#RahulStumped? ನೋ ವೆ ಅಂತಾರೆ ಕಾರ್ಮೆಲ್ ಯುವತಿ
ಬೆಂಗಳೂರು, ನವೆಂಬರ್ 27 : #RahulStumped. ಟ್ವಿಟ್ಟರುಗಳಲ್ಲಿ, ವಾಟ್ಸಾಪ್ ಗಳಲ್ಲಿ, ಫೇಸ್ ಬುಕ್ ಗಳಲ್ಲಿ, ಟಿವಿ ಚಾನಲ್ಲುಗಳಲ್ಲಿ, ವೃತ್ತಿಪತ್ರಿಕೆಗಳಲ್ಲಿ, ರಾಜಕೀಯ ಅಂಗಳದಲ್ಲಿ, ವಠಾರಗಳಲ್ಲಿ, ಅಡುಗೆಮನೆಗಳಲ್ಲಿ ಚರ್ಚಿತವಾಗುತ್ತಿರುವ ಬಹುಚರ್ಚಿತ ವಿಷಯ. ಬಹುತೇಕ ಕಡೆಗಳಲ್ಲಿ ರಾಹುಲ್ ಗಾಂಧಿ ಅವರನ್ನು ಅಪಹಾಸ್ಯಕ್ಕೆ ಈಡು ಮಾಡಿದವರೇ ಹೆಚ್ಚು.
ಆದರೆ, ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಬುಧವಾರ ನಡೆದ ಸಂವಾದ ಕಾರ್ಯಕ್ರಮವನ್ನು ವೀಕ್ಷಿಸಿದ ವಿದ್ಯಾರ್ಥಿನಿಯೊಬ್ಬರು ಫೇಸ್ ಬುಕ್ ನಲ್ಲಿ ಪ್ರಕಟಿಸಿದ ಸುದೀರ್ಘ ಪತ್ರ ಈ ಸಂವಾದದ ಪಾಸಿಟಿವ್ ಸೈಡನ್ನು ತೆರೆದಿಟ್ಟಿದೆ. ಎಲೆಕ್ಸಿರ್ ನಹಾರ್ ಎಂಬ ಯವತಿ ಬರೆದ ಲೇಖನ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರಾಹುಲ್ ಗಾಂಧಿ ಅವರು ಸ್ವಚ್ಛ ಭಾರತ ಅಭಿಯಾನ ಮತ್ತು ಮೇಕ್ ಇನ್ ಇಂಡಿಯಾದ ಬಗ್ಗೆ ಕೇಳಿದ ಪ್ರಶ್ನೆಗೆ ವಿದ್ಯಾರ್ಥಿ ಸಮೂಹದಿಂದ ಬಂದ ಕೂಗನ್ನು 'ತೀರ ಅತೀ' ಎನ್ನುವಂತೆ ಚರ್ಚಿಸಲಾಗುತ್ತಿದೆ ಎಂಬುದು ಆಕೆಯ ನಿಲುವು. ತನ್ನ ವಾದಕ್ಕೆ ಪುಷ್ಟಿ ನೀಡುವಂತೆ, ಪ್ರಸಾದ್ ಬಿದ್ದಪ್ಪ ಮಾಡೆಲ್ ಮ್ಯಾನೇಜ್ಮೆಂಟ್ ನಲ್ಲಿ ರೂಪದರ್ಶಿ ಆಗಿದ್ದ ಎಲೆಕ್ಸಿರ್, ಲೇಖನಕ್ಕೆ ಭಾರೀ ಪ್ರಶಂಸೆಯೂ ವ್ಯಕ್ತವಾಗುತ್ತಿದೆ. [ರಾಹುಲ್, ನೀವು ಹೇಳಿದ್ದಕ್ಕೆಲ್ಲ ಜೈ ಅನ್ನುವವರಲ್ಲ ನಾವು!]

