PM Of Kailasa: ನಿತ್ಯಾನಂದನ ಕೈಲಾಸಕ್ಕೆ ಪ್ರಧಾನಿಯಾದ ರಂಜಿತಾ!
ಅತ್ಯಾಚಾರ, ವಿವಾದಗಳಿಂದ ವಿವಾದಕ್ಕೆ ಸಿಲುಕಿ ಭಾರತದಿಂದ ಪರಾರಿಯಾಗಿರು ನಿತ್ಯಾನಂದ ಕೈಲಾಸ ಎನ್ನುವ ದೇಶವನ್ನು ನಿರ್ಮಿಸಿಕೊಂಡಿದ್ದೇನೆ ಎಂದು ಘೋಷಿಸಿಕೊಂಡಿರುವುದು ಗೊತ್ತಿದೆ. ಅಚ್ಚರಿ ಎನ್ನುವಂತೆ ನಿತ್ಯಾನಂದನ ಕೈಲಾಸಕ್ಕೆ ಶಿಷ್ಯೆ ರಂಜಿತಾ ಅವರನ್ನು ಪ್ರಧಾನಿಯನ್ನಾಗಿ ನೇಮಿಸಲಾಗಿದೆ ಎಂದು ತಮಿಳು ದೈನಿಕವೊಂದು ವರದಿ ಮಾಡಿದೆ.
ವರದಿಯ ಪ್ರಕಾರ ನಿತ್ಯಾನಂದ ನಿರ್ಮಿಸಿದ್ದಾನೆ ಎಂದು ಹೇಳಲಾಗುವ ಕೈಲಾಸ ದೇಶಕ್ಕೆ ನಟಿ, ನಿತ್ಯಾನಂದನ ಶಿಷ್ಯೆ ರಂಜಿತಾ ನೇಮಕವಾಗಿದ್ದಾರೆ ಎಂದು ಹೇಳಲಾಗಿದೆ. ಹಿಂದೂಗಳಿಗಾಗಿ ಸ್ಥಾಪಿತವಾದ ಕೈಲಾಸದ ಪ್ರಧಾನ ಮಂತ್ರಿಯಾಗಿ ರಂಜಿತಾ ಅವರನ್ನು ಒಳಗೊಂಡ ಚಿತ್ರದ ಕೆಳಭಾಗದಲ್ಲಿ 'ನಿತ್ಯಾನಂದಮಯಿ ಸ್ವಾಮಿ' ಎಂಬ ಹೆಸರನ್ನು ಹೊಂದಿರುವ ನಿತ್ಯಾನಂದನಿಗೆ ಸಂಬಂಧಿಸಿದ ವೆಬ್ಸೈಟ್ನಲ್ಲಿ ಈ ಘೋಷಣೆಯನ್ನು ಮಾಡಲಾಗಿದೆ.

ಈ ಬೆಳವಣಿಗೆಯು ಅಚ್ಚರಿಯನ್ನುಂಟು ಮಾಡಿದೆ. ಕೈಲಾಸವನ್ನು ಪ್ರತಿನಿಧಿಸುವ ಮಹಿಳಾ ರಾಯಭಾರಿಗಳು ಇತ್ತೀಚೆಗೆ ನಡೆದ ವಿಶ್ವಸಂಸ್ಥೆಯ ಸಮ್ಮೇಳನದಲ್ಲಿ ದೇಶವನ್ನು ಪ್ರತಿನಿಧಿಸಿದ್ದರು ಎಂದು ವರದಿಯಾಗಿತ್ತು. ಈ ಸಂದರ್ಭಗಳನ್ನು ಗಮನಿಸಿದರೆ, ನಟಿ ರಂಜಿತಾ ಶೀಘ್ರದಲ್ಲೇ ವಿಶ್ವಸಂಸ್ಥೆಯ ಸಮ್ಮೇಳನದಲ್ಲಿ ಸ್ವಯಂಘೋಷಿತ ದೇಶವಾದ ಕೈಲಾಸದ ಪ್ರಧಾನಿಯಾಗಿ ಭಾಗವಹಿಸಬಹುದು ಎಂದು ಊಹಿಸಲಾಗಿದೆ.
