ಮಕ್ಕಳ ದಿನಾಚರಣೆ ವಿಶೇಷ: ಸ್ವರಾಗ ಸಂಗೀತ ಸಂಜೆ
ಬೆಂಗಳೂರು, ನ.09: ಪ್ರಕಸಂ ತನ್ನ ಹೊಸ ಪ್ರಯತ್ನದಲ್ಲಿ ಯುವ ಹಾಗು ನವಪ್ರತಿಭೆಗಳಿಗೆ ರಂಗದ ಮೇಲೆ ಹಾಡುವ ಅವಕಾಶ ಕಲ್ಪಿಸಿಕೊಡುತ್ತಿದೆ.
ತರಬೇತಿ ಪಡೆದ ನಮ್ಮ ಸ್ವರಾಗಿಗಳು ಒಂದು ಗಂಟೆಯ ಸಂಗೀತ ಸಂಭ್ರಮದ ಸಂಜೆಯನ್ನು ನಿಮಗಾಗಿ ಪ್ರಸ್ತುತ ಪಡಿಸಲಿದ್ದಾರೆ. ಸುಗಮ ಸಂಗೀತ, ಭಾವಗೀತೆ, ಸಿನಿಮಾ ಸಂಗೀತ, ರಂಗ ಗೀತೆ, ಘಜಲ್ ಹೀಗೆ ಹಲವು ರೀತಿಯ ಗಾಯನವನ್ನು ನಿಮ್ಮ ಮುಂದೆ ಪ್ರದರ್ಶಿಸಲು ಹಲವು ದಿನಗಳ ತಯಾರಿ ನಡೆಸಿ ಹಿಂದೆಂದೂ ನೀಡಿರದ ಹೊಸ ಅನುಭವ ನೀಡಲು ಮುಂದಾಗಿದ್ದಾರೆ ಈ ನಮ್ಮ ಯುವ ಸ್ವರಾಗಿಗಳು. ಬನ್ನಿ, ಕೇಳಿ, ಹರಸಿ ಹಾರೈಸಿ, ಹಾಡಿ ನಲಿಯಿರಿ.
ಶೃತಿ ಮತ್ತು ತಾಳಜ್ಞಾನದ ಅರಿವಿರುವ 16 ಅಭ್ಯರ್ಥಿಗಳನ್ನು ಜುಲೈ ತಿಂಗಳಲ್ಲಿ ನಡೆದ ಆಡಿಷನ್ಸ್ ಮೂಲಕ ಆಯ್ಕೆ ಮಾಡಲಾಯಿತು. ಸಮಾಜದ ವಿವಿಧ ವರ್ಗಗಳಿಂದ ಅಂದರೆ ವಿದ್ಯಾರ್ಥಿಗಳಿಂದ ಹಿಡಿದು, ಮನೆಯೊಡತಿಯರ ವರೆಗೆ, ಸಂಗೀತಗಾರರಿಂದ ಹಿಡಿದು ಅಭಿಯಂತರರವರೆಗೆ ಎಲ್ಲಾ ರೀತಿಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು.
ಅವರಿಗೆ ನಮ್ಮ ತಂಡದವರೇ ಆದ ಸಂಗೀತಗಾರರಾದ ರಂಜಿತ, ಸುಜಯ್, ನಿಖಿಲ್ ಮತ್ತು ರೋಹಿಣಿ ಅವರಿಂದ ಶಿಬಿರದಲ್ಲಿ ತರಬೇತಿ ನೀಡಿಲಾಯಿತು. ಇದಕ್ಕೆ ನಮ್ಮ ವಾದ್ಯವೃಂದದ ಕಾರ್ತಿಕ್, ಅಕ್ಷಯ್, ಅರ್ಪಿತ್, ಮತ್ತು ಸುಹಾಸ್ ರವರ ಸಹಾಯವು ಪೂರಕವಾಗಿತ್ತು.

