Power cut: ಡಿ.13ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಇಲ್ಲ: BESCOM
ಬೆಂಗಳೂರು, ಡಿಸೆಂಬರ್ 12: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ದಿಂದ ಬೆಂಗಳೂರಿನಲ್ಲಿ ಮಂಗಳವಾರ (ಡಿ.13) ನಿರ್ವಹಣಾ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ನಾಲ್ಕು ಗಂಟೆಗಳ ಕಾಲ ನಗರದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿದೆ.
ಬಾಣಸವಾಡಿ ವಿದ್ಯುತ್ ಕೇಂದ್ರ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ನಡೆಯಲಿದೆ. ಹೀಗಾಗಿ ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ತಿಳಿಸಿದೆ.
30 ಸಾವಿರ ವಿದ್ಯುತ್ ಚಾಲಿತ ಬಸ್ಗಳನ್ನಾಗಿ ಪರಿವರ್ತನೆಗೆ ನಿರ್ಧಾರ: ಹಿರಿಯೂರಿನಲ್ಲಿ ರಾಮುಲು ಭರವಸೆ
ಬೆಂಗಳೂರಿನ ಯಾವ ಯಾವ ಬಡಾವಣೆಗಳಲ್ಲಿ ವಿದ್ಯುತ್ ಸ್ಥಗಿತಗೊಳ್ಳಲಿದೆ ಎಂಬುದರ ಸಮಗ್ರ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.
ವಿದ್ಯುತ್ ಕಡಿತ ಪ್ರದೇಶಗಳು: ಹೊರಮಾವು, ಪಿ ಆಂಡ್ ಟಿ ಲೇಔಟ್, ನಿಸರ್ಗ ಕಾಲೋನಿ, ನಂದನಂ ಕಾಲೋನಿ, ಆಶೀರ್ವಾದ ಕಾಲೋನಿ, ಜ್ಯೋತಿನಗರ, ಅಗರ, ಬಾಲಾಜಿ ಬಡಾವಣೆ, ಚಿನ್ನಸ್ವಾಮಪ್ಪ ಲೇಔಟ್, ದೇವಮಠ ಶಾಲೆ, ಅಮರ್ ರೀಜೆನ್ಸಿ, ವಿಜಯಾ ಬ್ಯಾಂಕ್ ಕಾಲೋನಿ ಎಕ್ಸ್ಟಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಹಲವು ಪ್ರದೇಶಗಳಲ್ಲಿ ವಿದ್ಯುತ್ ಸ್ಥಗಿತ
ಎಚ್ಆರ್ಬಿಆರ್ ಲೇಔಟ್, 3ನೇ ಬ್ಲಾಕ್, ಕಾಮನಹಳ್ಳಿ ಮುಖ್ಯ ರಸ್ತೆ, ಕಲ್ಯಾಣನಗರ, ಬಿಡಬ್ಲ್ಯೂಎಸ್ಎಸ್ಬಿ ವಾಟರ್ ಟ್ಯಾಂಕ್, ಹೆಣ್ಣೂರು ಗ್ರಾಮ, ಚೇಳಿಕೆರೆ, ಮೇಗಾನ ಪಾಳ್ಯ, ಗೆದ್ದಲ ಹಳ್ಳಿ, ಕೊತ್ನೂರು, ವಡರ ಪಾಳ್ಯ, ಜಾನಕಿರಾಮ್ ಬಡಾವಣೆ, ಕೊತ್ತನೂರು, ಬಿಡಿಎಸ್ ಗಾರ್ಡನ್, ಬೆನ್ ಸತ್ಯ ಎನ್ಕ್ಲೇವ್, ಬೆನ್ ಸತ್ಯ ಎನ್ಕ್ಲೇವ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು. ಹೊಯ್ಸಳನಗರ, ಬೃಂದಾವನ ಬಡಾವಣೆ, ಜಯಂತಿ ನಗರ, ವಿನಾಯಕ ಲೇಔಟ್, ವಿವೇಕಾನಂದ ಬಡಾವಣೆ, ಮಂಜುನಾಥ್ ನಗರ, ಎನ್ಆರ್ಐ ಲೇಔಟ್, ರಿಚಸ್ ಗಾರ್ಡನ್, ಸುಂದರಾಂಜನೇಯ ದೇವಸ್ಥಾನ, ಡಬಲ್ ರೋಡ್, ಪುಣ್ಯಭೂಮಿ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ವಡ್ಡರಪಾಳ್ಯ ಹಾಗೂ ಇನ್ನಿತರ ಕಡೆ ನಾಳೆ ವಿದ್ಯುತ್ ಇಲ್ಲ
ವಡ್ಡರಪಾಳ್ಯ, ಚೇಳಿಕೆರೆ ಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶಗಳು. ಎಚ್ಬಿಆರ್ ಲೇಔಟ್ 2, 3ನೇ ಬ್ಲಾಕ್, ಸಮದ್ ಲೇಔಟ್, ಯಾಸಿನ್ ನಗರ, ಎಚ್ಆರ್ಬಿಆರ್ 1ನೇ ಬ್ಲಾಕ್, ಪಿಎನ್ಎಸ್ ಲೇಔಟ್, ಕುಳ್ಳಪ್ಪ ಸರ್ಕಲ್, ರಾಜ್ ಕುಮಾರ್ ಪಾರ್ಕ್, ಸಂಗೊಳ್ಳಿ ರಾಯಣ್ಣ ರಸ್ತೆ, ನೆಹರು ರಸ್ತೆ, ಎಚ್ಆರ್ಬಿಆರ್ 1ನೇ ಬ್ಲಾಕ್, ಎಚ್ಬಿಆರ್ 2ನೇ ಬ್ಲಾಕ್, 80 ಅಡಿ ರಸ್ತೆ, ಕಮ್ಮನಹಳ್ಳಿ ಮುಖ್ಯ ರಸ್ತೆ, ಮರಿಯಪ್ಪ ಸರ್ಕಲ್, ಕೆ ಎಚ್ಆರ್ಳ್ಳಿ ಡಿಪೋ 3ನೇ ಬ್ಲಾಕ್, ಸಿಎಂಆರ್ ರಸ್ತೆ, ನಂಜುಂಡಪ್ಪ ರಸ್ತೆ, ಕರವಳ್ಳಿ ರಸ್ತೆ, ರಾಮಯ್ಯ ಬಡಾವಣೆ, ಅಜಮಲ್ಲಪ್ಪ ಲೇಔಟ್, ದೊಡ್ಡ ಬಾಣಸವಾಡಿ, ವಿಜಯ ಬ್ಯಾಂಕ್ ಕಾಲೋನಿ, ರಾಮಮೂರ್ತಿ ನಗರ ಮುಖ್ಯರಸ್ತೆ, ಕೃಷ್ಣಾ ರೆಡ್ಡಿ ಬಡಾವಣೆ.
