ಸಾಹಿತಿ ಕೆವೈಎನ್ ರಂಗಗೀತೆಗಳನ್ನು ಹೊರ ತಂದ ಅವಿರತ
’ಕೆ.ವೈ.ಎನ್. ರಂಗಗೀತೆಗಳು’ ಎಂಬ ಚೆಂದದ ಪುಸ್ತಕ ಸಿದ್ದಗೊಂಡಿದೆ. ಜೊತೆಗೆ, ಅವರ ನಾಟಕಗಳಾದ *ಅನಭಿಜ್ಞ ಶಾಕುಂತಲ*, *ಪಂಪಭಾರತ* ಹಾಗೂ *ಚಕ್ರರತ್ನ* ನಾಟಕಗಳೂ ಸಹ ಪುಸ್ತಕವಾಗಿ ಬಿಡುಗಡೆಯಾಗಲಿವೆ.
ಬೆಂಗಳೂರು, ನವೆಂಬರ್ 25: ಕನ್ನಡ ರಂಗಭೂಮಿಯಲ್ಲಿ ಹಲವಾರು ಯಶಸ್ವಿ ನಾಟಕಗಳನ್ನು ರಚಿಸಿ ಜನಮನ್ನಣೆ, ಪ್ರಶಸ್ತಿಗಳನ್ನೂ ಗಳಿಸಿಕೊಂಡಿರುವ ಖ್ಯಾತ ನಾಟಕಕಾರ ಡಾ|| ಕೆ.ವೈ.ನಾರಾಯಣಸ್ವಾಮಿ, ಒಬ್ಬ ಸಹೃದಯಿ ಕವಿಯೂ ಹೌದು. ನಾಟಕಗಳಿಗಾಗಿ, ಅವರು ರಚಿಸಿರುವ ಎಲ್ಲಾ ಹಾಡುಗಳು ಕೇಳುಗರ ಮನಸೂರೆಗೊಂಡಿವೆ.
ಈ ಎಲ್ಲಾ ಹಾಡುಗಳನ್ನು ಒಟ್ಟುಗೂಡಿಸಿ, 'ಕೆ.ವೈ.ಎನ್. ರಂಗಗೀತೆಗಳು' ಎಂಬ ಚೆಂದದ ಪುಸ್ತಕ ಸಿದ್ದಗೊಂಡಿದೆ. ಜೊತೆಗೆ, ಅವರ ನಾಟಕಗಳಾದ *ಅನಭಿಜ್ಞ ಶಾಕುಂತಲ*, *ಪಂಪಭಾರತ* ಹಾಗೂ *ಚಕ್ರರತ್ನ* ನಾಟಕಗಳೂ ಸಹ ಪುಸ್ತಕವಾಗಿ ಬಿಡುಗಡೆಯಾಗಲಿವೆ.

ಈ ಪುಸ್ತಕದ ಬಿಡುಗಡೆ ಸಮಾರಂಭವನ್ನು 'ಅವಿರತ ಪ್ರತಿಷ್ಠಾನ'ವು ಆಯೋಜಿಸುತ್ತಿದ್ದು, ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ಆಗಮಿಸಬೇಕೆಂದು ಈ ಮೂಲಕ ಆಹ್ವಾನಿಸುತ್ತಿದ್ದೇವೆ.
ಪುಸ್ತಕ ಬಿಡುಗಡೆಯ ಜೊತೆಗೆ, ರಾಮಚಂದ್ರ ಹಡಪದ್ ಹಾಗೂ ಅನನ್ಯ ಭಟ್ ಅವರ ರಂಗಗೀತೆಗಳ ಗಾಯನವೂ ಕಾರ್ಯಕ್ರಮವನ್ನು ಮೆರುಗುಗೊಳಿಸಲಿದೆ. ಹೊಸ ಪುಸ್ತಕ, ಹಾಡು, ಮಾತು ಹಾಗು ಒಂದು ಸೊಗಸಾದ ನೆನಪಿಗೆ ಎಲ್ಲರೂ ಜೊತೆಯಾಗಬಹುದು.
ದಿನಾಂಕ: 27 ನವೆಂಬರ್ 2016, ಭಾನುವಾರ

ಸ್ಥಳ
ಪ್ರಭಾತ್ ರಂಗಮಂದಿರ
ಕರ್ನಾಟಕ ಎಂಜಿನಿಯರ್ಸ್ ಅಕಾಡೆಮಿ ಆವರಣ ಬಸವೇಶ್ವರ ನಗರ ೭೯
ಸಮಯ:
ಸಂಜೆ 4.30 ಗಂಟೆ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ
ಸತೀಶ್ ಕೆ.ಟಿ. 98800 86300
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : ಅವಿರತ ಪ್ರತಿಷ್ಠಾನದ ಫೇಸ್ ಬುಕ್ ಪುಟ
(ಒನ್ಇಂಡಿಯಾ ಸುದ್ದಿ)
-
SSLC ಪರೀಕ್ಷೆ-1 ಆರಂಭ: ಮಲ್ಲೇಶ್ವರಂನ ಕೆಪಿಎಸ್ ಶಾಲೆಗೆ ಸಚಿವ ಮಧು ಬಂಗಾರಪ್ಪ ಭೇಟಿ, ವಿದ್ಯಾರ್ಥಿಗಳಿಗೆ ಶುಭಹಾರೈಕೆ -
RCB: ಆರ್ಸಿಬಿಯಲ್ಲಿ ಜೋಶ್ ಹ್ಯಾಜಲ್ವುಡ್ ಸ್ಥಾನ ತುಂಬುವ ಆಟಗಾರ ಇವರೇ ನೋಡಿ -
ಶೆಲ್ ಬಂಕ್ನಲ್ಲಿ ಪೆಟ್ರೋಲ್ ದರ ಏರಿಕೆ: ಬೆಂಗಳೂರಿನಲ್ಲಿ 10 ದಿನಗಳಲ್ಲಿ 4.50 ರೂಪಾಯಿ ಹೆಚ್ಚಳ; ಇಲ್ಲಿದೆ ದರಪಟ್ಟಿ -
Gold Price Today: ಯುಗಾದಿಗೂ ಮೊದಲೇ ಚಿನ್ನದ ದರದಲ್ಲಿ ಭಾರೀ ಇಳಿಕೆ; ಆಭರಣ ಪ್ರಿಯರಿಗೆ ಇಂದೇ ಹಬ್ಬ -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು












Click it and Unblock the Notifications