ಮಳೆಗಾಲ ಆಗಮನ: ಬೆಂಗಳೂರಿಗೆ ಮತ್ತೆ ಪ್ರವಾಹದ ಭೀತಿ?

ಬೆಂಗಳೂರು, ಮೇ 24: ಕಳೆದ ವರ್ಷ ಬೆಂಗಳೂರಿನಲ್ಲಿ ಓಆರ್‌ಆರ್‌ ಸೇರಿದಂತೆ ಹಲವೆಡೆ ಸಂಭವಿಸಿದ ಪ್ರವಾಹವು ನಗರದ ಕೆಲವು ಭಾಗಗಳನ್ನು ಬಾಧಿಸಿತ್ತು. ಈಗ ಮಳೆಗಾಲ ಆಗಮನವಾಗುತ್ತಿದ್ದು, ಮತ್ತೆ ಅದೇ ಮಾದರಿಯಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗುವ ಆತಂಕ ಸಾರ್ವಜನಿಕರನ್ನು ಕಾಡಿದೆ.

ಕಳೆದ ವರ್ಷ ಕೊಳೆಗೇರಿಗಳು, ಪ್ರಮುಖ ರಸ್ತೆಗಳು, ಐಷಾರಾಮಿ ಲೇಔಟ್‌ಗಳು ಮಳೆ ನೀರಿನಿಂದ ಪಡಾದ ಪಾಡುಪಟ್ಟವು. ಬೈಜುಸ್‌ ಕಂಪೆನಿ ಸಿಇಒ ಮನೆ ತಮ್ಮ ಮುಳುಗಿದ ಮನೆಗಳಿಂದ ಪಾರಾಗಲು ಟ್ರ್ಯಾಕ್ಟರ್‌ಗಳಲ್ಲಿ ಸವಾರಿ ಮಾಡುವ ಚಿತ್ರಗಳು ಕಂಡು ಬಂದಿದ್ದವು,

Bengaluru is in danger of flooding

ಬೆಂಗಳೂರಿನಂತ ನಗರದ ಈ ಮನಕಲಕುವ ದೃಶ್ಯಗಳು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿ ವೈರಲ್‌ ಆಗಿದ್ದವು. ಮಳೆಯಿಂದ ಉಂಟಾದ ಅವಾಂತರವು ಸಾರ್ವಜನಿಕ ಕೋಪಕ್ಕೆ ಕಾರಣವಾಗಿ ಸರ್ಕಾರದಿಂದ ತ್ವರಿತ ಪ್ರತಿಕ್ರಿಯೆಯನ್ನು ನೀಡಬೇಕಾಗಿತ್ತು. ಆದರೆ ಪ್ರವಾಹದ ಒಂದು ವರ್ಷದ ನಂತರವೂ ನಗರದಲ್ಲಿ ಮಳೆ ಪರಿಸ್ಥಿತಿ ಎದುರಿಸಲು ಏನೂ ಬದಲಾವಣೆಯಾಗಿಲ್ಲ ಎಂದು ಡಿಎಚ್‌ ವರದಿ ಮಾಡಿದೆ.

ನಗರದ ಹಲವೆಡೆ ಇನ್ನೂ ಹಲವಾರು ಅತಿಕ್ರಮಣಗಳು ಹಾಗೇ ಉಳಿದಿವೆ. ಮುಂದಿನ ತಿಂಗಳು ಮುಂಗಾರು ಆಗಮಿಸಲಿದ್ದು, ಈ ವರ್ಷ ನಗರದ ಪ್ರವಾಹ ಪೀಡಿತ ಭಾಗಗಳು ಮತ್ತೊಮ್ಮೆ ಪ್ರವಾಹದಿಂದ ನಲುಗಬಹುದು. ಈ ಬಗ್ಗೆ ರೇನ್‌ಬೋ ಲೇಔಟ್, ಮಾರತ್ತಹಳ್ಳಿ ಸ್ಪೈಸ್ ಗಾರ್ಡನ್ ಲೇಔಟ್, ನಲ್ಲೂರಹಳ್ಳಿ ಮತ್ತು ಕಾಟನ್‌ಪೇಟೆ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ. ಕಳೆದ ವರ್ಷದ ದುರಂತಗಳ ಬಗ್ಗೆ ಅವರು ಭಯಭೀತಿಯಾಗಿದ್ದಾರೆ. ಈ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯಾವುದೇ ಮುಂಜಾಗ್ರತೆ ವಹಿಸಿಲ್ಲ ಎಂದು ನಿವಾಸಿಗಳು ಹೇಳಿದ್ದಾರೆ.

ಮುಂಬರುವ ಮಳೆಗಾಲದ ಬಗ್ಗೆ ಬಿಬಿಎಂಪಿ ಏನೂ ಮಾಡಿಲ್ಲ. ಕಳೆದ ವರ್ಷ ನಮಗೆ ಸುಮಾರು 5 ಲಕ್ಷ ರೂಪಾಯಿ ನಷ್ಟವಾಗಿದೆ. ಪ್ರವಾಹವನ್ನು ತಡೆಗಟ್ಟಲು ನೆಲಮಾಳಿಗೆಯನ್ನು ಮುಚ್ಚಲು ನಾವು ಗೋಡೆಯನ್ನು ನಿರ್ಮಿಸಲು ಯೋಜಿಸುತ್ತಿದ್ದೇವೆ. ಆದರೆ ನಾವು ಬಿಬಿಎಂಪಿಯಿಂದ ಯಾವುದೇ ಸಹಾಯವನ್ನು ನಿರೀಕ್ಷಿಸುವುದಿಲ್ಲ ಎಂದು ಮಾರತ್ತಹಳ್ಳಿಯ ನಿವಾಸಿಯೊಬ್ಬರು ಆರೋಪಿಸಿದ್ದಾರೆ.

