Get Updates
Get notified of breaking news, exclusive insights, and must-see stories!

ಸಾಹಿತಿ ಕೆವೈಎನ್ ರಂಗಗೀತೆಗಳನ್ನು ಹೊರ ತಂದ ಅವಿರತ

’ಕೆ.ವೈ.ಎನ್. ರಂಗಗೀತೆಗಳು’ ಎಂಬ ಚೆಂದದ ಪುಸ್ತಕ ಸಿದ್ದಗೊಂಡಿದೆ. ಜೊತೆಗೆ, ಅವರ ನಾಟಕಗಳಾದ *ಅನಭಿಜ್ಞ ಶಾಕುಂತಲ*, *ಪಂಪಭಾರತ* ಹಾಗೂ *ಚಕ್ರರತ್ನ* ನಾಟಕಗಳೂ ಸಹ ಪುಸ್ತಕವಾಗಿ ಬಿಡುಗಡೆಯಾಗಲಿವೆ.

ಬೆಂಗಳೂರು, ನವೆಂಬರ್ 25: ಕನ್ನಡ ರಂಗಭೂಮಿಯಲ್ಲಿ ಹಲವಾರು ಯಶಸ್ವಿ ನಾಟಕಗಳನ್ನು ರಚಿಸಿ ಜನಮನ್ನಣೆ, ಪ್ರಶಸ್ತಿಗಳನ್ನೂ ಗಳಿಸಿಕೊಂಡಿರುವ ಖ್ಯಾತ ನಾಟಕಕಾರ ಡಾ|| ಕೆ.ವೈ.ನಾರಾಯಣಸ್ವಾಮಿ, ಒಬ್ಬ ಸಹೃದಯಿ ಕವಿಯೂ ಹೌದು. ನಾಟಕಗಳಿಗಾಗಿ, ಅವರು ರಚಿಸಿರುವ ಎಲ್ಲಾ ಹಾಡುಗಳು ಕೇಳುಗರ ಮನಸೂರೆಗೊಂಡಿವೆ.

ಈ ಎಲ್ಲಾ ಹಾಡುಗಳನ್ನು ಒಟ್ಟುಗೂಡಿಸಿ, 'ಕೆ.ವೈ.ಎನ್. ರಂಗಗೀತೆಗಳು' ಎಂಬ ಚೆಂದದ ಪುಸ್ತಕ ಸಿದ್ದಗೊಂಡಿದೆ. ಜೊತೆಗೆ, ಅವರ ನಾಟಕಗಳಾದ *ಅನಭಿಜ್ಞ ಶಾಕುಂತಲ*, *ಪಂಪಭಾರತ* ಹಾಗೂ *ಚಕ್ರರತ್ನ* ನಾಟಕಗಳೂ ಸಹ ಪುಸ್ತಕವಾಗಿ ಬಿಡುಗಡೆಯಾಗಲಿವೆ.

Rangavalli : Writer KY Narayanaswamy books release Aviratha

ಈ ಪುಸ್ತಕದ ಬಿಡುಗಡೆ ಸಮಾರಂಭವನ್ನು 'ಅವಿರತ ಪ್ರತಿಷ್ಠಾನ'ವು ಆಯೋಜಿಸುತ್ತಿದ್ದು, ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ಆಗಮಿಸಬೇಕೆಂದು ಈ ಮೂಲಕ ಆಹ್ವಾನಿಸುತ್ತಿದ್ದೇವೆ.

ಪುಸ್ತಕ ಬಿಡುಗಡೆಯ ಜೊತೆಗೆ, ರಾಮಚಂದ್ರ ಹಡಪದ್ ಹಾಗೂ ಅನನ್ಯ ಭಟ್ ಅವರ ರಂಗಗೀತೆಗಳ ಗಾಯನವೂ ಕಾರ್ಯಕ್ರಮವನ್ನು ಮೆರುಗುಗೊಳಿಸಲಿದೆ. ಹೊಸ ಪುಸ್ತಕ, ಹಾಡು, ಮಾತು ಹಾಗು ಒಂದು ಸೊಗಸಾದ ನೆನಪಿಗೆ ಎಲ್ಲರೂ ಜೊತೆಯಾಗಬಹುದು.

ದಿನಾಂಕ: 27 ನವೆಂಬರ್ 2016, ಭಾನುವಾರ

Rangavalli : Writer KY Narayanaswamy books release Aviratha

ಸ್ಥಳ
ಪ್ರಭಾತ್ ರಂಗಮಂದಿರ
ಕರ್ನಾಟಕ ಎಂಜಿನಿಯರ್ಸ್ ಅಕಾಡೆಮಿ ಆವರಣ ಬಸವೇಶ್ವರ ನಗರ ೭೯
ಸಮಯ:
ಸಂಜೆ 4.30 ಗಂಟೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ
ಸತೀಶ್ ಕೆ.ಟಿ. 98800 86300
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : ಅವಿರತ ಪ್ರತಿಷ್ಠಾನದ ಫೇಸ್ ಬುಕ್ ಪುಟ

(ಒನ್ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+