ಸ್ವಾಮಿ ನಿತ್ಯಾನಂದರ ಭಾರತದಿಂದ ಪಲಾಯನ ಮತ್ತು ನಂತರದ ರಂಜಿತಾ ಅವರನ್ನು ಕೈಲಾಸ ದೇಶದ ಪ್ರಧಾನಿಯಾಗಿ ಘೋಷಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೈಲಾಸದ ಸ್ಥಾಪನೆ ಮತ್ತು ವಿಶ್ವಸಂಸ್ಥೆಯಂತಹ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಅದರ ಪ್ರಾತಿನಿಧ್ಯವು ಈ ಹಿಂದೆ ಕಾನೂನು ಮತ್ತು ನೈತಿಕ ವಿವಾದಗಳಲ್ಲಿ ಸಿಲುಕಿರುವ ನಿತ್ಯಾನಂದನ ನಡೆಯನ್ನು ಸೂಚಿಸುತ್ತದೆ.
ರಂಜಿತಾ ತಂಗಿ ಕೂಡ ಕೈಲಾಸದಲ್ಲಿ?
ಈ ಮೊದಲೇ ನಿತ್ಯಾನಂದನ ಜೊತೆ ರಂಜಿತಾ ಕೂಡ ಕೈಲಾಸದಲ್ಲಿ ಇದ್ದಾರೆ ಎನ್ನಲಾಗಿತ್ತು, ರಂಜಿತಾ ಮಾತ್ರವಲ್ಲ ರಂಜಿತಾ ತಂಗಿ ಕೂಡ ಕೈಲಾಸದಲ್ಲೇ ಇರುವುದಾಗಿ ದಕ್ಷಿಣ ಭಾರತದ ಖ್ಯಾತ ಹಿರಿಯ ನಟ ರಂಜಿತಾ ತಂದೆ ಅಶೋಕ್ ಕುಮಾರ್ ಹೇಳಿದ್ದರು. ನನ್ನ ಇಬ್ಬರು ಮಕ್ಕಳು ತಮ್ಮ ತಮ್ಮ ಗಂಡಂದಿರಿಗೆ ಡಿವೋರ್ಸ್ ನೀಡಿದ್ದಾರೆ. ಇದೀಗ ನಿತ್ಯಾನಂದ ಸ್ವಾಮಿ ಆಶ್ರಮ ಸೇರಿದ್ದಾರೆ ಎಂದು ಕಣ್ಣೀರಾಕಿದ್ದರು.
ದೇಶದ ಕರೆನ್ಸಿ ಬಿಡುಗಡೆ ಮಾಡಿದ್ದ ನಿತ್ಯಾನಂದ
ಭಾರತದಿಂದ ಪರಾರಿಯಾದ ನಂತರ ಒಂದು ವರ್ಷ ಎಲ್ಲೂ ಕಾಣಿಸಿಕೊಳ್ಳದ ನಿತ್ಯಾನಂದ ನಂತರ ತನ್ನದೇ ಕೈಲಾಸ ದೇಶ ನಿರ್ಮಿಸಿಕೊಂಡಿದ್ದೇನೆ ಎಂದು ಘೋಷಿಸಿಕೊಂಡಿದ್ದ. ಅಲ್ಲದೆ ತನ್ನ ದೇಶದ ಕರೆನ್ಸಿಯನ್ನು ಕೂಡ ಬಿಡುಗಡೆ ಮಾಡಿದ್ದ. ದೇಶಕ್ಕೆ ಬರಲು ವೀಸಾ ನಿಯಮ ಕೂಡ ಜಾರಿಗೆ ತಂದಿದ್ದಾನೆ. ನಿತ್ಯಾನಂದನ ವೆಬ್ಸೈಟ್ನಲ್ಲಿ ತನ್ನ ದೇಶಕ್ಕೆ ಬರಲು ಏನೆಲ್ಲಾ ನಿಯಮಗಳನ್ನು ಪಾಲಿಸಬೇಕು ಎಂದು ಬರೆಯಲಾಗಿದೆ.
-
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ












Click it and Unblock the Notifications