ಟ್ರಾಫಿಕ್ ತಪ್ಪಿಸಲು ಹೊಸ ಕಾರಿಡಾರ್ ನಿರ್ಮಾಣಕ್ಕೆ ಡಿಸಿಎಂ ಅಸ್ತು
ಬೆಂಗಳೂರು, ಜುಲೈ.22: ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿಕಿರಿ ತಪ್ಪಿಸಲು 16 ಸಾವಿರ ಕೋಟಿ ವೆಚ್ಚದಲ್ಲಿ ನಾರ್ತ್, ಈಸ್ಟ್, ವೆಸ್ಟ್, ಸೌತ್ ನಲ್ಲಿ ಕಾರಿಡಾರ್ ನಿರ್ಮಿಸಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ಪರಮೇಶ್ವರ್ ಹೇಳಿದರು.
ಯಲಹಂಕದ ಮಧುರ ಮಿಲನ ಕನ್ವೇಷನ್ ಹಾಲ್ ನಲ್ಲಿ ಮಾನಸ ಗ್ರೂಪ್ ಆಫ್ ಹಾಸ್ಪಿಟಲ್ಸ್ ನಿಂದ ನಡೆದ ಡಾಕ್ಟರ್ಸ್ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ 5 ಸಾವಿರ ಕ್ಯಾಮರಾಗಳನ್ನು ಅಳವಡಿಸಲಾಗುತ್ತದೆ.
ಸಮಾಜದಲ್ಲಿ ಕೆಲವರು ಒಳ್ಳೆ ಯೋಜನೆಗಳಿಗೆ ಕಲ್ಲು ಹಾಕ್ತಿದ್ದಾರೆ. ಇದ್ರಿಂದ ಸಮಾಜಕ್ಕೆ ಒಳಿತಾಗಲ್ಲ ಎಂಬುದನ್ನು ತಿಳಿದುಕೊಳ್ಳಬೇಕು. ಯೋಜನೆಗಳು ಅನುಷ್ಠಾನವಾಗಲು ಸಹಕರಿಸಬೇಕು ಎಂದು ಪರೋಕ್ಷವಾಗಿ ಬಿಜೆಪಿ ಯನ್ನು ಟೀಕೆ ಮಾಡಿದರು.

ಕಾರ್ಯಕ್ರಮದಲ್ಲಿ ಶಾಸಕ ಎಸ್.ಆರ್.ವಿಶ್ವನಾಥ್, ಚಿಕ್ಕಬಳ್ಳಾಪುರ ಜಿಪಂ ಅಧ್ಯಕ್ಷ ಮಂಜುನಾಥ್ ರೆಡ್ಡಿ, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ನ ರಾಜ್ಯ ಅದ್ಯಕ್ಷ ಡಾ ಹೆಚ್ ಎನ್ ರವೀಂದ್ರ ಮತ್ತಿತರ ರು ಭಾಗವಹಿಸಿದ್ದರು.












Click it and Unblock the Notifications