ಸಂಗೀತ ನಿರ್ದೇಶಕರ ಮಾರ್ಗದರ್ಶನ: ಈ ಶಿಬಿರಗಳಲ್ಲಿ ವಿಶೇಷ ಅತಿಥಿಗಳಾಗಿ ಸಂಗೀತ ಜಗತ್ತಿನ ಹಿರಿಯ ಮತ್ತು ಪ್ರಖ್ಯಾತ ಸಂಗೀತಗಾರರು ಭಾಗವಹಿಸಿದ್ದು ನವಪ್ರತಿಭೆಗಳಿಗೆ ಮಾರ್ಗದರ್ಶನ ನೀಡಿದರು. ಇದರಲ್ಲಿ ಪ್ರಮುಖವಾಗಿ ವಿ.ಮನೋಹರ್, ಶ್ರೀಧರ್ ಸಂಭ್ರಮ್, ಮತ್ತು ಸಿಂಚನ್ ದೀಕ್ಷಿತ್ ಯುವಪ್ರತಿಭೆಗಳೊಡನೆ ಕೆಲಸಮಯ ಕಳೆದು ಅವರನ್ನು ಹುರಿದುಂಬಿಸಿದರು.
ದಿನಾಂಕ ಮತ್ತು ಸಮಯ - ನವೆಂಬರ್ 14 ಭಾನುವಾರ ಸಂಜೆ 6:00 ಮತ್ತು 7:30ಕ್ಕೆ
ಸ್ಥಳ: ಕೆಂಗಲ್ ಹನುಮಂತಯ್ಯ ಕಲಾಸೌಧ, ರಾಮಾಂಜನೇಯ ದೆವಸ್ಥಾನದ ಆವರಣ, ಹನುಮಂತನಗರ, ಬೆಂಗಳೂರು.
ವಿವರಗಳಿಗಾಗಿ ಸಂಪರ್ಕಿಸಿ: ನಿಖಿಲ್ 9972315173 | www.prakasamtrust.org/ss
ಪ್ರದರ್ಶನ ಕಲಾ ಸಂಸ್ಥೆ: ಪ್ರಕಸಂ ಪ್ರದರ್ಶನಕಲೆಗಳ ಪ್ರಚಾರ, ಪಾಲನೆ, ಪೋಷಣೆ, ನಿರೂಪಣೆ ಹಾಗು ನಿರ್ವಹಿಸಲು ಪಣ ತೊಟ್ಟಿರುವ ಸಂಸ್ಥೆ. ಕಲಾಸೇವೆಗಾಗಿ ಪ್ರಕಸಂ ಕೆಂಗಲ್ ಹನುಮಂತಯ್ಯ ಕಲಾಸೌಧದ ನಿರ್ವಹಣೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಗುತ್ತಿಗೆಗೆ ಪಡೆದುಕೊಂಡು ಪ್ರದರ್ಶನ ಕಲೆಗಳಾದ ನಾಟಕ, ನೃತ್ಯ, ಸಂಗೀತ ಮತ್ತು ಚಲನಚಿತ್ರಗಳ ಆಯಾಮಗಳ ಪರಿಚಯವನ್ನು ಬಸವನಗುಡಿಯ ಹಾಗು ಬೆಂಗಳೂರಿನ ಸಹೃದಯಿ ನಾಗರೀಕರರಿಗೆ ಪ್ರಸ್ತುತ ಪಡಿಸಿದೆ.
ಯುವಜನರನ್ನು ಪ್ರೋತ್ಸಾಹಿಸಿ ರಂಗಭೂಮಿಗೆ ಹೊಸ ಪ್ರೇಕ್ಷಕವರ್ಗವನ್ನು ಸೃಷ್ಟಿಸಲು ಅನುಪಮ ಪ್ರದರ್ಶನ ಕಲಾ ಪ್ರಯೋಗಗಳನ್ನು ನಿರ್ಮಿಸುತ್ತ ಬಂದಿದೆ. ಈ ರಂಗಮಂಚದ ಮೇಲೆ ಪ್ರಪಂಚದ ಎಲ್ಲಾ ಭಾಗಗಳಿಂದ ಕಲಾವಿದರು ಬಂದು ತಮ್ಮ ಅನನ್ಯ ಕಲಾಜ್ಯೋತಿಯನ್ನು ಬೆಳಗಿಸಿದ್ದಾರೆ. ಜನವರಿ 2010ರಿಂದ ಜನವರಿ 2014ರವರಗೆ 1800ಕ್ಕೂ ಹೆಚ್ಚು ಕಲಾ ಪ್ರದರ್ಶನಗಳಾಗಿವೆ. (ಒನ್ ಇಂಡಿಯಾ ಸುದ್ದಿ)
-
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ?












Click it and Unblock the Notifications