Bengaluru is in danger of flooding

ಕೊಳೆಗೇರಿ ನಿವಾಸಿಗಳು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಿಬಿಎಂಪಿಯಿಂದ ನಮಗೆ ಯಾವುದೇ ಸಹಾಯವಾಗಿಲ್ಲ. ಕಳೆದ ವರ್ಷದ ಪ್ರವಾಹದ ನಂತರ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳಲು ನಾವು ಅವರನ್ನು ಹಲವಾರು ಬಾರಿ ಸಂಪರ್ಕಿಸಿದ್ದೇವೆ. ಸರಿಪಡಿಸುವ ಕ್ರಮಗಳನ್ನು ಬಿಡಿ, ನಾವು ಅನುಭವಿಸಿದ ಹಾನಿಗೆ ಅವರು ನೀಡುವ ಅಲ್ಪ ಪರಿಹಾರಕ್ಕಾಗಿ ನಾವು ಇನ್ನೂ ಕಾಯುತ್ತಿದ್ದೇವೆ. ಘಟನೆಯ ನಂತರ ಬಿಬಿಎಂಪಿ ಅಧಿಕಾರಿಗಳು ಒಮ್ಮೆ ಮಾತ್ರ ಈ ಪ್ರದೇಶಕ್ಕೆ ಭೇಟಿ ನೀಡಿದ್ದರು ಎಂದು ಕಾಟನ್‌ಪೇಟೆಯ ನಿವಾಸಿಯೊಬ್ಬರು ಹೇಳಿದ್ದಾರೆ.

ಪ್ರವಾಹದ ನಂತರ ಬಿಬಿಎಂಪಿ ಕೆಲವು ಪ್ರದೇಶಗಳಲ್ಲಿ ಮಳೆನೀರಿನ ಚರಂಡಿಗಳನ್ನು (SWD) ಮತ್ತು ಪುನರ್ನಿರ್ಮಾಣ ಕಾರ್ಯಗಳನ್ನು ಪ್ರಾರಂಭಿಸಿತ್ತು. ಆದರೆ ಇವುಗಳಲ್ಲಿ ಹಲವು ಕಾಮಗಾರಿಗಳು ಅಪೂರ್ಣವಾಗಿ ಉಳಿದಿವೆ. ವಾಸ್ತವಿಕವಾಗಿ ಅದು ನಿಷ್ಪ್ರಯೋಜಕವಾಗಿದೆ. ಬಿಬಿಎಂಪಿಯು ಇನ್ನೂ 607 ಸ್ಥಳಗಳಲ್ಲಿ ಅತಿಕ್ರಮಣಗಳನ್ನು ತೆಗೆದುಹಾಕಲು ಬಾಕಿ ಉಳಿದಿದ್ದು, ಅದರಲ್ಲಿ 118 ಕಾನೂನು ಹೋರಾಟದಲ್ಲಿ ಸಿಲುಕಿಕೊಂಡಿವೆ.

ಆದರೆ ಇದಕ್ಕೆ ಪ್ರತಿಯಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ಒತ್ತುವರಿ ತೆರವು ಮಾಡುವಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ. ನಾವು ಇನ್ನೂ 607 ಸ್ಥಳಗಳಲ್ಲಿ ಮಾತ್ರ ಅತಿಕ್ರಮಣಗಳನ್ನು ತೆಗೆದುಹಾಕಬೇಕಾಗಿದೆ. 607 ರಲ್ಲಿ, 118 ಸ್ಥಳಗಳಲ್ಲಿ ಕಾನೂನು ವಿವಾದವಿದ್ದು, ತಡೆಯಾಜ್ಞೆ ಜಾರಿಯಲ್ಲಿದೆ. ಎಲ್ಲಿಯೇ ತಡೆಯಾಜ್ಞೆ ಇದೆಯೋ, ಆ ಪ್ರದೇಶಗಳು ಇನ್ನೂ ಪರಿಣಾಮ ಬೀರಬಹುದು. ಏಕೆಂದರೆ ನಾವು ಹೆಚ್ಚು ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಇಂದಿನಿಂದ ಕೆಆರ್ ಪುರಂ ಮತ್ತು ಮಹದೇವಪುರದಲ್ಲಿ ಕೆಲವು ಅತಿಕ್ರಮಣಗಳನ್ನು ತೆಗೆದುಹಾಕಲು ನಾವು ಯೋಜಿಸಿದ್ದೇವೆ. ಇದು ಒಂದು ಸವಾಲಿನ ಕೆಲಸವಾಗಿದೆ ಏಕೆಂದರೆ ಕಟ್ಟಡದ ಒಂದು ಭಾಗವನ್ನು ತೆಗೆದುಹಾಕುವುದರಿಂದ ರಚನೆಯನ್ನು ದುರ್ಬಲಗೊಳಿಸುವುದಿಲ್ಲ ಮತ್ತು ಯಾವುದೇ ಪ್ರಾಣಹಾನಿಯಾಗುವುದಿಲ್ಲ ಎಂದು ನಾವು ಖಚಿತಪಡಿಸಿಕೊಳ್ಳಬೇಕು ಎಂದು ಗಿರಿನಾಥ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+