಿ‌ಕಾರ್ಜುನ್ ಖರ್ಗೆ ಹೇಳಿಕೆ ವಿಚಾರ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಒಟ್ಟಿಗೆ ಇರಬೇಕು ಎಂದು ಖರ್ಗೆಯವರು ಹೇಳಿದ್ದಾರೆ. ಆದರೆ ಅವರು ಆಯವ ಅರ್ಥದಲ್ಲಿ ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ನಾವೆಲ್ಲರು ಒಟ್ಟಾಗಿಯೇ ಇದ್ದೇವೆ. ಸಿದ್ದರಾಮಯ್ಯನವರು, ಸಚಿವರು, ಶಾಸಕರು ನಾವೆಲ್ಲ ಒಟ್ಟಾಗಿದ್ದೇವೆ. ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ.

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಚಿನ್ನ ಸಾಗಾಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಬಂಧನ ವಿಚಾರ, ಈಗಾಗಲೇ ತನಿಖೆಗೆ ಸಿಬಿಐಗೆ ಕೊಟ್ಟಿದ್ದಾರೆ ಎಂದಷ್ಟ ನೋಡಿದ್ದೇನೆ. ಸಿಬಿಐಗೆ ಕೊಟ್ಟಲ್ಲಿ ಅವರೇ ತನಿಖೆ ನಡೆಸುತ್ತಾರೆ. ಅದರೆ ಸದ್ಯ ಸಿಬಿಐ ಅನುಮತಿ ಕುರಿತು ಏನು ಕೇಳಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+