Bengaluru: ಸಹದ್ಯೋಗಿ ಮೇಲಿನ ಸಿಟ್ಟಿನಿಂದ ಕಂಪನಿಗೆ ಬಾಂಬ್ ಬೆದರಿಕೆ ಹಾಕಿದ್ದ ನೌಕರನ ಬಂಧನ, ಘಟನೆ ಮಾಹಿತಿ?
ಬೆಂಗಳೂರು, ಜೂನ್ 14: ಸಿಲಿಕಾನ್ ಸಿಟಿ ಬೆಂಗಳೂರಿನ ಕಂಪನಿಯೊಂದರಲ್ಲಿ ಸಹದ್ಯೋಗಿ ಒಬ್ಬರ ಮೇಲಿನ ಸಿಟ್ಟಿನಿಂದಾಗಿ ಉದ್ಯೋಗಿಯೊಬ್ಬ ತನ್ನ ಕಂಪನಿಗೇ ಹುಸಿ ಬಾಂಬ್ ಕರೆ ಮಾಡಿದ ಘಟನೆ ಮಂಗಳವಾರ ನಡೆದಿದೆ. ಸದ್ಯ ಆ ಉದ್ಯೋಗಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಉದ್ಯೋಗಿ ಪ್ರಸಾದ್ ನವನೀತ್ (25) ಮೂಲತಃ ಕೇರಳದವನಾಗಿದ್ದು, ಸದ್ಯಕ್ಕೆ ಆತ ಬೈಯಪ್ಪನಹಳ್ಳಿಯಲ್ಲಿ ವಾಸಿಸುತ್ತಿದ್ದಾನೆ. ಈತನೇ ಹುಸಿ ಬಾಂಬ್ ಕರೆ ಮಾಡಿದ್ದಾನೆ. ಬೆಂಗಳೂರಿನ ಬೆಳ್ಳಂದೂರಿನ ಇಕೋಸ್ಪೇಸ್ನಲ್ಲಿರುವ ಎಂಎನ್ಸಿ ಕಂಪನಿಗೆ ಮಂಗಳವಾರ ಬಾಂಬ್ ಕರೆ ಬಂದಿತ್ತು. ಹೀಗಾಗಿ ಕೆಲ ಕಾಲ ಕಚೇರಿಯಲ್ಲಿನ ಉದ್ಯೋಗಿ ಮತ್ತು ಸಿಬ್ಬಂದಿ ಭಯ ಬೀತರಾದರು.

ಬಂಧಿತ ಪ್ರಸಾದ್ ನವನೀತ್ ತನ್ನ ಸಹದ್ಯೋಗಿಯೊಬ್ಬರ ಮೇಲೆ ದ್ವೇಷ ಸಾಧಿಸುತ್ತಿದ್ದ. ಈ ಸಂಬಂಧ ಮ್ಯಾನೇಜರ್ ಕರೆ ಮಾಡಿ ದೂರು ನೀಡಲು ಮುಂದಾಗಿದ್ದ. ಆದರೆ ಕಂಪನಿಯು ಮ್ಯಾನೇಜರ್ಗೆ ಕರೆ ಕರೆ ಕನೆಕ್ಟ್ ಮಾಡಲಿಲ್ಲ. ನವನೀತ್ ಮನವಿಯನ್ನು ಕಂಪನಿ ತಿರಸ್ಕೃಸಿತ್ತು.
ಹಲವು ಭಾರಿ ಕರೆ ಮಾಡಿ ಪ್ರಯತ್ನಿಸಿದರೂ ಫೋನ್ ಕನೆಕ್ಟ್ ಆಗದಿದ್ದಾಗ ನವನೀತ್ ಕೋಪಗೊಂಡಿದ್ದಾನೆ. ಬಳಿಕ ಕಚೇರಿಯಲ್ಲಿ ಬಾಂಬ್ ಇರಿಸಿದ್ದು, ಅದು 30 ನಿಮಿಷಗಳಲ್ಲಿ ಸ್ಪೋಟಗೊಳ್ಳಲಿದೆ ಎಂದು ಹೇಳಿ ಕರೆ ಕಟ್ ಮಾಡಿದ್ದ ಎನ್ನಲಾಗಿದೆ.
