ರಾಜಾಕಾಲುವೆಗೆ ಕೊಚ್ಚಿ ಹೋಗಿದ್ದ ಅರ್ಚಕನ ಮೃತ ದೇಹ ಪತ್ತೆ
ಬೆಂಗಳೂರು, ಅಕ್ಟೋಬರ್ 14 : ನಿನ್ನೆ (ಶುಕ್ರವಾರ) ರಾತ್ರಿ ಸುರಿದ ಭಾರೀ ಮಳೆಗೆ ರಾಜಾಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಅರ್ಚಕ ವಾಸುದೇವ್ ಭಟ್ ಮೃತ ದೇಹ ಇಂದು (ಶನಿವಾರ) ಬೆಳಗ್ಗೆ ಪತ್ತೆಯಾಗಿದೆ.

In Pics : ಬೆಂಗಳೂರನನ್ನು ಮುಳುಗಿಸಿದ ಪ್ರಳಯಸದೃಶ ಮಳೆ
ಸತತ ಹನ್ನೆರಡು ಗಂಟೆಗಳ ಕಾಲ ನಡೆಸಿದ ಕಾರ್ಯಚರಣೆ ಬಳಿಕ ಸುಮನಹಗಳ್ಳಿ ಬ್ರಿಡ್ಜ್ ಬಳಿ ವಾಸುದೇವ್ ಭಟ್ ಶವ ಪತ್ತೆಯಾಗಿದ್ದು, ವಾಸುದೇವ್ ಅವರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಕುರುಬರ ಹಳ್ಳಿ ವಾರ್ಡ್ ನ ಎಚ್.ಬಿ.ಕೆ ಲೇಔಟ್ ಸಮೀಪದ ವೆಂಕಟರಮಣ ಸ್ವಾಮಿ ದೇಗುಲದ ಬಳಿ ಶುಕ್ರವಾರ ರಾತ್ರಿ ರಾಜಾಕಾಲುವೆಯಲ್ಲಿ ಅರ್ಚಕ ವಾಸುದೇವ್ ಕೊಚ್ಚಿ ಹೋಗಿದ್ದರು.












Click it and Unblock the Notifications