4ತಾಸು ಈ ಬಡಾವಣೆಗಳಲ್ಲೂ ಕರೆಂಟ್ ಕಟ್
ಗೊಪ್ಪಲ್ ರೆಡ್ಡಿ ಬಡಾವಣೆ, ಚಿಕ್ಕ ಬಾಣಸವಾಡಿ, ಸುಬ್ಬಯ್ಯನ ಪಾಳ್ಯ, ದೊಡ್ಡ ಬಾಣಸವಾಡಿ, 100 ಅಡಿ ರಸ್ತೆ ಬಾಣಸವಾಡಿ, ಗ್ರೀನ್ ಪಾರ್ಕ್ ಲೇಔಟ್, ಫ್ಲವರ್ ಗಾರ್ಡನ್, ಎಂಎಂ ಗಾರ್ಡನ್, ದಿವ್ಯ ಉನ್ನತಿ ಲೇಔಟ್, ಪ್ರಕೃತಿ ಟೌನ್ ಶಿಪ್, ಮಲ್ಲಪ್ಪ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು. ಬೈರತಿ, ಹೆಣ್ಣೂರು, ಚಳ್ಳಕೆರೆ, ವಡ್ಡರಪಾಳ್ಯ, ಗೆಡ್ಲಹಳ್ಳಿ, ಮತ್ತು ಸುತ್ತಮುತ್ತಲಿನ ಪ್ರದೇಶಗಳು. ಕ್ಯಾಲಸನಹಳ್ಳಿ ಗ್ರಾಮ, ನಕ್ಷತ್ರ ಲೇಔಟ್, ಸಂಗಮ್ ಎನ್ಕ್ಲೇವ್, ಆತ್ಮ ವಿದ್ಯಾನಗರ, ಬೈರತಿಗ್ರಾಮ, ಕನಕಶ್ರೀ ಬಡಾವಣೆ, ಗುಬ್ಬಿ ಕ್ರಾಸ್, ಬಾಬುಸಾಪಾಳ್ಯ, ಬ್ಯಾಂಕ್ ಅವೆನ್ಯೂ ಲೇಔಟ್, ನಂಜಪ್ಪ ಗಾರ್ಡನ್, ಸಿಎನ್ಆರ್ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಈ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸಮಸ್ಯೆ
ಕಾಮನಹಳ್ಳಿ ಮುಖ್ಯ ರಸ್ತೆ, ಆರ್ ಎಸ್ ಪಾಳ್ಯ , ಮುನಿಕಲ್ಲಪ್ಪ ಗಾರ್ಡನ್, ಹನುಮಂತಪ್ಪ ರಸ್ತೆ, ಮುನ್ನೇಗೌಡ ರಸ್ತೆ, ಸತ್ಯ ಮೂರ್ತಿ ರಸ್ತೆ, ಜೆವಿ ಶೆಟ್ಟಿ ರಸ್ತೆ, ಕುವೆಂಪು ರಸ್ತೆ, ಸದಾಶಿವ ದೇವಸ್ಥಾನ ರಸ್ತೆ, ಗುರುಮೂರ್ತಿ ರಸ್ತೆ, ಗುಳ್ಳಪ್ಪ ರಸ್ತೆ, ಕಾಮನಹಳ್ಳಿ ಸಂಪನ್ನ ರಸ್ತೆ ಎಡಿಎಂಸಿ ಮಿಲಿಟರಿ, ಚಿಕ್ಕ ಬಾಣಸವಾಡಿ ಮತ್ತು ಸುಬ್ಬಯ್ಯನ ಪಾಳ್ಯ, ಪಿಲ್ಲಾ ರೆಡ್ಡಿ ನಗರ, ಬಿ ಚನ್ನಸಂದ್ರ, ಡಾಕ್ಟರ್ ಲೇಔಟ್, ಕಸ್ತೂರಿ ನಗರ, ಓಎಂಬಿಆರ್ ಲೇಔಟ್ ಮತ್ತು 5ನೇ ಕ್ರಾಸ್, ಬೃಂದಾವನ ಲೇಔಟ್, ಬಂಜಾರಾ ಬಡಾವಣೆ, ಖಾನೆ ರಸ್ತೆ, ಎನ್ಪಿಎಸ್, ಬೆತೆಲ್ ಲೇಔಟ್, ಸಮೃದ್ಧಿ ಲೇಔಟ್, ವಾಟರ್ ಟ್ಯಾಂಕ್, ಕಲ್ಕೆರೆ, ಜಯಂತಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.