ಕಂಪನಿಗೆ ದೌಡಾಯಿಸಿದ ಭದ್ರತಾ ಸಿಬ್ಬಂದಿ
ಅಲರ್ಟ್ ಆದ ಇಕೋಸ್ಪೇಸ್ ಕಂಪನಿ ಆಡಳಿತ ಮಂಡಳಿ ಪೊಲೀಸರಿಗೆ ಬಾಂಬ್ ಕರೆ ಬಗ್ಗೆ ಸುದ್ದಿ ಮುಟ್ಟಿಸಿತ್ತು. ಸ್ಥಳಕ್ಕೆ ಬಂದ
ವಿಧ್ವಂಸಕ ವಿರೋಧಿ ತಂಡ, ಬಾಂಬ್ ನಿಷ್ಕ್ರಿಯ ದಳ, ಸ್ಥಳೀಯ ಪೊಲೀಸರು ಮತ್ತು ನಗರ ಗುಪ್ತಚರ ಹಾಗೂ ಆಂತರಿಕ ಭದ್ರತಾ ವಿಭಾಗ ತಂಡದ ಸದಸ್ಯರು ಪರಿಶೀಲಿಸಿದರು.
ವಿವಿಧ ವಿಭಾಗದ ಒಟ್ಟು 60 ಮಂದಿ ಸಿಬ್ಬಂದಿ ಕಚೇರಿ ಆವರಣವನ್ನೆಲ್ಲ ಶೋಧಿಸಿದರು. ಎಲ್ಲಿಯೂ ಬಾಂಬ್ ಬಗ್ಗೆ ಸಣ್ಣ ಸುಳಿವು ಸಿಗಲಿಲ್ಲ. ಅಲ್ಲಿಯೇ ಇದು ಹುಸಿ ಬಾಂಬ್ ಕರೆ ಎಂದು ಗೊತ್ತಾಗಿ, ಮಧ್ಯಾಹ್ನ 3 ಗಂಟೆಯ ವೇಳೆಗೆ ಕಚೇರಿಯಲ್ಲಿ ಬಾಂಬ್ ಇರುವುದು ಸುಳ್ಳು ಎಂದು ಅವರು ಘೋಷಿಸಿದರು.
ನವನೀತ್ ವಜಾಗೆ ಕಂಪನಿ ಚಿಂತನೆ
ಪೊಲೀಸ್ ಕರೆ ಮಾಡಿದ ವಿಷಯ ತಿಳಿಸಿದ ಬಳಿಕ ನವನೀತ್ ಕರೆ ಮಾಡಿ ನಾನು ಸುಳ್ಳು ಬಾಂಬ್ ಕರೆ ಮಾಡಿದ್ದಾಗಿ ಹೇಳಿದ್ದಾನೆ. ಸದ್ಯ ಆತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗಿ ಸಹದ್ಯೋಗಿ ಮೇಲಿನ ದ್ವೇಷ, ದೂರು ನೀಡಲು ಕರೆ ಮಾಡಿದಾಗ ಕನೇಕ್ಟ್ ಆಗದ್ದಕ್ಕೆ ಕೋಪಗೊಂಡು ಹೀಗೆ ಹೇಳಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ನವನೀತ್ BDO-ರೈಸ್ ಜೊತೆ ಹಿರಿಯ ಸಾಯಕರಾಗಿ ಕೆಲಸ ಮಾಡುತ್ತಿದ್ದರು. ತಮ್ಮ ವಲಯದಲ್ಲಿನ ಗ್ರಾಹಕರಿಗೆ ಸೇವೆ ಒದಗಿಸುತ್ತಿದ್ದರು. ಅವರ ಕಾರ್ಯಕ್ಷಮತೆಯ, ವರ್ತನೆ ಆಧಾರದಲ್ಲಿ ಅವರನ್ನು ಕಚೇರಿಯಿಂದ ವಜಾಗೊಳಿಸಬೇಕು? ಬೇಡವಾ? ಎಂದು ಕಂಪನಿಯು ಚಿಂತನೆ ನಡೆಸುತ್ತಿದೆ.
ನವನೀತ್ ವಿರುದ್ಧ ಪೊಲೀಸರು ನಾನ್-ಕಾಗ್ನಿಜಬಲ್ ಪ್ರಕರಣ ದಾಖಲಿಸಿದ್ದಾರೆ. ನ್ಯಾಯಾಲಯದ ಅನುಮತಿಯ ಬಳಿಕ ಪ್ರಕರಣದ ದೂರನ್ನು ಎಫ್ಐಆರ್ ಗೆ ಪರಿವರ್ತಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ












Click it and Unblock the Notifications