ರಾಹುಲ್ ಗಾಂಧಿ ಅವರು, 'ಸ್ವಚ್ಛ ಭಾರತ ಯಶಸ್ವಿಯಾಗಿದೆಯೆ?' ಎಂದಿದ್ದಕ್ಕೆ, ಗುಂಪಿನಿಂದ 'ಹೌದು/ಇಲ್ಲ' ಎಂಬ ಕೂಗು ಕೇಳಿಬಂದಿತ್ತು. ಮೇಕ್ ಇನ್ ಇಂಡಿಯಾ ಕುರಿತು ಕೇಳಿದ ಇದೇ ರೀತಿಯ ಪ್ರಶ್ನೆಗೂ 'ಹೌದು/ಇಲ್ಲ' ಎಂಬ ವಿದ್ಯಾರ್ಥಿನಿಯರ ಕೂಗಿಗೆ ರಾಹುಲ್ ಕಕ್ಕಾಬಿಕ್ಕಿಯಾಗಿದ್ದರು ಮತ್ತು ಮುಜುಗರಕ್ಕೊಳಗಾಗಿದ್ದರು.
'ಬೆಂಗಳೂರಿನ ಹುಡುಗಿಯರು ತುಂಬಾ ಸ್ಮಾರ್ಟ್ ರಾಹುಲ್, ಮತ್ತೆ ಯಾವುದಾದರೂ ಕಾಲೇಜಿಗೆ ಹೋಗುವ ಮುನ್ನ ಯೋಚಿಸಿ' ಎಂಬೆಲ್ಲ ಟ್ವೀಟುಗಳು ಹರಿದಾಡತೊಡಗಿದ್ದವು. ಸ್ಕ್ರಿಪ್ಟ್ ಇಲ್ಲದಿದ್ದರೆ ಇಂಥ ಅವಘಡ ಸಂಭವಿಸುತ್ತದೆ ಎಂದು ಮಾತಾಡುವವರಿಗೆ ಎಲೆಕ್ಸಿರ್ ನಹಾರ್ ಮಾತಿನ ಪ್ರಹಾರ ಮಾಡಿದ್ದಾರೆ. ಅವರು ಇನ್ನೂ ಏನೇನು ಹೇಳಿದ್ದಾರೆ ಕೆಳಗಿನ ಅವರ ಸ್ಟೇಟಸ್ ಓದಿರಿ. [ಅಂಗೈ ತೋರಿಸಿ ಅವಲಕ್ಷಣ ಎನ್ನಿಸಿಕೊಂಡ ರಾಹುಲ್!]
An Open Letter to #RahulStumped Enthusiasts Those ‘No Ragging’ posters you vaguely see around educational institutions...
Posted by Elixir Nahar on25 November 2015
-
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
ಯುಗಾದಿ, ರಂಜಾನ್ ಹಬ್ಬಕ್ಕೆ 2000 ವಿಶೇಷ ಬಸ್: ಮುಂಗಡ ಟಿಕೆಟ್ ಗೆ ರಿಯಾಯ್ತಿ ಘೋಷಿಸಿದ KSRTC -
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Anushka Shetty Marriage: ಬೆಂಗಳೂರಿನ ಖ್ಯಾತ ಉದ್ಯಮಿ ಜೊತೆ ನಟಿ ಅನುಷ್ಕಾ ಶೆಟ್ಟಿ ಮದುವೆ, ಈ ವರ್ಷದಲ್ಲೇ ಮುಹೂರ್ತ: ವರದಿ -
1 ರೂಪಾಯಿಗೆ 1 ಲೀಟರ್ ಹಾಲು: ಫ್ಲಿಪ್ಕಾರ್ಟ್ ವಿರುದ್ಧ ಸಿಡಿದೆದ್ದ ಡಿ.ಕೆ. ಸುರೇಶ್; ಪ್ರಧಾನಿ ಮೋದಿಗೆ ದೂರು












Click it and Unblock the Notifications